Subscribe to Updates

    Get the latest creative news from FooBar about art, design and business.

    What's Hot

    ಚುಟುಕಗಳು

    January 2, 2026

    ಪುತ್ತೂರಿನಲ್ಲಿ ಸಾಹಿತಿ ಡಾ. ವಿಷ್ಣು ಕೆ. ಇವರು ರಚಿಸಿರುವ ಕೃತಿಗಳ ಲೋಕಾರ್ಪಣಾ ಸಮಾರಂಭ

    January 2, 2026

    ಡಾ. ವಸಂತಕುಮಾರ ಪೆರ್ಲ ಇವರಿಗೆ ‘ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ’

    January 2, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಅಮ್ಮುಂಜೆ ಮೋಹನ್ ಇವರಿಗೆ ‘ಕದ್ರಿ ವಿಷ್ಟು ಪ್ರಶಸ್ತಿ’ ಪ್ರದಾನ
    Awards

    ಅಮ್ಮುಂಜೆ ಮೋಹನ್ ಇವರಿಗೆ ‘ಕದ್ರಿ ವಿಷ್ಟು ಪ್ರಶಸ್ತಿ’ ಪ್ರದಾನ

    January 11, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

     

    ಮಂಗಳೂರು : ಕದ್ರಿಯಲ್ಲಿ ದಿನಾಂಕ 08-12-2023ರಂದು ನಡೆದ ಕಟೀಲು ಮೇಳದ ಯಕ್ಷಗಾನ ಪ್ರದರ್ಶನದ ವೇಳೆ ಕಟೀಲು ಮೇಳದ ಕಲಾವಿದ ಅಮ್ಮುಂಜೆ ಮೋಹನ್ ಕುಮಾರ್ ಇವರಿಗೆ ‘ಕದ್ರಿ ವಿಷ್ಟು ಪ್ರಶಸ್ತಿ -2023’ನ್ನು ಪ್ರದಾನ ಮಾಡಲಾಯಿತು.

    ಕದ್ರಿ ಯಕ್ಷ ಬಳಗದ ಅಧ್ಯಕ್ಷರಾದ ಕದ್ರಿ ನವನೀತ್ ಶೆಟ್ಟಿ ಮಾತನಾಡಿ, “ಕಟೀಲು ಮೇಳದಲ್ಲಿ ಮೂರು ದಶಕಗಳ ತನ್ನ ಯಕ್ಷಯಾನವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಅಮ್ಮುಂಜೆ ಮೋಹನ್ ಕುಮಾರ್ ಅವರು ತೆಂಕುತಿಟ್ಟಿನ ಪ್ರಸಿದ್ಧ ವೇಷಧಾರಿ ಗುಂಡಿಲ ಗುತ್ತು ಶಂಕರ ಶೆಟ್ಟಿ, ಪಡ್ರೆ ಚಂದು ಹಾಗೂ ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಡಾ. ಕೊಳ್ಳೂರು ರಾಮಚಂದ್ರ ರಾವ್ ಅವರಿಂದ ನಾಟ್ಯ ಕಲಿತವರು, ಕುರಿಯ ಗಣಪತಿ ಶಾಸ್ತ್ರಿ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಪಟ್ಲ ಸತೀಶ್ ಶೆಟ್ಟಿ ಭಾಗವತರ ಮಾರ್ಗದರ್ಶನದ ರಂಗದಲ್ಲಿ ಮೆರೆದ ಖ್ಯಾತ ಪುಂಡು ವೇಷಧಾರಿ. ಸುಧನ್ವ, ಬಬ್ರುವಾಹನ, ಅಭಿಮನ್ಯು, ಚಂಡ-ಮುಂಡ, ಸುದರ್ಶನ, ಅಶ್ವತ್ಥಾಮ, ಹಿರಣ್ಯಾಕ್ಷ, ಋತುಪರ್ಣ, ಜಾಂಬವ, ರಕ್ತಬೀಜ ಮೊದಲಾದ ಪಾತ್ರಗಳಲ್ಲಿ ತನ್ನದೇ ಶೈಲಿಯಿಂದ ಮೆರೆಯುತ್ತಿರುವ ಸರಳ-ಸಜ್ಜನಿಕೆಯ ನಿಷ್ಠ ರಂಗ ಕಲಾವಿದ” ಎಂದು ಪ್ರಶಂಸಿಸಿದರು. ಸಮ್ಮಾನ ಸ್ವೀಕರಿಸಿದ ಅಮ್ಮುಂಜೆ ಮೋಹನ್ ಅವರು “ಮೇರು ಹಿರಿಯ ಕಲಾವಿದ ಕದ್ರಿ ವಿಷ್ಣು ಪ್ರಶಸ್ತಿಯು ನನ್ನ ಈವರೆಗಿನ ಸಮ್ಮಾನಗಳಲ್ಲಿ ಅತೀ ಸಂತಸ ಹಾಗೂ ಗೌರವದ ಪ್ರತೀಕ” ಎಂದರು.

