Subscribe to Updates

    Get the latest creative news from FooBar about art, design and business.

    What's Hot

    ಖ್ಯಾತ ಸಾಹಿತಿ ಎಚ್. ಎಸ್. ವೆಂಕಟೇಶಮೂರ್ತಿ ನಿಧನ

    May 30, 2025

    ಬೇಸಿಗೆ ರಂಗ ಶಿಬಿರದ ವಿದ್ಯಾರ್ಥಿಗಳಿಂದ ‘ಆಷಾಢದ ಒಂದು ದಿನ’ ನಾಟಕ ಪ್ರದರ್ಶನ | ಮೇ 31

    May 30, 2025

    ಬೆಂಗಳೂರಿನ ವಾಡಿಯಾ ಸಭಾಂಗಣದಲ್ಲಿ ‘ಬೀಚಿ ರಸಾಯನ’ | ಮೇ 30

    May 29, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಕದಳಿ ಕಲಾ ಕೇಂದ್ರ’ದ 12ನೇ ವಾರ್ಷಿಕೋತ್ಸವ ಪ್ರಯುಕ್ತ ‘ಕದಳಿ ದಶಾಹ’ | ಅಕ್ಟೋಬರ್ 3ರಿಂದ 12
    Yakshagana

    ‘ಕದಳಿ ಕಲಾ ಕೇಂದ್ರ’ದ 12ನೇ ವಾರ್ಷಿಕೋತ್ಸವ ಪ್ರಯುಕ್ತ ‘ಕದಳಿ ದಶಾಹ’ | ಅಕ್ಟೋಬರ್ 3ರಿಂದ 12

    October 2, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಮಂಗಳೂರಿನ ಕದ್ರಿ ದೇವಸ್ಥಾನದ ಆವರಣದಲ್ಲಿರುವ ‘ಕದಳಿ ಕಲಾ ಕೇಂದ್ರ’ ಇದರ ವತಿಯಿಂದ ‘ಕದಳಿ ದಶಾಹ’ ಮಕ್ಕಳ ಹಾಗೂ ಯುವ ತಂಡಗಳಿಂದ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 03 ಅಕ್ಟೋಬರ್ 2024ರಿಂದ 12 ಅಕ್ಟೋಬರ್ 2024ರವರೆಗೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

    ದಿನಾಂಕ 03 ಅಕ್ಟೋಬರ್ 2024ರಂದು ಮಾಜಿ ರಾಜ್ಯಾಧ್ಯಕ್ಷರಾದ ಶ್ರೀ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ಮೂಡಬಿದರೆಯ ಶ್ರೀಪತಿ ಭಟ್ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿರುವರು. ಸಭಾ ಕಾರ್ಯಕ್ರಮದ ಬಳಿಕ ಉಡುಪಿ ಜಿಲ್ಲೆಯ ಪುತ್ತೂರಿನ ಶ್ರೀ ಭಗವತೀ ಯಕ್ಷ ಕಲಾ ಬಳಗ (ರಿ.) ಇವರಿಂದ ‘ನರಕಾಸುರ ಮೋಕ್ಷ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

