Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಪ್ರಗತಿಪರ ಚಿಂತಕ ಆರ್. ಎಸ್. ರಾಜಾರಾಮ್

    July 10, 2025

    ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆಯಲ್ಲಿ “ಉಲೂಪಿ ನಂದನ” ತಾಳಮದ್ದಳೆ | ಜುಲೈ 13

    July 10, 2025

    ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ʼಆಂಜೆಲ್-75ʼ ಕಾರ್ಯಕ್ರಮ

    July 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ರಂಗಪಂಚಮಿ ನಾಟಕೋತ್ಸವದಲ್ಲಿ ಮೈಸೂರಿನ ನಟನ ತಂಡದಿಂದ ‘ಕಣಿವೆಯ ಹಾಡು’ ನಾಟಕ ಪ್ರದರ್ಶನ
    Drama

    ರಂಗಪಂಚಮಿ ನಾಟಕೋತ್ಸವದಲ್ಲಿ ಮೈಸೂರಿನ ನಟನ ತಂಡದಿಂದ ‘ಕಣಿವೆಯ ಹಾಡು’ ನಾಟಕ ಪ್ರದರ್ಶನ

    March 9, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೈಂದೂರು : ಬೈಂದೂರು ಶ್ರೀ ಶಾರದಾ ವೇದಿಕೆಯಲ್ಲಿ ಸ್ಥಳೀಯ ಕಲಾಸಂಸ್ಥೆ ‘ಲಾವಣ್ಯ’ದ 47ನೇ ವಾರ್ಷಿಕೋತ್ಸವ ಹಾಗೂ ರಂಗಪಂಚಮಿ-2024 ಐದು ದಿನಗಳ ನಾಟಕೋತ್ಸವದ ಮೂರನೇ ದಿನದ ಕಾರ್ಯಕ್ರಮವು ದಿನಾಂಕ 04-03-2024ರಂದು ನಡೆಯಿತು.

    ಈ ಕಾರ್ಯಕ್ರಮದಲ್ಲಿ ಶುಭಾಶಂಸನೆಗೈದ ಹಿರಿಯ ಪತ್ರಕರ್ತ ಕೆ.ಸಿ. ರಾಜೇಶ “ಸಮಾಜದಲ್ಲಿರುವಂತಹ ಅಸಮಾನತೆ, ಅಸ್ಪಶ್ಯತೆ ಸೇರಿದಂತೆ ಓರೆಕೋರೆಗಳನ್ನು ರಂಗದ ಮೂಲಕ ತಿದ್ದಬಹುದು ಎಂದು ಹೇಳಿಕೊಟ್ಟಿದ್ದು ರಂಗಭೂಮಿ. ಅಧುನಿಕತೆ ಯುಗದಲ್ಲಿ ರಂಗಭೂಮಿಯನ್ನು ನೋಡುವಂತವರ ಆಸಕ್ತಿ ಕುಂದುತ್ತಿರುವಂತಹ ಇಂದಿನ ದಿನಗಳಲ್ಲಿಯೂ ಕೂಡ ‘ಲಾವಣ್ಯ’ವು ರಂಗಾಸಕ್ತರನ್ನು ಉಳಿಸಿಕೊಳ್ಳುವಂತಹ ಒಂದು ಶೇಷ್ಠತೆಯನ್ನು ಉಳಿಸಿಕೊಂಡಿದೆ. ಪ್ರಸ್ತುತ ಕಾಲಘಟ್ಟದಲ್ಲಿಯೂ ರಂಗಭೂಮಿಯ ಸತ್ವ ಹಾಗೂ ಚಿಂತನೆಗಳನ್ನು ಲಾವಣ್ಯವು ಉಳಿಸಿಕೊಂಡು ಬೆಳೆಯುತ್ತಿರುವುದು ಸಂತೋಷದಾಯಕ. ರಂಗಭೂಮಿ ಮೂಲಕ ಸಾಹಿತ್ಯ, ಶೈಕ್ಷಣಿಕ, ಮಾಧ್ಯಮ ಮತ್ತು ಸಾಮಾಜಿಕ ಜಗತ್ತಿಗೆ ಒಂದಷ್ಟು ಶಕ್ತಿಯನ್ನು ಲಾವಣ್ಯ ಸಂಸ್ಥೆ ತುಂಬಿದೆ” ಎಂದು ಅಭಿಪ್ರಾಯಪಟ್ಟರು.

