Subscribe to Updates

    Get the latest creative news from FooBar about art, design and business.

    What's Hot

    ‘ಬಾಲ ಸಾಹಿತ್ಯ ಚಿಗುರು ಪುರಸ್ಕಾರ’ಕ್ಕಾಗಿ ‘ನಕ್ಷತ್ರ ಪಟಲ’ ಕೃತಿ ಆಯ್ಕೆ

    May 12, 2025

    ಡಾ. ಮಾಲತಿ ಶೆಟ್ಟಿ ಮಾಣೂರು ಇವರಿಗೆ ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿ ಪ್ರಧಾನ

    May 12, 2025

    ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ವಿಶ್ವಾವಸು ನಾಟಕ ಪ್ರಾರಂಭೋತ್ಸವ | ಮೇ 17 ಮತ್ತು 18

    May 12, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಕಾಸರಗೋಡು ಕನ್ನಡ ಹಬ್ಬ’ದ ಅಂಗವಾಗಿ ‘ಕನ್ನಡ ಉಸಿರು’ ಕಾರ್ಯಕ್ರಮ
    Music

    ‘ಕಾಸರಗೋಡು ಕನ್ನಡ ಹಬ್ಬ’ದ ಅಂಗವಾಗಿ ‘ಕನ್ನಡ ಉಸಿರು’ ಕಾರ್ಯಕ್ರಮ

    June 15, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಪ್ಪಳ : ‘ಕಾಸರಗೋಡು ಕನ್ನಡ ಹಬ್ಬ’ದ ಅಂಗವಾಗಿ ರಂಗ ಚಿನ್ನಾರಿ ಕಾಸರಗೋಡು ಇದರ ಸಂಗೀತ ಘಟಕವಾದ ಸ್ವರ ಚಿನ್ನಾರಿ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದಲ್ಲಿ ತರುಣ ಕಲಾವೃಂದ ಐಲ ಉಪ್ಪಳ ಏರ್ಪಡಿಸಿದ ಸುಮಧುರ ಗೀತೆಗಳ ಗಾಯನ ಕಾರ್ಯಕ್ರಮವಾದ ‘ಕನ್ನಡ ಉಸಿರು’ ಕಾರ್ಯಕ್ರಮವು ದಿನಾಂಕ 25-05-2024ರಂದು ಐಲ ಶ್ರೀ ದುರ್ಗಾಪರಮೇಶ್ವರಿ ಕಲಾ ಭವನದಲ್ಲಿ ಜರಗಿತು.

    ಸಮಾರಂಭವನ್ನು ಉದ್ಘಾಟಿಸಿದ ನಟ ಹಾಗೂ ಸಾಹಿತಿಯಾದ ಶಶಿರಾಜ್ ರಾವ್ ಕಾವೂರು ಮಾತನಾಡಿ “ಕಲಾಪ್ರೇಮಿಗಳಿಗೆ ಸ್ವರ ಚಿನ್ನಾರಿಯು ರಸ ನಿಮಿಷಗಳನ್ನು ನೀಡಿದೆ.” ಎಂದು ತಿಳಿಸಿದರು. ಐಲ ಕ್ಷೇತ್ರದ ಆಡಳಿತ ಮೊಕೇಸರ ಕೋಡಿಬೈಲು ನಾರಾಯಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

    ಕನ್ನಡ ಉಸಿರು ಸಂಚಾಲಕ ಹಾಗೂ ರಂಗ ಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ “ಕಾಸರಗೋಡಿನ ಕಲಾಪ್ರತಿಭೆಗಳಿಗೆ ಒಂದು ವೇದಿಕೆಯನ್ನು ನೀಡುವುದು, ಆ ಮೂಲಕ ಅವರ ಪ್ರತಿಭೆಯನ್ನು ಪ್ರಕಾಶಿಸಲು ಅವಕಾಶ ಕೊಡುವುದು ಸ್ವರ ಚಿನ್ನಾರಿಯ ಉದ್ದೇಶವಾಗಿದೆ.” ಎಂದು ತಿಳಿಸಿದರು.

    ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ನಟ ಹಾಗೂ ಗಾಯಕ ಮೈಮ್ ರಾಮದಾಸ್ ತಮ್ಮ ಕಂಚಿನ ಕಂಠದಿಂದ ಸುಮಧುರ ಗೀತೆಗಳನ್ನು ಹಾಡಿ ಪ್ರೇಕ್ಷಕರನು ರಂಜಿಸಿದರು. ಇದೇ ಸಂದರ್ಭದಲ್ಲಿ ಸ್ಥಳೀಯ ಪ್ರತಿಭೆಯಾದ ಸಂಗೀತ ಗುರು ಸುನೀತಾ ಬೈಪಡಿತ್ತಾಯ ಇವರನ್ನು ಸನ್ಮಾನಿಸಲಾಯಿತು. ಐಲ ಕ್ಷೇತ್ರದ ಸೇವಾ ಸಮಿತಿಯ ಅಧ್ಯಕ್ಷ ಮಜಲು ಶಂಕರನಾರಾಯಣ ಹೊಳ್ಳ, ರಂಗ ಚಿನ್ನಾರಿ ನಿರ್ದೇಶಕರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ಕೆ.ಸತ್ಯನಾರಾಯಣ ಉಪಸ್ಥಿತರಿದ್ದರು.

    ಕಮಲಾಕ್ಷ ಐಲ ಸ್ವಾಗತಿಸಿ, ಸರಿತಾ ರಾಮ್ ಸನ್ಮಾನಿತರ ಪರಿಚಯ ಮಾಡಿ, ಪದ್ಮಾ ಮೋಹನದಾಸ್ ಕಾರ್ಯಕ್ರಮ ನಿರೂಪಿಸಿ, ಉದಯ ಕುಮಾರ್ ಐಲ ವಂದಿಸಿದರು. ಕಾಸರಗೋಡಿನ ಹಲವಾರು ಕಲಾಪ್ರತಿಭೆಗಳು ಹಿನ್ನಲೆ ಸಂಗೀತಗಾರರಾಗಿ, ಹಾಡುಗಾರರಾಗಿ ಕನ್ನಡ ಉಸಿರು ಸುಮಧುರ ಗೀತೆಗಳ ಗಾಯನವನ್ನು ಪ್ರೇಕ್ಷಕರ ಮುಂದಿರಿಸಿ ಮೆಚ್ಚುಗೆಗೆ ಪಾತ್ರರಾದರು. ಗಾಯಕರಾಗಿ ಕಿಶೋರ್ ಪೆರ್ಲ, ಗಣೇಶ್ ನಾಯಕ್ , ರತ್ನಾಕರ ಒಟ್ಟಂಬೆಟ್ಟು, ಪ್ರತಿಜ್ಞಾ ರಂಜಿತ್, ಅಕ್ಷತಾ ವರ್ಕಾಡಿ, ಬಬಿತಾ ಆಚಾರ್ಯ, ಮೈಮ್ ರಾಮ್ ದಾಸ್ ಹಾಗೂ ಬಿ. ಪಿ. ಗೋಪಾಲಕೃಷ್ಣ ಆಚಾರ್ಯ ಇವರಿಗೆ  ಕೀ ಬೋರ್ಡ್ ನಲ್ಲಿ  ಪುರುಷೋತ್ತಮ ಕೊಪ್ಪಳ್, ಹಾರ್ಮೋನಿಯಂ ನಲ್ಲಿ ಸತ್ಯನಾರಾಯಣ ಐಲ, ರಿದಂ ಪ್ಯಾಡ್ ನಲ್ಲಿ ಪ್ರಭಾಕರ ಮಲ್ಲ, ತಬ್ಲಾದಲ್ಲಿ ಶರತ್ ಪ್ರಭು ಪೆರ್ಲ ಸಹಕರಿಸಿದರು

    Share. Facebook Twitter Pinterest LinkedIn Tumblr WhatsApp Email
    Previous Articleಅಂಕೋಲಾದಲ್ಲಿ  ‘ದತ್ತಿನಿಧಿ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ’ | ಜೂನ್ 16   
    Next Article ‘ಪುರುಷ ನಾಟ್ಯ ವಿಲಾಸ’ ಏಕವ್ಯಕ್ತಿ ನೃತ್ಯ ಪ್ರದರ್ಶನ | ಜೂನ್ 16
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ‘ಆಲಾಪ್’ ಶಾಸ್ತ್ರೀಯ ಸಂಗೀತ ಕಛೇರಿ | ಮೇ 10

    May 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.