Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಾಸರಗೋಡು ಪದ್ಮಗಿರಿ ಕಲಾ ಕುಟೀರದಲ್ಲಿ ಸ್ವರಚಿನ್ನಾರಿ ‘ಕನಕ ಸ್ಮರಣೆ’
    Music

    ಕಾಸರಗೋಡು ಪದ್ಮಗಿರಿ ಕಲಾ ಕುಟೀರದಲ್ಲಿ ಸ್ವರಚಿನ್ನಾರಿ ‘ಕನಕ ಸ್ಮರಣೆ’

    November 30, 2023Updated:December 2, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ರಂಗಚಿನ್ನಾರಿ (ರಿ) ಇದರ ಸಂಗೀತ ಘಟಕ ಸ್ವರಚಿನ್ನಾರಿಯು ತನ್ನ ಎರಡನೇ ಸರಣಿ ಕಾರ್ಯಕ್ರಮದ ಅಂಗವಾಗಿ ದಿನಾಂಕ 28-11-2023ನೇ ಮಂಗಳವಾರ ಸಂಜೆ 5 ಗಂಟೆಗೆ ಕರಂದಕ್ಕಾಡ್ ಪದ್ಮಗಿರಿ ಕಲಾ ಕುಟೀರದಲ್ಲಿ ‘ಕನಕ ಸ್ಮರಣೆ’ ಕನಕದಾಸರ ಗೀತೆಗಳ ಸಂಗೀತ ರಸಸಂಜೆ ಏರ್ಪಡಿಸಿತು. ಕಾರ್ಯಕ್ರಮವನ್ನು ಖ್ಯಾತ ವಯಲಿನಿಸ್ಟ್ ಶ್ರೀ ಪ್ರಭಾಕರ ಕುಂಜಾರು ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ತಮ್ಮ ಹೃದಯಂತರಾಳದ ಶುಭ ಹಾರೈಕೆಗಳನ್ನು ನುಡಿದರು.

    ಮುಖ್ಯ ಅತಿಥಿಯಾಗಿ ದಾಸಸಾಹಿತ್ಯ ಪ್ರತಿಪಾದಕ ಮಧ್ವಾಧೀಶ ವಿಠ್ಠಲದಾಸ ನಾಮಾಂಕಿತ ರಾಮಕೃಷ್ಣ ಕಾಟುಕುಕ್ಕೆ ಅವರು ಕನಕದಾಸರ ಹುಟ್ಟು, ಇತಿಹಾಸ, ಮತ್ತು ಅವರು ಬರೆದ ಸಾಹಿತ್ಯಗಳ ಹಿಂದೆ ಇದ್ದ ಅವರ ಜೀವನದ ಅನುಭವಗಳು ಮತ್ತು ಅದರ ಮೇಲಿನ ಭಕ್ತಿಯ ಬಗ್ಗೆ ಮಾತನಾಡಿದರು. ಸ್ವತಃ ಭಗವಂತನೇ ಪದಗಳಲ್ಲಿ ಕುಳಿತು ಬರೆಸಿದ ಸಾಹಿತ್ಯ ದಾಸಸಾಹಿತ್ಯ ಎಂದೂ ಅವರು ಹೇಳಿದರು. ಮತ್ತೊಬ್ಬ ಅತಿಥಿಯಾಗಿ ಹರಿದಾಸ ಸಂಕೀರ್ತನಾಕಾರ ದಯಾನಂದ ಹೊಸದುರ್ಗ ಉಪಸ್ಥಿತರಿದ್ದು, ನಿತ್ಯ ಜೀವನದಲ್ಲಿ ದಾಸರಪದಗಳ ಮೌಲ್ಯಗಳ ಮಹತ್ವ ಮತ್ತು ಅಂತಹ ದಾಸಶ್ರೇಷ್ಠರನ್ನು ಭಜಿಸುವುದು ಉತ್ತಮ ಕಾರ್ಯ ಎಂದು ರಂಗಚಿನ್ನಾರಿ ಸಂಸ್ಥೆಯನ್ನು ಪ್ರಶಂಸಿದರು.

