Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025

    ಕಲಾಕುಲ್ ಕೊಂಕಣಿ ನಾಟಕ ರೆಪರ್ಟರಿಗೆ ಅರ್ಜಿ ಆಹ್ವಾನ

    May 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಾರ್ಕಳದಲ್ಲಿ ಅರಿವು ತಿಳಿವು ಉಪನ್ಯಾಸ ಕಾರ‍್ಯಕ್ರಮ – “ಹೊಸಗನ್ನಡ ಕಾವ್ಯ – ಶಕ್ತಿ ಮತ್ತು ಸೌಂದರ‍್ಯ”
    Kannada

    ಕಾರ್ಕಳದಲ್ಲಿ ಅರಿವು ತಿಳಿವು ಉಪನ್ಯಾಸ ಕಾರ‍್ಯಕ್ರಮ – “ಹೊಸಗನ್ನಡ ಕಾವ್ಯ – ಶಕ್ತಿ ಮತ್ತು ಸೌಂದರ‍್ಯ”

    April 17, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    17 ಎಪ್ರಿಲ್ 2023, ಕಾರ್ಕಳ: ಏಕಚಿತ್ತವಾದ ಮನಸ್ಸಿದಿಂದ ಉತ್ತಮ ಕಾವ್ಯದ ಹುಟ್ಟು
    “ಋಷಿಯಲ್ಲದವ ಕವಿಯಾಗಲಾರ ಅನ್ನುವ ಮಾತಿದೆ. ಹೊರ ಜಗತ್ತನ್ನು ನೋಡುತ್ತಾ, ಅನುಭವಿಸುತ್ತಾ ಯಾರೂ ಕಾಣದೇ ಇರುವುದನ್ನು ಕವಿ ಕಾಣಬಲ್ಲ. ಅಂದರೆ ಬಹಿರ್ಮುಖವಾಗಿ ಕಾಣುವ ಸಂಗತಿಗಳೆಲ್ಲವನ್ನೂ ಅಂತರ್ಮುಖಿಯಾಗಿಸಿಕೊಂಡಾಗ ಅದು ಆತನಿಗೆ ಭಿನ್ನವಾಗಿ ಗೋಚರಿಸುತ್ತದೆ. ಅದನ್ನು ಋಷಿಯಂತೆ ಏಕ ಚಿತ್ತದ ಮನಸ್ಸಿನಿಂದ ಕಲೆಗಾರಿಕೆಯೊಂದಿಗೆ ಮಂಥನಕ್ಕೊಳಪಡಿಸಿದಾಗ ಉತ್ತಮ ಕಾವ್ಯ ಹುಟ್ಟಿಕೊಳ್ಳುತ್ತದೆ” ಎಂಬುದಾಗಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಯೋಗೀಶ್ ಕೈರೋಡಿಯವರು ಇಲ್ಲಿ ಮಾತನಾಡುತ್ತಾ ತಿಳಿಸಿದರು.
    ಕನ್ನಡ ಸಂಘ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಇವುಗಳ ಜಂಟಿ ಸಹಯೋಗ ಹಾಗೂ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆದ ತಿಂಗಳ ಅರಿವು ತಿಳಿವು ಉಪನ್ಯಾಸ ಕಾರ‍್ಯಕ್ರಮದಲ್ಲಿ ಅವರು “ಹೊಸಗನ್ನಡ ಕಾವ್ಯ – ಶಕ್ತಿ ಮತ್ತು ಸೌಂದರ‍್ಯ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