    ದಿನಾಂಕ 04 ಅಕ್ಟೋಬರ್ 2024ರಂದು ಉಡುಪಿ ಜಿಲ್ಲೆಯ ಎಲ್ಲೂರಿನ ಶ್ರೀ ಪಂಚಾಕ್ಷರೀ ಮಕ್ಕಳ ಮೇಳ ಇವರಿಂದ ‘ಸ್ವಯಂ ಪ್ರಭಾ ಪರಿಣಯ’, ದಿನಾಂಕ 05 ಅಕ್ಟೋಬರ್ 2024ರಂದು ಕಾರ್ಕಳ ಲಕ್ಷ್ಮೀಪುರದ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ಯಕ್ಷಗಾನ ಮಂಡಳಿಯವರಿಂದ ‘ದಕ್ಷ ಯಜ್ಞ’, ದಿನಾಂಕ 06 ಅಕ್ಟೋಬರ್ 2024ರಂದು ಪುತ್ತೂರಿನ ಬಾಲವನದ ಶ್ರೀ ದೇವಿ ಮಹಿಳಾ ಯಕ್ಷ ತಂಡ ಇವರಿಂದ ‘ಶಶಿಪ್ರಭಾ ಪರಿಣಯ’ ಮತ್ತು ಪೇಜಾವರ ಪೊರ್ಕೊಡಿಯ ಯಕ್ಷಮಿತ್ರರು (ರಿ.) ಇವರಿಂದ ‘ಶ್ರೀ ರಾಮ ಚರಿತಾಮೃತಂ’, ದಿನಾಂಕ 07 ಅಕ್ಟೋಬರ್ 2024ರಂದು ಉರ್ವದ ಯಕ್ಷರಾಧನಾ ಕಲಾಕೇಂದ್ರ (ರಿ.) ಇವರಿಂದ ‘ರತಿ ಕಲ್ಯಾಣ’, ದಿನಾಂಕ 08 ಅಕ್ಟೋಬರ್ 2024ರಂದು ಮಂಗಳೂರಿನ ಶ್ರೀ ನಾಗಬ್ರಹ್ಮ ಯಕ್ಷ ಕಲಾ ಕೇಂದ್ರ ಕೋಡಿಕಲ್ ಇವರಿಂದ ‘ಇಂದ್ರಜಿತು ಕಾಳಗ’, ದಿನಾಂಕ 09 ಅಕ್ಟೋಬರ್ 2024ರಂದು ಮೂಡಬಿದಿರೆಯ ಶ್ರೀ ಯಕ್ಷನಿಧಿ (ರಿ.) ಇವರಿಂದ ‘ಶ್ವೇತ ಕುಮಾರ ಚರಿತ್ರೆ’, ದಿನಾಂಕ 10 ಅಕ್ಟೋಬರ್ 2024ರಂದು ಬಂಟ್ವಾಳದ ಶ್ರೀ ಮಹಿಷ ಮರ್ದಿನಿ ಯಕ್ಷ ಮಿತ್ರರು ಇವರಿಂದ ‘ಶ್ರೀ ದೇವಿ ಮಹಿಷ ಮರ್ದಿನಿ’, ದಿನಾಂಕ 11 ಅಕ್ಟೋಬರ್ 2024ರಂದು ಸುರತ್ಕಲ್ ಕೃಷ್ಣಾಪುರದ ಶ್ರೀ ಸಿದ್ಧಿವಿನಾಯಕ ಯಕ್ಷ ನಾಟ್ಯ ಕಲಾ ಕೇಂದ್ರದವರಿಂದ ‘ಲೀಲಾ ಮಾನುಷ ವಿಗ್ರಹ’, ದಿನಾಂಕ 12 ಅಕ್ಟೋಬರ್ 2024ರಂದು ಉರ್ವದ ಶ್ರೀ ಮಾರಿಯಮ್ಮ ಯಕ್ಷಗಾನ ಬಾಲ ಸಂಸ್ಕಾರ ಕೇಂದ್ರದವರಿಂದ ‘ಏಕಾದಶೀ ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ಹಾಗೂ ಸಂಜೆ 6-00 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ಸಾಧಕ ಸನ್ಮಾನ, ಸಮಾರೋಪ ಸಮಾರಂಭ ಹಾಗೂ ಕದಳಿ ಕಲಾ ಕೇಂದ್ರದ 12ನೇ ವಾರ್ಷಿಕೋತ್ಸವ ನಡೆಯಲಿದ್ದು, ಸಭಾ ಕಾರ್ಯಕ್ರಮದ ಬಳಿಕ ಕದಳಿ ಕಲಾ ಕೇಂದ್ರದವರಿಂದ ‘ಶ್ರೀ ದೇವಿ ಕದಂಬ ಕೌಶಿಕೆ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನ ಶಿವರಾಮ ಕಾರಂತ ಸಭಾ ಭವನದಲ್ಲಿ ಲೋಕಾರ್ಪಣೆಗೊಂಡ ‘ಪಡಿಯಕ್ಕಿ’
    Next Article ಬನಾರಿಯಲ್ಲಿ ಕೀರಿಕ್ಕಾಡು ಸುಬ್ರಹ್ಮಣ್ಯ ಭಟ್ ಸಂಸ್ಮರಣೆ ಹಾಗೂ ಯಕ್ಷಗಾನ ತಾಳಮದ್ದಳೆ
    roovari

    Comments are closed.

    Related Posts

    ಶ್ರವಣರಂಗ ಸವಣೂರು ವತಿಯಿಂದ ಯಕ್ಷಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ತಾಳಮದ್ದಳೆ

    May 29, 2025

    ಭಾಗವತ ಶ್ರೇಷ್ಠ ಕುರಿಯ ಗಣಪತಿ ಶಾಸ್ತ್ರಿಗಳಿಗೆ ಪ್ರತಿಷ್ಠಿತ ‘ಪಟ್ಲ ಪ್ರಶಸ್ತಿ 2025’ ಪ್ರದಾನ

    May 29, 2025

    ಸರಯೂ ಸಪ್ತಾಹದಲ್ಲಿ ರೊ. ಜೆ. ವಿ. ಶೆಟ್ಟರಿಗೆ ಸನ್ಮಾನ.

    May 29, 2025

    ಕೊಂಚಾಡಿಯ ನಾಗಕನ್ನಿಕಾದಲ್ಲಿ ‘ಯಕ್ಷ ಪಕ್ಷ’ ಸರಯೂ ರಜತ ಸಂಭ್ರಮದ ಸಮಾರೋಪ ಸಮಾರಂಭ

    May 29, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.