Subscribe to Updates

    Get the latest creative news from FooBar about art, design and business.

    What's Hot

    ‘ಗೆಳೆಯರ ಬಳಗ ಕಾರಂತ ಪುರಸ್ಕಾರ – 2025 ಪ್ರಶಸ್ತಿ’ಗೆ ಎಚ್. ಶಕುಂತಳಾ ಭಟ್ ಆಯ್ಕೆ

    September 17, 2025

    ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ‘ಸುವರ್ಣ ಪರ್ವ -13’ | ಸೆಪ್ಟೆಂಬರ್ 21

    September 17, 2025

    ಕಥೆಗಳು ಮನಸ್ಸಿನಲ್ಲಿ ಅನುರಣಿಸುವಂತೆ ಇರಬೇಕು – ಕಾಸರಗೋಡು ಚಿನ್ನ

    September 17, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ರಾಜಾಂಗಣದಲ್ಲಿ ಸಂಪನ್ನಗೊಂಡ ‘ಕದಳಿ ದಶಾಹ’
    Felicitation

    ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ರಾಜಾಂಗಣದಲ್ಲಿ ಸಂಪನ್ನಗೊಂಡ ‘ಕದಳಿ ದಶಾಹ’

    October 16, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಕದ್ರಿ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ವಾರ್ಷಿಕ ನವರಾತ್ರಿ ಉತ್ಸವದ ಪ್ರಯುಕ್ತ ಕದ್ರಿ ಶ್ರೀ ಮಂಜುನಾಥ ದೇವಳದ ಸಹಯೋಗದೊಂದಿಗೆ ಕದಳಿ ಕಲಾ ಕೇಂದ್ರ ಸಂಯೋಜಿಸಿದ 12ನೇ ವರ್ಷದ ‘ಕದಳಿ ದಶಾಹ’ ಮಕ್ಕಳ ಹಾಗೂ ಯುವ ತಂಡಗಳಿಂದ ಯಕ್ಷಗಾನ ಕಾರ್ಯಕ್ರಮವು ದಿನಾಂಕ 12 ಅಕ್ಟೋಬರ್ 2024ರಂದು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ರಾಜಾಂಗಣದಲ್ಲಿ ಸಂಪನ್ನಗೊಂಡಿತು.

    ಶ್ರೀ ಪಂಚಾಕ್ಷರಿ ಮಕ್ಕಳ ಮೇಳ ಎಲ್ಲೂರು ಉಡುಪಿ, ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ಯಕ್ಷಗಾನ ಮಂಡಳಿ ಲಕ್ಷ್ಮೀಪುರ ಕರ್ಕಳ, ಶ್ರೀ ದೇವಿ ಮಹಿಳಾ ಯಕ್ಷ ತಂಡ ಬಾಲವನ ಪುತ್ತೂರು, ಯಕ್ಷಮಿತ್ರರು (ರಿ.) ಪೊರ್ಕೊಡಿ ಪೇಜಾವರ, ಯಕ್ಷರಾಧನಾ ಕಲಾಕೇಂದ್ರ (ರಿ) ಉರ್ವ ಮಂಗಳೂರು, ಶ್ರೀ ನಾಗಬ್ರಹ್ಮ ಯಕ್ಷ ಕಲಾ ಕೇಂದ್ರ ಕೋಡಿಕಲ್ ಮಂಗಳೂರು, ಶ್ರೀ ಯಕ್ಷನಿಧಿ (ರಿ) ಮೂಡಬಿದಿರೆ, ಶ್ರೀ ಮಹಿಷ ಮರ್ದಿನಿ ಯಕ್ಷ ಮಿತ್ರರು ಪೂಂಜ ಬಂಟ್ವಾಳ, ಶ್ರೀ ಸಿದ್ಧಿವಿನಾಯಕ ಯಕ್ಷ ನಾಟ್ಯ ಕಲಾ ಕೇಂದ್ರ ಕೃಷ್ಣಾಪುರ ಸುರತ್ಕಲ್, ಶ್ರೀ ಮಾರಿಯಮ್ಮ ಯಕ್ಷಗಾನ ಬಾಲ ಸಂಸ್ಕಾರ ಕೇಂದ್ರ ಉರ್ವ ಮಂಗಳೂರು, ಕದಳಿ ಕಲಾ ಕೇಂದ್ರ ಮಂಗಳೂರು, ಶ್ರೀ ದೇವಿ ಯಕ್ಷ ಬಳಗ ಬಾಲವನ ಪುತ್ತೂರು ಈ ತಂಡಗಳಿಂದ ಯಕ್ಷಗಾನ ಕಾರ್ಯಕ್ರಮವು ಜರಗಿತು.

