ಮಂಗಳೂರು : ಪರಮಪದ ಮತ್ತು ಕರ್ನಾಟಕ ವಾಣಿಜ್ಯ ತೆರಿಗೆಗಳ ಸೇವಾ (ಅಧಿಕಾರಿಗಳ) ಸಂಘ (ನೋಂ) ಇವರ ಸಹಯೋಗದೊಂದಿಗೆ ‘ಕಾಣದ ಕಡಲಿಗೆ’ ಗಾನದಲೆಗಳ ಮಧುರ ಸಂಜೆ ಕಾರ್ಯಕ್ರಮವನ್ನು ದಿನಾಂಕ 30 ಜನವರಿ 2026ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಖ್ಯಾತ ಗಾಯಕ ರಾಮಚಂದ್ರ ಹಡಪದ ಇವರೊಂದಿಗೆ ಮೇಘನಾ ಕುಂದಾಪುರ ಮತ್ತಿತರಿಂದ ಈ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ.

