Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ‘ಕಾಲಜ್ಞಾನಿ ಕನಕ’ ನಾಟಕ ಪ್ರದರ್ಶನ | ಡಿಸೆಂಬರ್ 04

    December 3, 2025

    ಕುಂಜತ್ತೂರಿನಲ್ಲಿ ‘ಅಮ್ಮನೆಂಬ ವಿಸ್ಮಯ’ ಪರಿಕಲ್ಪನೆಯ ಕಾರ್ಯಕ್ರಮ

    December 3, 2025

    ಫರಂಗಿಪೇಟೆಯಲ್ಲಿ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ‘ವರ್ಣಾಂಜಲಿ’ | ಡಿಸೆಂಬರ್ 07

    December 3, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಪ್ಪಣ್ಣ 75 – ದಕ್ಷಿಣ ಕನ್ನಡದ ಜಾನಪದ ಅವಲೋಕನ ಕಾರ್ಯಕ್ರಮ
    News

    ಕಪ್ಪಣ್ಣ 75 – ದಕ್ಷಿಣ ಕನ್ನಡದ ಜಾನಪದ ಅವಲೋಕನ ಕಾರ್ಯಕ್ರಮ

    February 4, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕನ್ನಡನಾಡು ಕಂಡ ಅದ್ಭುತ ರಂಗಸಂಘಟಕ ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಜಿ.ಕಪ್ಪಣ್ಣ ಅವರಿಗೆ ಇದೀಗ 75ರ ಹರೆಯ.
    ಜಾನಪದ, ಹವ್ಯಾಸೀ ರಂಗಭೂಮಿ, ಸಾಹಿತ್ಯ, ಸಂಗೀತ, ನೃತ್ಯ ಮುಂತಾದ ಕನ್ನಡದ ಕಾರ್ಯಕ್ರಮಗಳನ್ನು ಸಂಘಟಿಸಿ ಜಗತ್ತಿನಾದ್ಯಂತ ತಲುಪಿಸಿದ ಶ್ರೀನಿವಾಸ್ ಜಿ. ಅವರು ‘ಕಪ್ಪಣ್ಣ’ ಎಂದೇ ಪ್ರಖ್ಯಾತರು. ಕರ್ನಾಟಕದಲ್ಲಿ ಜಾನಪದ ಉತ್ಸವಗಳನ್ನು ಆಯೋಜಿಸಿ ಪ್ರಖ್ಯಾತರಾದವರು. ಕರಾವಳಿ ಜಿಲ್ಲೆಗಳಿಗೂ ಅವರ ಸೇವೆ ಸಂದ ಹಿನ್ನೆಲೆಯಲ್ಲಿ ರಂಗಸಂಗಾತಿ, ಮಂಗಳೂರು ತಂಡವು ಇದೇ ಫೆ. 5, 2023 ರಂದು ಭಾನುವಾರ ಸಂಜೆ 5ಕ್ಕೆ ನಗರದ ಸಂತ ಅಲೋಶಿಯಸ್ ಕಾಲೇಜಿನ ಎಲ್.ಸಿ. ಆರ್. ಐ. ಸಭಾಂಗಣದಲ್ಲಿ ದಕ್ಷಿಣ ಕನ್ನಡದ ಜಾನಪದ ಅವಲೋಕನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
    ಹಿರಿಯ ವಿದ್ವಾಂಸರೂ ನಿವೃತ್ತ ಕುಲಪತಿಗಳೂ ಆಗಿರುವ ಪ್ರೊ. ಬಿ. ಎ. ವಿವೇಕ ರೈ, ಮಂಗಳೂರು ವಿಶ್ವ ವಿದ್ಯಾಲಯದ ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಪ್ರೊ.ಸೋಮಣ್ಣ, ಏರ್ಯ ಆಳ್ವ ಫೌಂಡೇಶನ್ನಿನ ಅಧ್ಯಕ್ಷರಾದ ಏರ್ಯ ಬಾಲಕೃಷ್ಣ ಹೆಗ್ಡೆ ಹಾಗೂ ಶ್ರೀನಿವಾಸ ಜಿ ಕಪ್ಪಣ್ಣ -ಮುಖ್ಯ ಅತಿಥಿಗಳಾಗಿರುವರು.
    ಕಾರ್ಯಕ್ರಮಕ್ಕೆ ಹೊಂದಿಕೊಂಡಂತೆ ಮಂಗಳೂರಿನ ನೃತ್ಯಗುರು ಪ್ರತಿಮಾ ಶ್ರೀಧರ ಹೊಳ್ಳ ಅವರ ‘ಭರತಾಂಜಲಿ’ ಕಲಾತಂಡವು ದಿ. ಏರ್ಯ ಲಕ್ಷ್ಮೀನಾರಾಯಣ ಆಳ್ವರ ಕವನಗಳನ್ನು ಹಾಗೂ ಜನಪದ ಕವನಗಳನ್ನು ನೃತ್ಯಕ್ಕೆ ಅಳವಡಿಸಿ ನೃತ್ಯ ವೈಭವ ಪ್ರದರ್ಶಿಸಲಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleನಟನ ರಂಗಶಾಲೆಯ ಡಿಪ್ಲೊಮಾ ವಿದ್ಯಾರ್ಥಿಗಳ ಮೊದಲ ಅಭ್ಯಾಸಿ ಪ್ರಯೋಗ ‘ತ್ರಿಪುರಾಣ’
    Next Article ನಾರಾಯಣ ಗುರುಗಳ ಚಳವಳಿ ಆಧಾರಿತ ನಾಟಕ “ಶೂದ್ರ ಶಿವ” – ಪ್ರಥಮ ಪ್ರದರ್ಶನ
    roovari

    Add Comment Cancel Reply


    Related Posts

    ಸ್ವರ, ತಾಳ, ಲಯಗಳ ಮಿಲನವೇ ಸಂಗೀತ – ನಿವೃತ್ತ ಡಿವೈಎಸ್ಪಿ ಟಿ.ಪಿ. ರಂಜಿತ್

    November 27, 2025

    ನೃತ್ಯಾಂತರಂಗದಲ್ಲಿ ಅಮೇರಿಕಾದ ಕಲಾವಿದೆಯಿಂದ ಅದ್ಭುತ ಕೂಚಿಪುಡಿ ನೃತ್ಯ

    November 27, 2025

    ಖ್ಯಾತ ಯಕ್ಷಗಾನ ಪ್ರಸಂಗಕರ್ತ, ತಾಳಮದ್ದಳೆ ಅರ್ಥಧಾರಿ, ಹವ್ಯಾಸಿ ಸ್ತ್ರೀ ವೇಷದಾರಿ ಕಂದಾವನ ರಘುರಾಮ ಶೆಟ್ಟಿ ನಿಧನ

    November 27, 2025

    ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಲ್ಲಿ “ಕೃಷ್ಣಾನಂದ ಲಹರಿ”

    November 26, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.