Subscribe to Updates

    Get the latest creative news from FooBar about art, design and business.

    What's Hot

    ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ್ಸ್ ಪ್ರವೇಶಾತಿ ಅರ್ಜಿ ಆಹ್ವಾನ

    June 7, 2025

    ಕವನ – ಚೆಲುವಿನ ಸೃಷ್ಟಿ

    June 7, 2025

    ಮಡಿಕೇರಿಯಲ್ಲಿ ‘ಬೂಕರ್ ಪ್ರಶಸ್ತಿ’ ಪುರಸ್ಕೃತೆ ದೀಪಾ ಭಾಸ್ತಿಯವರಿಗೆ ಗೌರವ | ಜೂನ್ 09

    June 7, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕ.ಸಾ.ಪ.ದಿಂದ ಬೇಂದ್ರೆ ಜನ್ಮದಿನದ ಕಾರ್ಯಕ್ರಮ
    Literature

    ಕ.ಸಾ.ಪ.ದಿಂದ ಬೇಂದ್ರೆ ಜನ್ಮದಿನದ ಕಾರ್ಯಕ್ರಮ

    February 3, 2024No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ನವೀಕೃತ ಕುವೆಂಪು ಸಭಾಂಗಣದಲ್ಲಿ ದಿನಾಂಕ 31-01-2024ರಂದು 128ನೆಯ ಬೇಂದ್ರೆ ಜನ್ಮದಿನದ ಕಾರ್ಯಕ್ರಮ ನಡೆಯಿತು.

    ಈ ಕಾರ್ಯಕ್ರಮದಲ್ಲಿ ಮಾತನಾಡಿದ ನಾಡೋಜ ಡಾ. ಮಹೇಶ ಜೋಶಿಯವರು ಬೇಂದ್ರೆಯವರಿಗೆ ಜ್ಞಾನಪೀಠ ಬಂದಾಗ ಧಾರವಾಡದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆದಿತ್ತು. ಅದಕ್ಕೆ ಬಂದ ಜನ ಕಡಿಮೆ ಎಂದು ಯಾರೋ ವ್ಯಾಖ್ಯಾನಿಸಿದಾಗ ಬೇಂದ್ರೆ ‘ಇದು ಲಕ್ಷ ಮಂದಿ ಸೇರೊ ಕಾರ್ಯಕ್ರಮವಲ್ಲ ಲಕ್ಷ್ಯ ಕೊಟ್ಟು ಕೇಳೋ ಮಂದಿ ಇರೋ ಕಾರ್ಯಕ್ರಮ’ ಎಂದಿದ್ದರು. ಬೇಂದ್ರೆಯವರಿಗೆ ಜ್ಞಾನಪೀಠ ಬಂದಾಗ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಅವರನ್ನು ಕರೆ ತರುವ ಹೊಣೆ ತಮ್ಮದಾಗಿತ್ತು ಎಂದು ನೆನಪಿಸಿಕೊಂಡ ಅವರು ಅವತ್ತಿನ ಬೇಂದ್ರೆ ಉಪನ್ಯಾಸದ ಪ್ರತಿ ಪದವೂ ತಮ್ಮ ನೆನಪಿನಲ್ಲಿ ಉಳಿದಿದ್ದು ಅದನ್ನು ಕೇಳಿ ಕಣ್ಣೀರಿಡದ ಸಭಿಕರೇ ಇರಲಿಲ್ಲ ಎಂದು ನೆನಪು ಮಾಡಿಕೊಂಡರು. ಈ ರೀತಿಯಲ್ಲಿ ಬೇಂದ್ರೆಯವರನ್ನು ‘ಮನಸುಖರಾಯ’ ಎಂದು ಕರೆದ ನಾಡೋಜ ಮಹೇಶ ಜೋಶಿ. ಅವರು ಈ ಜಗತ್ತಿನಲ್ಲಿದ್ದರೂ ಅದನ್ನು ಮೀರಿದ್ದರು ಎಂದು ಹೇಳಿ ಬದುಕಿನಲ್ಲಿ ಮೂಲ ಪ್ರೇಮವನ್ನು ಹಿಡಿದ ಅವರನ್ನು ‘ಒಲವಿನ ವೇದಾಂತಿ’ ಎಂದು ಕರೆದರು.