    ಸ್ವರಚಿನ್ನಾರಿಯ ಗೌರವಾಧ್ಯಕ್ಷರು ಖ್ಯಾತ ಕವಿಗಳು ಶ್ರೀಕೃಷ್ಣಯ್ಯ ಅನಂತಪುರ ಸಭೆಯ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡುತ್ತ ಕನಕದಾಸರ ಕೃತಿಯನ್ನು ಉಲ್ಲೇಖಸಿ ಅದರ ಹಿಂದೆ ಕನಕದಾಸರು ಅನುಭವಿಸಿದ ನೋವು ಮತ್ತು ನಿಂದನೆಗಳ ಅರಿವನ್ನು ಅರ್ಥೈಸಿದರು. ಗಾಯಕಿ ಅಕ್ಷತಾ ಪ್ರಕಾಶ್ ಪ್ರಾರ್ಥನೆ ಮಾಡಿದರು. ಕಾರ್ಯದರ್ಶಿ ಕಿಶೋರ್ ಪೆರ್ಲ ಸ್ವಾಗತಿಸಿ, ಸಹ ಕಾರ್ಯದರ್ಶಿ ಪ್ರತಿಜ್ಞಾ ರಂಜಿತ್ ವಂದಿಸಿದರು. ರಂಗಚಿನ್ನಾರಿ ನಿರ್ದೇಶಕರು ಕಾಸರಗೋಡು ಚಿನ್ನಾ ಅವರು ಪ್ರಾಸ್ತವಿಕ ನುಡಿಗಳೊಂದಿಗೆ ಸಭಾ ಕಾರ್ಯಕ್ರಮದ ನಿರ್ವಹಣೆ ಮಾಡಿದರು.

    ತದನಂತರ ಕನಕದಾಸರ ಗೀತೆಗಳ ಸಂಗೀತ ರಸಮಂಜರಿ ನಡೆಯಿತು. ಸ್ವರಚಿನ್ನಾರಿಯ ಆಶಯಗೀತೆಯೊಂದಿಗೆ ಸಂಗೀತ ಕಾರ್ಯಕ್ರಮವನ್ನು ಗಾಯಕರು ಆರಂಭಿಸಿದರು. ಇದರ ರಚನಕಾರರಾದ ಶ್ರೀಮತಿ ವಿಜಯಲಕ್ಷ್ಮಿ ಶಾನುಭೋಗ್ ಇವರನ್ನು ವೇದಿಕೆಯಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕನಕದಾಸರ ಸುಮಾರು 12 ಹಾಡುಗಳನ್ನು ಗಾಯಕರು ಕಿಶೋರ್ ಪೆರ್ಲ, ಗಣೇಶ್ ಪ್ರಸಾದ್ ನಾಯಕ್, ರತ್ನಾಕರ್ ಎಸ್. ಓಡಂಗಲ್ಲು, ಪ್ರತಿಜ್ಞಾ ರಂಜಿತ್, ಅಕ್ಷತಾ ಪ್ರಕಾಶ್, ಬಬಿತಾ ಆಚಾರ್ಯ, ಜಯಶ್ರೀ ಅನಂತಪುರ ಹಾಡಿದರು. ಹಿಮ್ಮೇಳದಲ್ಲಿ ಕೀಬೋರ್ಡ್ ವಾದಕರಾಗಿ ಪುರುಷೋತ್ತಮ್ ಕೊಪ್ಪಲ್, ಹಾರ್ಮೋನಿಯಂ ವಾದಕರು ಸತ್ಯನಾರಾಯಣ ಐಲ, ರಿದಂ ಪ್ಯಾಡ್ ವಾದಕರು ಪ್ರಭಾಕರ್ ಮಲ್ಲ ಮತ್ತು ತಬಲಾ ವಾದಕರು ಲವಕುಮಾರ್ ಐಲ ಸಹಕರಿಸಿದರು. ಗಣೇಶ್ ಪ್ರಸಾದ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಧ್ವನಿ ವ್ಯವಸ್ಥೆಯಲ್ಲಿ ನವೀನ್ ಹಾಗೂ ಛಾಯಾಗ್ರಹಣದಲ್ಲಿ ಫೋಟೋಸ್ಟಾರ್ ಪುನೀತ್ ಇವರು ಸಹಕರಿಸಿದರು. ಎಲ್ಲಾ ಸಂಗೀತ ಕಲಾವಿದರಿಗೂ ರಂಗಚಿನ್ನಾರಿ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

    Share. Facebook Twitter Pinterest LinkedIn Tumblr WhatsApp Email
    Previous Articleಕುಂದಾಪುರದಲ್ಲಿ ‘ಯಕ್ಷ ರಾತ್ರಿ 9’ | ಡಿಸೆಂಬರ್ 2
    Next Article ಪರಿಚಯ ಲೇಖನ | ವಿಶಿಷ್ಟ ಪ್ರತಿಭೆಯ ವಿ.ಜಿ. ಭಟ್ಟ
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ‘ಆಲಾಪ್’ ಶಾಸ್ತ್ರೀಯ ಸಂಗೀತ ಕಛೇರಿ | ಮೇ 10

    May 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.