Subscribe to Updates

    Get the latest creative news from FooBar about art, design and business.

    What's Hot

    ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಕೊಡಗು ಜಿಲ್ಲಾ ಘಟಕದ ಪದಗ್ರಹಣ

    September 13, 2025

    ಮಲ್ಲೇಶ್ವರದ ಸೇವಾಸದನದಲ್ಲಿ ‘ಸಡನ್ನಾಗ್ ಸತ್ಹೋದ್ರೆ’ ನಾಟಕ ಪ್ರದರ್ಶನ | ಸೆಪ್ಟೆಂಬರ್ 14

    September 13, 2025

    ವಿವೇಕಾನಂದ ಕಾಲೇಜಿನಲ್ಲಿ “ವಿವೇಕ ಸ್ಮೃತಿ” ಉಪನ್ಯಾಸ ಮಾಲಿಕೆ ಕಾರ್ಯಕ್ರಮ

    September 13, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಣಿ ಕೃಷ್ಣಸ್ವಾಮಿ ಅಕಾಡಮಿಯಿಂದ ಸುರತ್ಕಲ್ ನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿ 
    Uncategorized

    ಮಣಿ ಕೃಷ್ಣಸ್ವಾಮಿ ಅಕಾಡಮಿಯಿಂದ ಸುರತ್ಕಲ್ ನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿ 

    September 8, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡಮಿ (ರಿ.) ಆಯೋಜಿಸುವ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿಗಳ ಉದ್ಘಾಟನಾ ಸಮಾರಂಭವು ದಿನಾಂಕ 17-09-2023ರ ಭಾನುವಾರದಂದು ಸಂಜೆ 6.05ಕ್ಕೆ ಸುರತ್ಕಲ್ಲಿನ ಸಿಟಿ ಗಾರ್ಡನ್ ಕ್ರಾಸ್ ರಸ್ತೆಯಲ್ಲಿರುವ ಭಾಗ್ಯ ರೆಸಿಡೆನ್ಸಿಯಲ್ಲಿ ನಡೆಯಲಿದೆ.

    ಆಧ್ಯಾತ್ಮಿಕವಾಗಿ ಅತ್ಯಂತ ಶ್ರೀಮಂತವೆನಿಸಿಕೊಂಡಿರುವ ಭಾರತದ ರಕ್ಷಣೆ ಈ ದೇಶದ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ ಮತ್ತು ಕರ್ತವ್ಯ. ರಕ್ಷಣೆ ಅನ್ನುವಾಗ ಮೂರು ವಿಷಯಗಳನ್ನು ಉಲ್ಲೇಖಿಸಬಹುದಾಗಿದೆ. ಮೊದಲನೆಯದಾಗಿ ಭೌಗೋಳಿಕವಾದ ಭಾರತದ ಗಡಿಯ ರಕ್ಷಣೆ, ಇದನ್ನು ರಕ್ಷಿಸಿಕೊಂಡು ಬರುತ್ತಿರುವವರು ನಮ್ಮ ವೀರ ಯೋಧರು. ಎರಡನೆಯದು ನಮಗೆಲ್ಲರಿಗೂ ಹೊಟ್ಟೆಗೆ ಹಿಟ್ಟು ಇಕ್ಕುವ ನಮ್ಮ ಹೆಮ್ಮೆಯ ರೈತರು. ಮೂರನೆಯದೇ ನಾವೆಲ್ಲರೂ ಹೆಮ್ಮೆಪಡುವಂತಹ ಭಾರತೀಯ ಕಲೆಗಳು ಮತ್ತು ಈ ಕಲೆಯನ್ನು ಸಾಧನೆಯ ಮೂಲಕ ಮೈಗೂಡಿಸಿಕೊಂಡ ನಮ್ಮ ಗೌರವದ ಕಲಾವಿದರು.

    ಪ್ರತಿಯೊಬ್ಬನಿಗೂ ಯೋಧನಾಗುವುದು ಮತ್ತು ರೈತನಾಗುವುದು ಅಸಾಧ್ಯವಾಗಬಹುದು. ಆದರೆ ಚಿತ್ರ, ನೃತ್ಯ, ಸಂಗೀತದಂತಹ ಲಲಿತ ಕಲೆಗಳನ್ನು ಅಭ್ಯಸಿಸಿ ಉತ್ತಮ ಪ್ರಜೆಯಾಗುವುದರ ಜೊತೆಗೆ ಸ್ವಾಸ್ಥ್ಯ ಸಮಾಜವನ್ನು ಕಟ್ಟುವ ಅವಕಾಶ ಕಲಾವಿದನಿಗೆ ಮಾತ್ರ ಲಭ್ಯವಾಗಬಹುದಾದ ಸಂಪತ್ತು. ಇಂತಹ ಅವಕಾಶವನ್ನು ಯುವ ಜನಾಂಗಕ್ಕೆ ನೀಡುವ ಶ್ರೇಷ್ಠ ಉದ್ದೇಶವನ್ನು ಇರಿಸಿಕೊಂಡು ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿಯನ್ನು ಪ್ರಾರಂಭಿಸಲು ನಿಶ್ಚಯಿಸಲಾಗಿದೆ.

