Subscribe to Updates

    Get the latest creative news from FooBar about art, design and business.

    What's Hot

    ತಿಂಗಳ ನಾಟಕ ಸಂಭ್ರಮದಲ್ಲಿ ‘ನೆಲ ಮುಗಿಲು’ ನಾಟಕ ಪ್ರದರ್ಶನ | ಜೂನ್ 21

    June 18, 2025

    ಬಲಮುರಿ ಶ್ರೀ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ತಿಂಗಳ ಸರಣಿ ತಾಳಮದ್ದಳೆ

    June 18, 2025

    ಬೆಂಗಳೂರಿನಲ್ಲಿ ‘ನಿಮ್ಮೊಳಗಿನ ಜಗತ್ತು’ ನಟನಾ ಕಾರ್ಯಾಗಾರ | ಜೂನ್ 29ರಿಂದ ಜುಲೈ 05

    June 18, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಲಾಕುಂಚದಿಂದ ವ್ಯಂಗ್ಯಚಿತ್ರ ರಚನಾ ತರಬೇತಿ ಶಿಬಿರ
    Visual Arts

    ಕಲಾಕುಂಚದಿಂದ ವ್ಯಂಗ್ಯಚಿತ್ರ ರಚನಾ ತರಬೇತಿ ಶಿಬಿರ

    May 24, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಕಲಾಕುಂಚ ದಾವಣಗೆರೆ ಸಂಸ್ಥೆಯ ಕಾಸರಗೋಡು ಗಡಿನಾಡು ಶಾಖೆಯ ವತಿಯಿಂದ 21-05-2023ರಂದು ಮಂಗಲ್ಪಾಡಿ ಶಾರದಾ ಭಜನಾ ಮಂದಿರದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವ್ಯಂಗ್ಯ ಚಿತ್ರ ರಚನಾ ತರಬೇತಿ ಶಿಬಿರವು ನಡೆಯಿತು. ಖ್ಯಾತ ಕವಿ ಶ್ರೀ ವಿ.ಬಿ.ಕುಳಮರ್ವರವರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದು, ವಿಶ್ರಾಂತ ಕನ್ನಡ ಪ್ರೊಫೆಸರ್ ಹಾಗೂ ಪ್ರಿನ್ಸಿಪಾಲ್ ಶ್ರೀ ಪಿ.ಎನ್ ಮೂಡಿತ್ತಾಯರವರು ಸುಂದರವಾದ ರೇಖಾ ಚಿತ್ರವೊಂದನ್ನು ಬಿಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ವಿರಾಜ್ ಅಡೂರು ಅವರು ತರಬೇತಿ ನೀಡಿದರು. ಕಲಾಕುಂಚ ಕೇರಳ ಘಟಕದ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಕಾರಂತ್ ಹಾಗೂ ಶ್ರೀ ರಾಮ ಕಾರಂತ್ ಕೋರ್ತಿಮಾರು ಉಪಸ್ಥಿತರಿದ್ದರು.

    ಶ್ರೀಮತಿ ಶಶಿಕಲಾ ಮಯ್ಯ ಸ್ವಾಗತಿಸಿ, ಶ್ರೀಮತಿ ಜಯಲಕ್ಷ್ಮಿ ಆರ್. ಹೊಳ್ಳ ವಂದಿಸಿದರು. ಸಾಧಾರಣ ಇಪ್ಪತ್ತೊಂದು ಮಕ್ಕಳು ಶಿಬಿರಾರ್ಥಿಗಳಾಗಿ ಆಸಕ್ತಿಯಿಂದ ಭಾಗವಹಿಸಿದ್ದ, ಅದೊಂದು ಸುಂದರ ಶಿಬಿರ ಮತ್ತು ಬೇಸಿಗೆಯ ರಜಾ ದಿನಗಳನ್ನು ಸದುಪಯೋಗ ಪಡಿಸಿಕೊಳ್ಳಲು ಈ ರೀತಿಯ ಶಿಬಿರಗಳು ಸಹಕಾರಿ.