    ಲೀಲಾಕ್ಷ ಕರ್ಕೇರ, ನಿವೇದಿತಾ ಶೆಟ್ಟಿ ಪ್ರದೀಪ್ ಕುಮಾರ್ ಕಲ್ಕೂರ, ಭಾಸ್ಕರ್ ರೈ ಕುಕ್ಕುವಳ್ಳಿ, ಪ್ರದೀಪ್ ಆಳ್ವ, ಕೃಷ್ಣ ಶೆಟ್ಟಿ ತಾರೆಮಾರ್‌, ಸುರೇಶ್ ಶೆಟ್ಟಿ ಬೆಂಗಳೂರು, ಭುಜಬಲಿ, ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಗುಂಡಿಲ ಗುತ್ತು ಶಂಕರ್ ಶೆಟ್ಟಿ, ಸುಧಾಕರ ಪೇಜಾವರ, ರವೀಂದ್ರನಾಥ್ ಶೆಟ್ಟಿ, ಜನಾರ್ದನ ಅಮ್ಮುಂಜೆ, ಪಣಂಬೂರು ಶ್ರೀಧರ್ ಐತಾಳ್, ತಾರನಾಥ್ ಶೆಟ್ಟಿ ಬೋಳಾರ್, ಎಲ್ಲೂರು ರಾಮಚಂದ್ರ ರಾವ್, ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Article‘ಅಂತಾರಾಷ್ಟ್ರೀಯ ಪತ್ರಿಕಾ ಸಾಧಕ ಪ್ರಶಸ್ತಿ’ಗೆ ರವಿ ನಾಯ್ಕಾಪು ಆಯ್ಕೆ
    Next Article ಕವಯಿತ್ರಿ ಕೃಪಾ ದೇವರಾಜ್ ಅವರ ಹೊಸ ಕೃತಿ ‘ಕಾರ್ಪಣ್ಯದ ಹೂವು’ ಕವನ ಸಂಕಲನ ಲೋಕಾರ್ಪಣೆ
    roovari

    Add Comment Cancel Reply


    Related Posts

    ಡಾ. ವಸಂತಕುಮಾರ ಪೆರ್ಲ ಇವರಿಗೆ ‘ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ’

    January 2, 2026

    ರಾಯಚೂರು ಕನ್ನಡ ಭವನದಲ್ಲಿ ‘ಮಹಿಳಾ ಪರಿಷತ್’ ಇದರ ಉದ್ಘಾಟನಾ ಕಾರ್ಯಕ್ರಮ | ಜನವರಿ 04

    January 1, 2026

    ಕರಾವಳಿ ಉತ್ಸವದಲ್ಲಿ ಕರ್ನಾಟಕ ಯಕ್ಷ ಭಾರತಿ ತಂಡದಿಂದ ತಾಳಮದ್ದಳೆ

    January 1, 2026

    ಜಾನಪದ ಅಕಾಡೆಮಿಯ ಜಾನಪದ ತಜ್ಞ, ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರಕಟ

    January 1, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.