    ದಾರ್ಶನಿಕರು ಕಾವ್ಯದ ಬಗ್ಗೆ ಕಾವ್ಯ ಮೀಮಾಂಸೆಯಂತಹ ಹಲವು ಮಾರ್ಗದರ್ಶಿ ಕೃತಿಗಳನ್ನು ನೀಡಿದ್ದು ಅದರ ಅಧ್ಯಯನವಿಲ್ಲದೆ ಕಾವ್ಯವನ್ನು ಲಘುವಾಗಿ ಪರಿಗಣಿಸಿ ರಚಿಸಿದ ಕವನಗಳೆಲ್ಲವೂ ಅವಸರದ ಉತ್ಪನ್ನಗಳಾಗಿ ದೀರ್ಘಕಾಲ ಬಾಳಲಾರದು. ಪಾಶ್ಚಿಮಾತ್ಯ ವಿದ್ವಾಂಸರು ಕೂಡಾ ಕಾವ್ಯದ ಬಗ್ಗೆ ಗಂಭೀರವಾಗಿ ಚರ್ಚೆ, ವಾದ, ಪ್ರತಿಪಾದನೆಗಳನ್ನು ಮಾಡಿರುವುದನ್ನು ಗಮಿಸಿದರೆ ಕಾವ್ಯಕ್ಕೆ ಅವರು ಕೂಡಾ ಹೆಚ್ಚಿನ ಮಹತ್ವ ನೀಡುತ್ತಿದ್ದರು ಎಬುದನ್ನು ಮನಗಾಣಬಹುದಾಗಿದೆ. ಕವಿಗಳು ಕಾವ್ಯವನ್ನು ಲಘುವಾಗಿ ಪರಿಗಣಿಸದೆ ಗಂಭೀರವಾಗಿ ಚಿಂತಿಸಿದಲ್ಲಿ ಉತ್ತಮ ಕಾವ್ಯ ಕೃತಿಗಳನ್ನು ನೀಡಬಹುದಾಗಿದೆ ಎಂದರು.
    ಅತಿಥಿಗಳನ್ನು ಇದೇ ಸಂದರ್ಭದಲ್ಲಿ ಸ್ಮರಣಿಕೆಯೊಂದಿಗೆ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕನ್ನಡ ಸಂಘದ ಕರ‍್ಯಾಧ್ಯಕ್ಷರಾದ ಡಾ.ನಾ.ಮೊಗಸಾಲೆ, ಅ.ಭಾ.ಸಾ.ಪ.ದ ಕಾರ್ಕಳ ತಾಲೂಕಿನ ಗೌರವಾಧ್ಯಕ್ಷರಾದ ಶ್ರೀ ನಿತ್ಯಾನಂದ ಪೈ, ಅಧ್ಯಕ್ಷರಾದ ಶ್ರೀಮತಿ ಮಿತ್ರ‍್ರಪ್ರಭಾ ಹೆಗ್ಡೆ, ಏರ್ ಮಾರ್ಷಲ್ ರಮೇಶ್ ಕಾರ್ಣಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಲತಿ ವಸಂತರಾಜ್ ಕರ‍್ಯಕ್ರಮ ನಿರೂಪಿಸಿದರು. ಜಯಶ್ರೀ ಆದಿರಾಜ್ ಪ್ರಾರ್ಥಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಮಿತ್ರಾಪ್ರಭಾ ಹೆಗ್ಡೆ ವಂದಿಸಿದರು.

    • ಸದಾನಂದ ನಾರಾವಿ

    Share. Facebook Twitter Pinterest LinkedIn Tumblr WhatsApp Email
    Previous Article‘ರಜತ ಯಕ್ಷಮಣಿ’ ವಸುಂಧರಾ ಹರೀಶ್ ಶೆಟ್ಟಿ
    Next Article ಮಣಿಪಾಲದಲ್ಲಿ ರಾಗ ಧನ ಸಂಸ್ಥೆಯ “ರಾಗರತ್ನಮಾಲಿಕೆ”-11 
    roovari

    Add Comment Cancel Reply


    Related Posts

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025

    ಮಾಣಿಕ್ಯ ಪ್ರಕಾಶನದ 2025ನೇ ಸಾಲಿನ ರಾಜ್ಯಮಟ್ಟದ ವಿವಿಧ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ

    May 10, 2025

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಶಿವಮೊಗ್ಗದಲ್ಲಿ ಸಾಹಿತ್ಯ ಅಕಾಡೆಮಿ ವತಿಯಿಂದ ‘ಯುವ ಸಾಹಿತಿ’ | ಮೇ 10  

    May 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.