    ಶ್ರೀ ವಿರಾಜ್ ಅಡೂರು ಸರ್ ರವರು ಮಕ್ಕಳಿಗೆ ವ್ಯಂಗ್ಯಚಿತ್ರ ಅಂದರೆ ಏನು, ಅದನ್ನು ಸರಳ ರೇಖೆಗಳ ಮೂಲಕ ಹೇಗೆ ರಚಿಸಬಹುದು ಎಂಬುದನ್ನು ಹೇಳಿಕೊಟ್ಟರು. ಮಕ್ಕಳಿಗೆಲ್ಲಾ ಒಂದು ಆನೆಯ ಚಿತ್ರ, ಅದರ ಮೇಲೆ ಸವಾರ ಇರುವಂತೆ ಬಿಡಿಸಲು ಹೇಳಿದರು. ಅತ್ಯುತ್ತಮವಾಗಿ ರಚಿಸಿದ ಶಿಬಿರಾರ್ಥಿಗೆ ಪುಸ್ತಕ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಎರಡು ತಂಡಗಳ ಮಧ್ಯೆ ರಸಪ್ರಶ್ನೆ ಸ್ಪರ್ಧೆಯೂ ನಡೆಯಿತು. ಕಾರ್ಯಕ್ರಮದ ಅವಲೋಕನೆಯ ಕುರಿತಾಗಿ ಸ್ಪರ್ಧೆಯನ್ನು ಶ್ರೀಮತಿ ಜಯಲಕ್ಷ್ಮಿ ಕಾರಂತ್ ನಡೆಸಿಕೊಟ್ಟರು.

    ಕಾರ್ಯಕ್ರಮದ ಕೊನೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ವಿಜೇತರಿಗೆ ಪುಸ್ತಕ ಬಹುಮಾನ ನೀಡಿ ಗೌರವಿಸಲಾಯಿತು. ಬಹುಮಾನ ವಿಜೇತರು : ರಸಪ್ರಶ್ನೆ : ದೇವಾಂಶು ಕಾರಂತ, ಚಿತ್ರರಚನೆ: ಶಾಶ್ವತ್ ವಿ.ಎ, ಹಾಗೂ ಉತ್ತಮ ಶಿಬಿರಾರ್ಥಿ: ಶಿವ ಚಂದನ ನಾವಡ. ಶ್ರೀ ವಿರಾಜ್ ಅಡೂರು ಇವರನ್ನೂ ಈ ಸಂದರ್ಭದಲ್ಲಿ ಗೌರವಿಸಲಾಯಿತು. ಸಂಪೂರ್ಣ ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀಮತಿ ಶಶಿಕಲಾ ಮಯ್ಯರವರು ನಿರ್ವಹಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Article‘ಪುಣ್ಯನೆಲ ಪೆರಣಂಕಿಲ’ ಭಕ್ತಿ ಕರಂಡಿಕೆ ಬಿಡುಗಡೆ
    Next Article ಮೈಸೂರು ಅಸೋಸಿಯೇಶನ್ ಮುಂಬಯಿ – “ಜಾಗತಿಕ ಕನ್ನಡ ಏಕಾಂಕ ನಾಟಕ ರಚನಾ ಸ್ಪರ್ಧೆ’ -2022, ಬಹುಮಾನ ವಿತರಣೆ | ಮೇ 28ಕ್ಕೆ
    roovari

    Add Comment Cancel Reply


    Related Posts

    ಮೈಸೂರಿನಲ್ಲಿ ಪ್ರೇರಣಾ ಕಲಾ ಕಾರ್ಯಾಗಾರ | ಜೂನ್ 28

    June 12, 2025

    ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ್ಸ್ ಪ್ರವೇಶಾತಿ ಅರ್ಜಿ ಆಹ್ವಾನ

    June 7, 2025

    ದೃಶ್ಯಕಲೆ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನ

    April 29, 2025

    ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ‘ಸಮರ್ಪಣಂ ಕಲೋತ್ಸವ 2025’ | ಏಪ್ರಿಲ್ 03

    March 27, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.