    ಕನಕ ಗ್ರೂಪ್ಸ್ ಇದರ ಆಡಳಿತ ನಿರ್ದೇಶಕ ಜಗದೀಶ ಶೆಟ್ಟಿ ಕುದ್ರುಕೋಡು ಅಧ್ಯಕ್ಷತೆ ವಹಿಸಿ ಮಾತನಾಡಿ “ಇಂದಿನ ಶಿಕ್ಷಣ ಪದ್ಧತಿಯಲ್ಲಿ ಹೃದಯ ಸಂಸ್ಕಾರ ನೀಡುವ ಶಿಕ್ಷಣಕ್ಕೆ ಪ್ರಾಮುಖ್ಯತೆ ಸಿಗುತ್ತಿಲ್ಲ. ಆದ್ದರಿಂದ ಕಲೆಯನ್ನು ಮನೆ ಮನೆಗೆ ತಲುಪಿಸುವ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರಬೇಕು. ಕಲೆಯನ್ನು ಸಂಪಾದಿಸಲು ಉತ್ತೇಜನ ನೀಡಬೇಕು. ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸುವ ಕಾರ್ಯ ನಡೆಯಬೇಕು” ಎಂದರು.

    ಹಿರಿಯ ರಂಗ ಕಲಾವಿದ ಕೆ. ಪುಂಡಲೀಕ ನಾಯಕ್ ಹಾಗೂ ಹೋಮಿಯೋಪತಿ ವೈದ್ಯ ಡಾ. ರೋಶನ್ ಪಾಯಸ್ ಇವರನ್ನು ಸನ್ಮಾನಿಸಲಾಯಿತು. ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಡಾ. ಗೋವಿಂದ ಬಾಬು ಪೂಜಾರಿ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಸದಸ್ಯ ಜಯಾನಂದ ಹೋಬಳಿದಾರ್, ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಪ್ರಧಾನ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್, ರೋಟರಿ ಕ್ಲಬ್ ಅಧ್ಯಕ್ಷ ಶಿರೂರು ಪ್ರಸಾದ ಪ್ರಭು, ಅರ್ಚಕ ಸುಬ್ರಹ್ಮಣ್ಯ ಅಡಿಗ ಕೆರೆಕಟ್ಟೆ ಉಪಸ್ಥಿತರಿದ್ದರು. ಸಂಸ್ಥೆಯ ಸದಸ್ಯರಾದ ರಾಜೇಶ ನಾಯ್ಕ್ ಸ್ವಾಗತಿಸಿ, ಚೈತ್ರಾ ಯಡ್ತರೆ ನಿರೂಪಿಸಿ, ರೋಶನ್ ವಂದಿಸಿದರು. ನಂತರ ‘ನಟನ’ ಮೈಸೂರು ತಂಡದ ಸದಸ್ಯರಿಂದ ‘ಕಣಿವೆಯ ಹಾಡು’ ನಾಟಕ ಪ್ರದರ್ಶನಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಆವರಣದಲ್ಲಿ ‘ರಂಗೋತ್ಸವ’ | ಮಾರ್ಚ್ 20ರಿಂದ 25ರವರೆಗೆ
    Next Article ತೆಕ್ಕಟ್ಟೆಯ ಪ್ರಕೃತಿ ಪಾಠ ಶಾಲೆಯಲ್ಲಿ ‘ರಜಾ ರಂಗು 2024’ ಬೇಸಿಗೆ ಶಿಬಿರ | ಏಪ್ರಿಲ್ 11ರಿಂದ ಮೇ 5ರವರೆಗೆ
    roovari

    Add Comment Cancel Reply


    Related Posts

    ವಿಶೇಷ ಲೇಖನ – ಪ್ರಗತಿಪರ ಚಿಂತಕ ಆರ್. ಎಸ್. ರಾಜಾರಾಮ್

    July 10, 2025

    ವಿಸ್ತಾರ್‌ ರಂಗಶಾಲೆಯಿಂದ ನಾಟಕ ಡಿಪ್ಲೋಮ ಕೋರ್ಸ್ ಗೆ ಅರ್ಜಿ ಆಹ್ವಾನ | ಜುಲೈ 30

    July 9, 2025

    ಬೆಂಗಳೂರಿನ ಕಲಾಗ್ರಾಮದಲ್ಲಿ ‘ಲಕ್ಷ್ಮೀ ಕಟಾಕ್ಷ’ | ಜುಲೈ 13

    July 9, 2025

    ರಂಗಸಂಗಾತಿಯ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮತ್ತು ನಾಟಕ ಪ್ರದರ್ಶನ

    July 9, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.