ಧಾರವಾಡ : ಕರ್ನಾಟಕ ವಿದ್ಯಾವರ್ಧಕ ಸಂಘವು ನಾಡೋಜ ಚೆನ್ನವೀರ ಕಣವಿ ಮತ್ತು ಶಾಂತಾದೇವಿ ಕಣವಿ ದತ್ತಿ ಅಂಗವಾಗಿ ಆಯೋಜಿಸಿದ್ದ ಕನ್ನಡ ಯುವ ಲೇಖಕರಿಗೆ ಚೆನ್ನವೀರ ಕಣವಿ ಕಾವ್ಯಸ್ಪರ್ಧೆ ಮತ್ತು ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯ ವಿಜೇತರ ಪಟ್ಟಿ ಪ್ರಕಟಗೊಂಡಿದೆ.
ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆಯಲ್ಲಿ ಹಾವೇರಿಯ ಮಧು ಕಾರಗಿ ಪ್ರಥಮ, ದಕ್ಷಿಣ ಕನ್ನಡದ ಜಯಶ್ರೀ ಇಡ್ಕಿದು ದ್ವಿತೀಯ, ರಾಯಚೂರಿನ ಸಂಜೀವ ಜಗ್ಲಿ ಹಾಗೂ ಶಿರಸಿಯ ಚಂದನಾ ಡಿ.ನಾಯ್ಕ ತೃತೀಯ ಬಹುಮಾನ ಪಡೆದಿದ್ದಾರೆ. ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯಲ್ಲಿ ಶಿವಮೊಗ್ಗದ ದಿವ್ಯಶ್ರೀ ಪ್ರಥಮ, ಬೆಳಗಾವಿಯ ವಿಕ್ರಮಹಾಜನ ದ್ವಿತೀಯ, ಕೊಪ್ಪಳದ ವಿದ್ಯಾಶ್ರೀ ಹಡಪದ ಹಾಗೂ ಹಾವೇರಿಯ ಡಾ| ಕಾವ್ಯಾ ಕೆ.ಎಸ್. ತೃತೀಯ ಬಹುಮಾನ ಪಡೆದಿದ್ದಾರೆ.
ವಿಜೇತರಿಗೆ 28 ಜೂನ್ 2025 ರಂದು ಬೆಳಗ್ಗೆ ಘಂಟೆ 10:30ಕ್ಕೆ ಚೆನ್ನವೀರ ಕಣವಿ ಜನ್ಮದಿನಾಚರಣೆ ಸಮಾರಂಭದಲ್ಲಿ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Next Article ಯಕ್ಷಶಿಕ್ಷಣ ಟ್ರಸ್ಟ್ ಇದರ ವಾರ್ಷಿಕ ಮಹಾಸಭೆ