    ಬೇಂದ್ರೆಯವರು ಒಂದು ರೀತಿಯಲ್ಲಿ ಹುಟ್ಟು ಕವಿ. ಅವರ ಮಾತೇ ಕಾವ್ಯದ ಪ್ರವಾಹದಂತೆ ಇರುತ್ತಿತ್ತು. ‘ಗರಿ’ ಸಂಕಲನದಲ್ಲಿನ ‘ನರಬಲಿ’ ಕವಿತೆ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಸೆರೆವಾಸವನ್ನೂ ಕೂಡ ಅವರು ಅನುಭವಿಸಿದ್ದರು. ಇಹ ಮತ್ತು ಪರ ಎರಡೂ ನೆಲೆಯ ಕವಿತೆಗಳನ್ನು ಬರೆದ ಬೇಂದ್ರೆ ರಂಗಭೂಮಿ, ಚಲನಚಿತ್ರದ ಬಗೆಗೂ ಆಸಕ್ತಿಯನ್ನು ಇಟ್ಟುಕೊಂಡಿದ್ದರು. 1943ರಲ್ಲಿ ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು. ಅವರ ‘ಅರಳು ಮರಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಗೌರವ ಬಂದರೆ ‘ನಾಕುತಂತಿ’ ಜ್ಞಾನಪೀಠ ಪುರಸ್ಕಾರಕ್ಕೆ ಪಾತ್ರವಾಗಿತ್ತು. ಪದ್ಮಶ್ರೀ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರರಾದ ಅಂಬಿಕಾ ತನಯ ದತ್ತರು ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿದ ಮಹನೀಯರಲ್ಲಿ ಪ್ರಮುಖರು. 1934ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವಸಂತೋತ್ಸವದಲ್ಲಿ ಬೇಂದ್ರೆಯವರು ನೀಡಿದ ಉಪನ್ಯಾಸ ಇವತ್ತಿಗೂ ಚಾರಿತ್ರಿಕ ಎಂದು ಪರಿಗಣಿತವಾಗಿದೆ. ಕುವೆಂಪು ಸಭಾಂಗಣದಲ್ಲಿ ಬೇಂದ್ರೆ ಕಾರ್ಯಕ್ರಮ ನಡೆಯುತ್ತಿರುವುದು ನಿಜಕ್ಕೂ ಅರ್ಥಪೂರ್ಣ. ಅವಧೂತರಂತೆಯೇ ಇದ್ದ ಬೇಂದ್ರೆ ತಮ್ಮನ್ನು ಶರೀಫಜ್ಜನ ಗುರು ಗೋವಿಂದ ಭಟ್ಟರ ಮರಿ ಮೊಮ್ಮೊಗ ಎಂದೇ ಕರೆಯುತ್ತಿದ್ದರು. ಬಡತನದಲ್ಲಿಯೇ ಬೆಳೆದರೂ ಬೇಂದ್ರೆ ಬದುಕನ್ನು ಅಪ್ಪಟವಾಗಿ ಪ್ರೀತಿಸಿ ‘ಬಡನೂರು ವರುಷನ ಹರುಷಾದಿ ಕಳೆಯೋಣ’ ಎಂದು ಭರವಸೆಯ ಮಾತುಗಳನ್ನು ಆಡಿದ್ದರು.

    ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಹಿರಿಯ ಚಿಂತಕ ಡಾ. ಬಸವರಾಜ ಸಬರದ ಅವರು “ಬೇಂದ್ರೆಯವರು ಯುಗದ ಕವಿ, ಬೇಂದ್ರೆಯವರ ಕಾವ್ಯ ವಾಚ್ಯಾರ್ಥಗಳನ್ನು ಮೀರಿದ್ದು. ಅಲ್ಲಮನಂತೆ ಅರ್ಥವನ್ನು ದಾಟಿ ಅನುಭಾವವನ್ನು ತಲುಪಿದ್ದು, ಅವರ ಒಂದೊಂದು ಕವಿತೆಯ ಕುರಿತು ಒಂದೊಂದು ಪುಸ್ತಕ ಬರೆಯಬಹುದು ಎಂದು ಹೇಳಿ ಬೇಂದ್ರೆಯವರು ಯಾವತ್ತೂ ಏನನ್ನೂ ಕೇಳಿದವರಲ್ಲ. ಈಗ ಬೇಂದ್ರೆ ಟ್ರಸ್ಟ್ ಕೂಡ ಹಣದ ಕೊರತೆಯಿಂದ ನರಳುತ್ತಿದೆ. ಸರ್ಕಾರ ಇದರ ಕುರಿತು ಗಮನ ಹರಿಸಬೇಕು” ಎಂದು ಹೇಳಿದರು.

