Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ‘ಕಾಲಜ್ಞಾನಿ ಕನಕ’ ನಾಟಕ ಪ್ರದರ್ಶನ | ಡಿಸೆಂಬರ್ 04

    December 3, 2025

    ಕುಂಜತ್ತೂರಿನಲ್ಲಿ ‘ಅಮ್ಮನೆಂಬ ವಿಸ್ಮಯ’ ಪರಿಕಲ್ಪನೆಯ ಕಾರ್ಯಕ್ರಮ

    December 3, 2025

    ಫರಂಗಿಪೇಟೆಯಲ್ಲಿ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ‘ವರ್ಣಾಂಜಲಿ’ | ಡಿಸೆಂಬರ್ 07

    December 3, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ‘ಕಾಲಜ್ಞಾನಿ ಕನಕ’ ನಾಟಕ ಪ್ರದರ್ಶನ | ಡಿಸೆಂಬರ್ 04
    Drama

    ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ‘ಕಾಲಜ್ಞಾನಿ ಕನಕ’ ನಾಟಕ ಪ್ರದರ್ಶನ | ಡಿಸೆಂಬರ್ 04

    December 3, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಪ್ರಯೋಗರಂಗ ಬೆಂಗಳೂರು ಇವರು ಪ್ರಸ್ತುತ ಪಡಿಸುವ ‘ಕಾಲಜ್ಞಾನಿ ಕನಕ’ ನಾಟಕ ಪ್ರದರ್ಶನವನ್ನು ದಿನಾಂಕ 04 ಡಿಸೆಂಬರ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.

    ಈ ನಾಟಕದ ರಚನೆ ಕಿ.ರಂ. ನಾಗರಾಜ ಇವರು ಮಾಡಿದ್ದು, ಸಂಗೀತ ಹೆಚ್.ಕೆ. ಯೋಗಾನರಸಿಂಹ ಮತ್ತು ಸುರೇಶ್ ಆನಗಳ್ಳಿ ಇವರು ನೀಡಿದ್ದು, ಸಿಜಿಕೆ ನಿರ್ದೇಶನ ಮಾಡಿರುತ್ತಾರೆ. ಪ್ರಸ್ತುತ ಟಿ. ರಘು ಇವರು ಮರು ನಿರ್ದೇಶನ ಮಾಡಿದ್ದು, ಡಾ. ಕೆ.ವಿ. ನಾಗರಾಜಮೂರ್ತಿ ಇವರು ನಿರ್ಮಾಣ ಮತ್ತು ನಿರ್ವಹಣೆ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 98451 72822 ಸಂಖ್ಯೆಯನ್ನು ಸಂಪರ್ಕಿಸಿರಿ.

    ಪ್ರಯೋಗರಂಗದ ಬಗ್ಗೆ :