    ಇದೇ ಸಂದರ್ಭದಲ್ಲಿ ಕದ್ರಿಯ ಹವ್ಯಾಸಿ ಬಳಗದ ಸಂಚಾಲಕರಾದ ಶ್ರೀ ಶರತ್ ಕುಮಾರ್ ಕದ್ರಿ ಮತ್ತು ವೈಭವ ಕ್ರಿಯೇಟಿವ್ಸ್ ಇದರ ಮಾಲಕರಾದ ಶ್ರೀ ಬಾಲಕೃಷ್ಣ ಕದ್ರಿ ಇವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸುಧಾಕರ ರಾವ್ ಪೇಜಾವರ ಸ್ವಾಗತಿಸಿ, ಸಂಸ್ಥಾಪಕರಾದ ಶ್ರೀ ರಮೇಶ್ ಭಟ್ ಕೆ. ವಂದಿಸಿ ಹಾಗೂ ಶೋಭಾ ಪೇಜಾವರ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು, ಶ್ರೀ ವಾಸುದೇವ ಕಾಮತ್, ಶ್ರೀ ಗೋಕುಲದಾಸ ಕಾಮತ್, ಶ್ರೀ ರಘುರಾಮ್ ಕಾಮತ್, ಶ್ರೀ ಅಶೋಕ್ ಕಾಮತ್, ಶ್ರೀ ಡಾ. ಶುಭಾನಂದ ರಾವ್, ಶ್ರೀ ದಾಮೋದರ ರೈ, ಶ್ರೀ ಶ್ರೀನಾಥ್ ಕದ್ರಿ, ಶ್ರೀ ಶರತ್ ಕುಮಾರ್ ಕದ್ರಿ, ಶ್ರೀ ಬಾಲಕೃಷ್ಣ ಕದ್ರಿ, ಶ್ರೀ ಪ್ರದೀಪ ಕುಮಾರ ಕಲ್ಕೂರ, ಶ್ರೀ ಕೃಷ್ಣ ಅಡಿಗ ಕದ್ರಿ, ಶ್ರೀ ರಾಮ ಟ್ರಾನ್ಸ್ ಪೋರ್ಟ್ ಪೈನಾನ್ಸ್ ಲಿಮಿಟೆಡ್ ಮಂಗಳೂರು, ಶ್ರೀ ಸುಂದರ ಶೆಟ್ಟಿ ಬೆಟ್ಟಂಪಾಡಿ, ಶ್ರೀ ಜೆ.ವಿ. ಶೆಟ್ಟಿ, ಶ್ರೀ ಗೋಕುಲ ಕದ್ರಿ, ಶ್ರೀ ಅರುಣ್ ಕುಮಾರ ಗುರಿತೋಟ, ಶ್ರೀ ಸುಧೀರ್ ಕಾಮತ್, ಶ್ರೀಮತಿ ನಿವೇದಿತಾ ಶೆಟ್ಟಿ ಉಪಸ್ಥಿತರಿದ್ದರು. ಸುಮಾರು 13 ತಂಡಗಳಿಂದ 500 ಕಲಾವಿದರು ಭಾಗವಹಿಸಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನ ಪುರಭವನದಲ್ಲಿ ಹಿಂದುಸ್ತಾನಿ ಸಂಗೀತ ದಿಗ್ಗಜರ ಸಮಾಗಮ | ಅಕ್ಟೋಬರ್ 27
    Next Article ಧರ್ಮಸ್ಥಳದಲ್ಲಿ ಟಿ. ನಾರಾಯಣ ಭಟ್ ರಚಿಸಿದ ‘ನೆನಪುಗಳ ನೇವರಿಕೆ’ ಕೃತಿ ಲೋಕಾರ್ಪಣೆ
    roovari

    Add Comment Cancel Reply


    Related Posts

    ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ‘ಸುವರ್ಣ ಪರ್ವ -13’ | ಸೆಪ್ಟೆಂಬರ್ 21

    September 17, 2025

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಯಕ್ಷ ಸಂಕ್ರಾಂತಿ’ | ಸೆಪ್ಟೆಂಬರ್ 20

    September 17, 2025

    ಮೂಡುಬಿದಿರೆಯಲ್ಲಿ ‘ವಿಶ್ವ ಬನ್ನಂಜೆ 90ರ ನಮನ’ | ಸೆಪ್ಟೆಂಬರ್ 20

    September 17, 2025

    ಚಿಗುರುಪಾದೆಯಲ್ಲಿ ರಂಜಿಸಿದ ಶ್ರೀಗುರುನರಸಿಂಹ ಯಕ್ಷಬಳಗದ ‘ಯಕ್ಷಚಿಗುರು -2025’

    September 16, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.