    ವಿಶೇಷ ಉಪನ್ಯಾಸ ನೀಡಿದ ಬರಹಗಾರ್ತಿ ಬೇಂದ್ರೆ ಕಾವ್ಯದ ಕುರಿತು ವಿಶೇಷ ಅಧ್ಯಯನ ಮಾಡಿದವರೂ ಆದ ಡಾ. ಗೀತಾ ವಸಂತ “ಬೇಂದ್ರೆ ಹುಟ್ಟು ಸಾವು ಮೀರಿದ ಪ್ರಜ್ಞೆಯ ನಿರಂತರ ಪ್ರವಾಹದ ವಿಶೇಷ ಚೇತನ, ಅವರು ಅಪ್ಪಟ ದೇಸಿಯೂ ಹೌದು ಅವಧೂತರೂ ಹೌದು, ಜನವಾಣಿಯನ್ನು ಆತ್ಮವಾಣಿಯಾಗಿಸಿದ ಬೇಂದ್ರೆಯವರ ಕಾವ್ಯದ ಧ್ವನಿಯನ್ನು ಹಿಡಿಯುವುದು ಕಷ್ಟ. ನೋವನ್ನೇ ನುಂಗಿದರೂ ಆನಂದ ಉಣಿಸಿದ ವಿಶೇಷ ಚೇತನ ಅವರು. ಪಟ್ಟ ಪಾಡನ್ನೆಲ್ಲಾ ಹುಟ್ಟು ಹಾಡಾಗಿಸುವ ಬೇಂದ್ರೆ ಬದುಕಿನ ಎಲ್ಲಾ ಅನುಭವಗಳನ್ನೂ ರಸವಾಗಿಸಿದರು. ‘ರಸವೇ ಜನನ – ವಿರಸ ಮರಣ – ಸಮರಸವೇ ಜೀವನ’ ಎನ್ನುವುದು ಅವರ ಚಿಂತನೆಯ ಸಾರ. ಅಗಾಧವಾದ ಕಡಲನ್ನು ಬೊಗಸೆಯಲ್ಲಿ ಹಿಡಿಯುವುದು ಎಷ್ಟು ಕಷ್ಟವೋ ಬೇಂದ್ರೆಯವರ ಕಾವ್ಯದ ಕುರಿತು ಮಾತನಾಡುವುದೂ ಅಷ್ಟೇ ಕಷ್ಟ. ವಿಶ್ವ ಮೂಲದ ರೂಪಕಗಳನ್ನು ಅವರು ಪಾತಳಿಯಿಂದ ಎತ್ತಿ ಕಾವ್ಯದಲ್ಲಿ ಹಿಡಿದಿದ್ದಾರೆ. ತಮ್ಮನ್ನು ಐದು ಐದೆಯರ ಮಗ ಎಂದು ಕರೆದುಕೊಂಡ ಅವರು ಕರಳು ಬಳ್ಳಿಯ ಸೊಲ್ಲನ್ನು ಆಲಿಸಿದವರು. ವಿಶ್ವದ ಜೊತೆಗಿನ ನಮ್ಮ ಹೊಕ್ಕಳ ಬಳ್ಳಿಯ ಸಂಬಂಧವನ್ನು ಗುರುತಿಸಿದ ಬೇಂದ್ರೆ ಅನುಭವದ ನೆಲೆಯನ್ನು ಅನುಭಾವಕ್ಕೆ ಹಿಗ್ಗಿಸಿದರು. ಬೇಂದ್ರೆ ಕಾವ್ಯದಲ್ಲಿ ನರ್ತನದ ಗುಂಗು ಮತ್ತು ಅನುಭಾವದ ಹಿಗ್ಗು ಮೇಳೈಸಿದೆ ಇಡೀ ಬ್ರಹ್ಮಾಂಡವೇ ಅವರ ಪಾಲಿಗೆ ಸಿಂಫೋನಿಯಂತೆ ಇತ್ತು. ನೋಟ ಬೇರೆ ಕಾಣುವುದು ಬೇರೆ ಎಂದು ಬೇಂದ್ರೆ ಗುರುತಿಸಿದ್ದರು” ಎಂದು ಹೇಳಿದರು.

    ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ ಪಾಂಡು ಅವರು ನಿರೂಪಿಸಿದರೆ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ ಸ್ವಾಗತ ಕೋರಿದರು. ಡಾ. ಪದ್ಮಿನಿ ನಾಗರಾಜು ಅವರು ವಂದಿಸಿದರು. ಅನೇಕ ಬೇಂದ್ರೆ ಅಭಿಮಾನಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಕೊಡವೂರಿನ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮ | ಫೆಬ್ರವರಿ 5, 12, 19 ಮತ್ತು 26
    Next Article ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಗೋವಿಹಾರ ಧಾಮದಲ್ಲಿ ‘ಧರ್ಮಧೇನು’ ನೃತ್ಯ ರೂಪಕ | ಫೆಬ್ರವರಿ 4
    roovari

    Add Comment Cancel Reply


    Related Posts

    ಕವನ – ಚೆಲುವಿನ ಸೃಷ್ಟಿ

    June 7, 2025

    ಮಡಿಕೇರಿಯಲ್ಲಿ ‘ಬೂಕರ್ ಪ್ರಶಸ್ತಿ’ ಪುರಸ್ಕೃತೆ ದೀಪಾ ಭಾಸ್ತಿಯವರಿಗೆ ಗೌರವ | ಜೂನ್ 09

    June 7, 2025

    ಡಾ. ಇಂದಿರಾ ಹೆಗ್ಗಡೆ ಇವರಿಗೆ ‘ಡಾ. ಎಂ. ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ’

    June 7, 2025

    ಮೈಸೂರಿನಲ್ಲಿ ‘ರಾಜ್ಯಮಟ್ಟದ ಮೇಘಮೈತ್ರಿ 8ನೇ ಕನ್ನಡ ಸಾಹಿತ್ಯ ಸಮ್ಮೇಳನ -2025’ | ಜೂನ್ 08

    June 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.