Subscribe to Updates

    Get the latest creative news from FooBar about art, design and business.

    What's Hot

    ಆಳ್ವಾಸ್ ರಂಗ ತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 10

    May 31, 2025

    ಮಂಗಳೂರಿನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ನೃತ್ಯ, ಗಾನ ವೈಭವ’

    May 31, 2025

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಜಯಪುರದಲ್ಲಿ ಸಂಭ್ರಮದ ಕನಕ ಜಯಂತಿ
    Gamaka

    ವಿಜಯಪುರದಲ್ಲಿ ಸಂಭ್ರಮದ ಕನಕ ಜಯಂತಿ

    December 2, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ವಿಜಯಪುರ : ಕುಮಾರವ್ಯಾಸ ಭಾರತ ವೇದಿಕೆಯಿಂದ `ಕನಕದಾಸರ ಜಯಂತಿ’ ಕಾರ್ಯಕ್ರಮವನ್ನು ದಿನಾಂಕ 30 ನವೆಂಬರ್ 2024ರ ಶನಿವಾರದಂದು ವಿಜಯಪುರದ ಗುಜ್ಜರ ಗಲ್ಲಿಯ ಶ್ರೀ ಗುರುವಿಠ್ಠಲ ಕೃಪಾ ಭವನದಲ್ಲಿ ಆಚರಿಸಲಾಯಿತು.
    ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ದರಬಾರ ಶಾಲೆಯ ನಿವೃತ್ತ ಶಿಕ್ಷಕಿಯಾದ ಶ್ರೀಮತಿ ಇಂದಿರಾ ಗೋವಿಂದ ಪುರೋಹಿತ ಮಾತನಾಡಿ “ಕನಕದಾಸರು ಪ್ರತಿಭಾವಂತ ಹಾಗೂ ವಿನಯವಂತ ವ್ಯಕ್ತಿತ್ವವನ್ನು ಹೊಂದಿದ್ದರು. ಪುರಂದರ ದಾಸರ ಜೊತೆಗೆ ಕನಕದಾಸರ ಹೆಸರು ಕರ್ನಾಟಕದಲ್ಲಿ ಅತೀ ಖ್ಯಾತಿಯನ್ನು ಪಡೆದಿದೆ. ಇವರು ಕೀರ್ತನೆಗಳ ಜೊತೆಗೆ ಮಹಾಕಾವ್ಯಗಳಾದ ನಳ-ದಮಯಂತಿ, ಹರಿಭಕ್ತಿಸಾರ, ರಾಮಧಾನ್ಯ ಚರಿತೆ, ಮೋಹನ ತರಂಗಿಣಿ ಮುಂತಾದ ಕಾವ್ಯಗಳನ್ನು ಬರೆದಿರುವುದು ಕನ್ನಡಿಗರಿಗೆ ಮಾಡಿದ ಮಹದುಪಕಾರವಾಗಿದೆ. `ಕೂಡಿ ಬಾಳಿದರೆ ಸ್ವರ್ಗಸುಖ’ ಎಂಬ ನೀತಿ ವಾಕ್ಯವನ್ನು ಕನಕದಾಸರು ಸಮಾಜದ ಎಲ್ಲ ವರ್ಗಗಳಿಗೆ ನೀಡಿದರು.” ಎಂದರು.
    ಕಾರ್ಯಕ್ರಮದ ಆರಂಭದಲ್ಲಿ ಹಿರಿಯ ಗಮಕಿ ಶ್ರೀಮತಿ ಶಾಂತಾ ಕೌತಾಳ್ ಹಾಗೂ ಕಲ್ಯಾಣರಾವ್ ದೇಶಪಾಂಡೆ ಇವರುಗಳಿಂದ ಕನಕದಾಸರ ನಳಚರಿತ್ರೆಯ ‘ಕಾರ್ಕೋಟಕ’ ಪ್ರಸಂಗದ ಗಮಕ ಕಾವ್ಯವಾಚನ ಹಾಗೂ ವ್ಯಾಖ್ಯಾನ ಕಾರ್ಯಕ್ರಮ ನಡೆಯಿತು. ನಂತರ ವಿಜಯಪುರ ನಗರದ ಕಲಾವಿದರಿಂದ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮ ಜರುಗಿತು. ಶ್ರೀಮತಿ ಸುವರ್ಣಾ ಹಳ್ಳೂರ್, ಶ್ರೀಮತಿ ವೀಣಾ ಥಿಟೆ, ಶ್ರೀಮತಿ ಲತಾ ಜಹಾಗೀರದಾರ್, ಶ್ರೀಮತಿ ಶಾಂತಾ ಕೌತಾಳ್, ಶ್ರೀ ವಿಶಾಲ್ ಕಟ್ಟಿ ಇವರುಗಳು ಕನಕದಾಸರ ಕೀರ್ತನೆಗಳಾದ `ತೊರೆದು ಜೀವಿಸಬಹುದೇ’, `ರಾಮ ಹರೇ’ ಮುಂತಾದ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿದರು. ಇದೇ ಸಂದರ್ಭದಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವ-2024 ಪ್ರಶಸ್ತಿ ವಿಜೇತ ಹಿಂದುಸ್ತಾನಿ ಸಂಗೀತ ಕಲಾವಿದೆ ಶ್ರೀಮತಿ ಲತಾ ಜಹಾಗೀರದಾರ್, ನಾಟಕ ಅಕಾಡೆಮಿಯ ಉತ್ತರ ಕರ್ನಾಟಕ  ಪ್ರತಿನಿಧಿಯಾಗಿ ಆಯ್ಕೆಯಾಗಿರುವ ಶ್ರೀ ಶಶಿಧರ ತಾವರಗೇರಿ, ಮುಖ್ಯ ಅತಿಥಿಗಳಾದ ಶ್ರೀ ಗೋವಿಂದ ಪುರೋಹಿತ ಹಾಗೂ ಶ್ರೀಮತಿ ಇಂದಿರಾ ಗೋವಿಂದ  ಪುರೋಹಿತ ಇವರುಗಳನ್ನು ಫಲಪುಷ್ಪ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
    ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಲತಾ ಜಹಾಗೀರದಾರ್ “ನಗರದ ಕುಮಾರವ್ಯಾಸ ಭಾರತ ಗಮಕ ವೇದಿಕೆಯು ಗಮಕದ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಬಗೆ ಪ್ರಶಂಶನಾರ್ಹ. ವಯೋವೃದ್ಧ ಹಿಂದುಸ್ತಾನಿ ಸಂಗೀತ ಕಲಾವಿದ ಹಾಗೂ ಗಮಕಿಗಳೂ ಆದ ಶ್ರೀಮತಿ ಶಾಂತಾ ಕೌತಾಳ್ ಇವರ ಉತ್ಸಾಹ ಹಾಗೂ ಕಲಾ ಸೇವೆಯು ಎಲ್ಲ ಯುವ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದೆ, ಇದು ಹೀಗೆ ಮುಂದುವರೆಯಲಿ.” ಎಂದು ಆಶಿಸಿದರು.
     ಕಾರ್ಯಕ್ರಮದಲ್ಲಿ ಶ್ರೀಮತಿ ಶಶಿಕಲಾ ಅಪರಂಜಿ, ಶ್ರೀಮತಿ ಮಂಜುಳಾ ವಿಜಯೀಂದ್ರ ಪಾಟೀಲ್, ಶ್ರೀಮತಿ ಸ್ಮಿತಾ ಮೂರ್ತಿ, ಶ್ರೀಮತಿ ಪ್ರಮಿಲಾ ದೇಶಪಾಂಡೆ, ಶ್ರೀಮತಿ ಮೀನಾಕ್ಷಿ ಜೋಶಿ, ಶ್ರೀಮತಿ ಪದ್ಮಾ ಕುಲಕರ್ಣಿ, ಶ್ರೀಮತಿ ಸುಲಭಾ ಕುಲಕರ್ಣಿ, ಶ್ರೀ ಜಗನ್ನಾಥ್ ಅಳ್ಳಗಿ, ಶ್ರೀ ವಿನಾಯಕ್ ಕಟ್ಟಿ, ಗಮಕ ಪರಿಷತ್ ವಿಜಯಪುರ ಜಿಲ್ಲಾ ಅಧ್ಯಕ್ಷರಾದ ಶ್ರೀ ಬಿ.ಎಂ.ಪಾಟೀಲ ಮುಂತಾದವರು ಭಾಗವಹಿಸಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ‘ನಿಂಗೋಲ್ ಚಕೋಬಾ ಆಚರಣೆ – 2024’
    Next Article ತೆಕ್ಕಟ್ಟೆ ಹಯಗ್ರೀವದಲ್ಲಿ ಹಿಮ್ಮೇಳ ಮುಮ್ಮೇಳ ತರಗತಿಗಳ ವಾರ್ಷಿಕೋತ್ಸವ
    roovari

    Add Comment Cancel Reply


    Related Posts

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025

    ವಿಶೇಷ ಲೇಖನ – ಜೈನ ಸಾಹಿತ್ಯದ ಖ್ಯಾತ ವಿದ್ವಾಂಸ ಡಾ. ಎಸ್. ಪಿ. ಪಾಟೀಲ್

    May 31, 2025

    ಉಪ್ಪಳದ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ತುಲುವೆರೆ ಕಲ ವರ್ಸೊಚ್ಚಯ | ಜೂನ್ 01

    May 30, 2025

    ಕೀನ್ಯಾದ ಪ್ರಸಿದ್ಧ ಲೇಖಕ ಗೂಗಿ ವಾ ಥಿಯಾಂಗೋ ವಿಧಿವಶ

    May 30, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.