    ನಿಯಮಗಳು :
    ಇದು ತಂಡಗಳಿಗೆ ಕಲಿಸುವ ತರಗತಿ.(group class). ತರಗತಿಗೆ ಸೇರಲು ಇಚ್ಚಿಸುವವರಿಗೆ ಜಾತಿ, ಧರ್ಮ, ಲಿಂಗದ ಭೇದವಿರುವುದಿಲ್ಲ. ಕನಿಷ್ಠ 8 ವರ್ಷ ವಯಸ್ಸಾಗಿರಬೇಕು ಮತ್ತು ವಯಸ್ಸಿಗೆ ಗರಿಷ್ಠ ಮಿತಿ ಇರುವುದಿಲ್ಲ. ವಾರಕ್ಕೊಂದು ತರಗತಿಯು ನಿಗದಿತ ದಿನ ಹಾಗೂ ಸಮಯದಲ್ಲಿ ನಡೆಯಲಿದೆ. ತರಗತಿಯ ಅವಧಿ ಒಂದು ಗಂಟೆ, ಪ್ರತಿಯೊಬ್ಬ ವಿದ್ಯಾರ್ಥಿಗೆ ತಿಂಗಳ ಶುಲ್ಕ ರೂ 500.00. ಒಂದು ಮನೆಯಿಂದ ಒಬ್ಬರಿಗಿಂತ ಹೆಚ್ಚು ವಿದ್ಯಾರ್ಥಿಗಳಿದ್ದಲ್ಲಿ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುವುದು. ಶುಲ್ಕವನ್ನು ತಿಂಗಳ ಪ್ರಾರಂಭದಲ್ಲಿ ನೀಡಬೇಕು. ಯಾವುದೇ ಕಾರಣದಿಂದ ವಿದ್ಯಾರ್ಥಿ ತರಗತಿಗೆ ಗೈರು ಹಾಜರಾದಲ್ಲಿ ಶುಲ್ಕದಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲ. ವಿದ್ಯಾರ್ಥಿಗಳು ತರಗತಿಯಲ್ಲಿ ಸಮಯಕ್ಕೆ ಮುಂಚಿತವಾಗಿ ಹಾಜರಿರಬೇಕು ಮತ್ತು ತರಗತಿ ಮುಗಿದ ಬಳಿಕವೇ ನಿರ್ಗಮಿಸಬೇಕು. ಯಾವುದೇ ಸ್ಪರ್ಧೆ ಅಥವಾ ಪ್ರದರ್ಶನಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಸಂಘಟಕರ ಅನುಮತಿ ಬೇಕಾಗಿಲ್ಲ. ವಿದ್ಯಾರ್ಥಿಗಳ ಹೆತ್ತವರಿಗೆ ತರಗತಿಯಲ್ಲಿ ಕುಳಿತುಕೊಳ್ಳುವ ಅವಕಾಶವಿದೆ ಆದರೆ ಅವರ ಉಪಸ್ಥಿತಿ ಯಾವುದೇ ತರಗತಿಗೆ ತೊಂದರೆಯಾಗ ಕೂಡದು. ಕಲಿಸಿಕೊಡಬೇಕಾದ ವಿಷಯ ಸಂಪೂರ್ಣವಾಗಿ ಗುರುಗಳ ಆಯ್ಕೆ ಆಗಿರುತ್ತದೆ.

    ಹೆಚ್ಚಿನ ಮಾಹಿತಿಗಾಗಿ 7406043003, 9663698398 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.

    Share. Facebook Twitter Pinterest LinkedIn Tumblr WhatsApp Email
    Previous Articleಕುಕ್ಕುಜಡ್ಕದ ಚೊಕ್ಕಾಡಿ ಪ್ರೌಢಶಾಲೆಯಲ್ಲಿ ಜನಪದ ಸಾಂಸ್ಕೃತಿಕ ವೈಭವ ‘ನಲಿಪು -2023’
    Next Article ಭರವಸೆಯ ನೃತ್ಯಕಲಾವಿದೆ ಮಾಧುರ್ಯ ಸುರೇಂದ್ರ ರಂಗಪ್ರವೇಶ | ಸಪ್ಟೆಂಬರ್ 10ರಂದು ಬೆಂಗಳೂರಿನಲ್ಲಿ
    roovari

    Add Comment Cancel Reply


    Related Posts

    ಲೇಖನ | ‘ಹಕ್ಕಿಗೆ ಗರಿ ಇದ್ದಂತೆ ಕವಿಗೆ ಕವನ’ ದ.ರಾ. ಬೇಂದ್ರೆ

    September 11, 2025

    ಅನುಪಲ್ಲವಿಯ ಶ್ರೀ ವಿಶ್ವೇಶತೀರ್ಥ ಸಭಾಂಗಣದ ಉದ್ಘಾಟನಾ ಸಮಾರಂಭ | ಸೆಪ್ಟೆಂಬರ್ 13

    September 11, 2025

    ಧಾರವಾಡದಲ್ಲಿ ‘ಶ್ರಾವಣದ ಕವಿ ಬೇಂದ್ರೆ’ ಕಾರ್ಯಕ್ರಮ | ಆಗಸ್ಟ್ 22

    August 8, 2025

    ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ರಾಜ್ಯ ಮಟ್ಟದ ವೈಜ್ಞಾನಿಕ, ವೈಚಾರಿಕ ಸಾಹಿತ್ಯ ಸಮಾವೇಶ -2025 | ಜುಲೈ 03 

    August 2, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.