    ಪ್ರಯೋಗರಂಗ ನಾಟಕ ತಂಡ ಕಳೆದ 25 ವರ್ಷಗಳಿಂದ ದೇಶದ ವಿವಿಧ ರಾಜ್ಯಗಳಲ್ಲಿ ವಿಭಿನ್ನ ನಾಟಕ ಪ್ರರ್ದಶಿಸುತ್ತಾ ಬಂದಿದೆ. ‘ಮಂಟೆಸ್ವಾಮಿ ಕಥಾಪ್ರಸಂಗ’, ‘ಮೌನಿ’, ‘ಪ್ರೇತದ್ವೀಪ’, ‘ಮಲ್ಲಮ್ಮನ ಮನೆ ಹೋಟು’, ‘ಬ್ರಹ್ಮಚಾರಿ ಶರಣಾದ’, ‘ಮಹಿಪತ ಕ್ವಾಣನ ತಂಬಿಗಿ ಎಂ.ಎ’, ‘ಜುಮ್ನಾಳ ದೂಳ್ಯನ ಪ್ರಸಂಗ’, ‘ರಾಜಬೇಟೆ’, ‘ಸಂತೆಯಲ್ಲಿ ನಿಂತ ಕಬೀರ’, ‘ಪರಿಹಾರ’, ‘ಜುಗಾರಿ ಕೂಟ’, ‘ಸಿರಿ ಪುರಂದರ’, ‘ನಮ್ಮ ನಿಮ್ಮಳಗೊಬ್ಬ’, ‘ಹಳ್ಳಿಪ್ರೀತಿ’, ‘ಮತ್ತದೆ ಸಂಜೆ’, ‘ಸ್ಮಶಾನ ಕುರುಕ್ಷೇತ್ರ’, ‘ಯಮಳ ಪ್ರಶ್ನೆ’, ‘ಟಿ. ಪ್ರಸನ್ನನ ಗೃಹಸ್ತಾಶ್ರಮ’, ‘ಸಿಂಗಿರಾಜ’, ‘ನಾ ನೀನಾದರೆ ನೀ ನಾನೇನ’, ‘ಕರ್ಣಭಾರ’, ‘ನಿನ್ನೊಳು ನಾ ನನ್ನೊಳು ನೀ’, ‘ವಧೂಟಿ’, ‘ಮಕರ ಚಂದ್ರ’, ‘ಹುಚ್ಚೇರಿ ಎಸರಿನ ಪ್ರಸಂಗ’, ‘ಜಂಗಮದ ಬದುಕು’, ‘ಕೊಂದವರಾರು’, ‘ಸೀನಿಯರ್ ಸಿಟಿಜನ್’, ‘ಶಿವರಾತಿ’ ಹೀಗೆ ಹಲವಾರು ನಾಟಕಗಳನ್ನು ಪ್ರಯೋಗಿಸುತ್ತ ಬಂದಿದೆ. ಪ್ರಸ್ತುತ ‘ಕಾಲಜ್ಞಾನಿ ಕನಕ’ ನಾಟಕವನ್ನು ಪ್ರಯೋಗಿಸುತ್ತಿದೆ. ಯುವ ರಂಗಾಸಕ್ತರನ್ನು ರಂಗಭೂಮಿಗೆ ತರುವಲ್ಲಿ ರಂಗ ತರಬೇತಿ ಶಿಬಿರ ಹಮ್ಮಿಕೊಂಡಿದೆ ಹಾಗೂ ಸಾಮಾನ್ಯ ಜನರಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸಲು ನಾಟಕ ಹಾಗೂ ಬೀದಿ ನಾಟಕಗಳನ್ನು ಪ್ರರ್ದಶಿಸುತಿದೆ. ತಂಡವು ಅಮೇರಿಕದ ‘ನಾ.ವಿ.ಕ.’ ಹಾಗೂ ಸಿಂಗಾಪುರದಲ್ಲಿ ನಡೆದ ‘ವಿಶ್ವ ಸಾಂಸ್ಕೃತಿಕ ಉತ್ಸವ’ದಲ್ಲಿ ನಾಟಕಗಳನ್ನು ಪ್ರರ್ದಶಿಸಿದೆ.

     

    baikady drama roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಕುಂಜತ್ತೂರಿನಲ್ಲಿ ‘ಅಮ್ಮನೆಂಬ ವಿಸ್ಮಯ’ ಪರಿಕಲ್ಪನೆಯ ಕಾರ್ಯಕ್ರಮ
    roovari

    Add Comment Cancel Reply


    Related Posts

    ಕುಂಜತ್ತೂರಿನಲ್ಲಿ ‘ಅಮ್ಮನೆಂಬ ವಿಸ್ಮಯ’ ಪರಿಕಲ್ಪನೆಯ ಕಾರ್ಯಕ್ರಮ

    December 3, 2025

    ಫರಂಗಿಪೇಟೆಯಲ್ಲಿ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ‘ವರ್ಣಾಂಜಲಿ’ | ಡಿಸೆಂಬರ್ 07

    December 3, 2025

    ಉಜಿರೆಯಲ್ಲಿ ಗಜಲ್ ಸಂಕಲನ ಬಿಡುಗಡೆ ಮತ್ತು ಗಜಲ್ ರಚನಾ ಕಾರ್ಯಾಗಾರ | ಡಿಸೆಂಬರ್ 06

    December 3, 2025

    ‘ಕಾವ್ಯಾಂ ವ್ಹಾಳೊ- 9’ ಕೊಂಕಣಿ ಕವಿಗೋಷ್ಟಿ | ಡಿಸೆಂಬರ್ 06

    December 3, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.