Subscribe to Updates

    Get the latest creative news from FooBar about art, design and business.

    What's Hot

    ಮೈಸೂರಿನ ರಂಗಯಾನ ಟ್ರಸ್ಟ್ ಸಂಸ್ಥೆಯಿಂದ ರಂಗಭೂಮಿ ಡಿಪ್ಲೋಮಾಕ್ಕೆ ಅರ್ಜಿ ಆಹ್ವಾನ

    June 7, 2025

    ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತಿಗಳ ಜನ್ಮದಿನಾಚರಣೆ

    June 7, 2025

    Article | The End of an Era in the Malayalam Literary World

    June 7, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಣಿಪಾಲದಲ್ಲಿ ಕಾಸರಗೋಡು ಚಿನ್ನಾ ನಿರ್ದೇಶನದ “ಕರ್ಮಾಧೀನ” ಮತ್ತು “ಎಕ್ಲೊ ಆನೇಕ್ಲೊ” ಕೊಂಕಣಿ ನಾಟಕ
    News

    ಮಣಿಪಾಲದಲ್ಲಿ ಕಾಸರಗೋಡು ಚಿನ್ನಾ ನಿರ್ದೇಶನದ “ಕರ್ಮಾಧೀನ” ಮತ್ತು “ಎಕ್ಲೊ ಆನೇಕ್ಲೊ” ಕೊಂಕಣಿ ನಾಟಕ

    March 2, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    02 ಮಾರ್ಚ್ 2023, ಮಣಿಪಾಲ: “ಕೊಂಕಣಿ ರಂಗಭೂಮಿ”ಗೆ ಚಿನ್ನಾ ಕೊಡುಗೆ ಅನನ್ಯವಾದದ್ದು – ಟಿ. ಅಶೋಕ್ ಪೈ
    ಕೊಂಕಣಿ ರಂಗಭೂಮಿಯನ್ನು ಜನ ಸಮಾನ್ಯರೆಡೆಗೆ ಕೊಂಡೊಯ್ಯಲು ಕಾಸರಗೋಡು ಚಿನ್ನಾ ಮಾಡಿರುವ ಕೆಲಸ ಅನನ್ಯವಾದದ್ದು. ಮಲಯಾಳಂ ಹಾಗೂ ಕನ್ನಡ ಭಾಷೆಯ ಎರಡು ಕಿರು ನಾಟಕಗಳನ್ನು ಕೊಂಕಣಿ ಭಾಷೆಗೆ ಭಾಷಾಂತರಿಸಿ ರಂಗಕ್ಕೇರಿಸುವುದೆಂದರೆ ಅದು ಸುಲಭದ ಕೆಲಸವಲ್ಲ. ಇಂಥಹ ಕ್ರಿಯಾತ್ಮಕವಾದ ಕೆಲಸಗಳಲ್ಲಿ ಡಾ| ಟಿ.ಎಂ.ಎ. ಪೈ ಪ್ರತಿಷ್ಠಾನದವರು ಯಾವತ್ತೂ ಜೊತೆಗಿರುತ್ತೇವೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಅಶೋಕ ಪೈ ಅವರು ಹೇಳಿದರು.
    ಅವರು ಮಣಿಪಾಲದ ಆ್ಯಂಫಿ ಥಿಯೇಟರ್ ನಲ್ಲಿ ಫೆಬ್ರವರಿ 25ರಂದು ಕಾಸರಗೋಡು ಚಿನ್ನಾ ನಿರ್ದೇಶನದ “ಕರ್ಮಾಧೀನ” ಮತ್ತು “ಎಕ್ಲೊ ಆನೇಕ್ಲೊ” ಕೊಂಕಣಿ ನಾಟಕವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.
    ಡಾ| ಟಿ.ಎಂ.ಎ. ಪೈ ಪ್ರತಿಷ್ಠಾನ ಹಾಗೂ ಮಾಹೆ ವಿಶ್ವ ವಿದ್ಯಾನಿಲಯದ ಸಹಯೋಗದೊಂದಿಗೆ ಏರ್ಪಡಿಸಲ್ಪಟ್ಟ ನಾಟಕ ಪ್ರದರ್ಶನಕ್ಕೆ ಮುಖ್ಯ ಅತಿಥಿಯಾಗಿ ಮಾತನಾಡಿದ ಮಾಹೆ ವಿಶ್ವ ವಿದ್ಯಾನಿಲಯದ ನಿರ್ದೇಶಕ ಗಿರಿಧರ ಕಿಣಿಯವರು ಅಪರೂಪವಾಗುತ್ತಿರುವ ಕೊಂಕಣಿ ರಂಗಭೂಮಿಗೆ ಜೀವ ತುಂಬುತ್ತಿರುವ ಚಿನ್ನಾ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶುಭಾಶಂಸನೆ ನೀಡಿದ ಖ್ಯಾತ ಕವಿ, ಲೇಖಕ ಮನೋಹರ ನಾಯಕ್ ಅವರು ಒಳ್ಳೆಯ ಕೃತಿಗಳು ಯಾವ ಭಾಷೆಯಲ್ಲೇ ಇರಲಿ, ಅದು ಕೊಂಕಣಿ ಭಾವಾನುವಾದ ಆಗಬೇಕಾದ ಅಗತ್ಯತೆಯನ್ನು ಹೇಳಿದರು. ಭಾಷಾಂತರ ಮತ್ತು ಭಾವಾನುವಾದ ಇವೆರಡರ ವ್ಯತ್ಯಾಸವನ್ನು ಮನಗಾಣಬೇಕೆಂದರು.
    ಖ್ಯಾತ ಸಂಗೀತಗಾರ ತೋನ್ಸೆ ರಂಗ ಪೈಯವರು ಕೊಂಕಣಿ ಸೇವಕರಾದ ಪ್ರಕಾಶ್ ಶೆಣೈಯವರ ಭಾಷಾ ಪ್ರೇಮದ ಬಗ್ಗೆ ತಿಳಿಸಿ, ಅವರು ಮೌನವಾಗಿ ಮಾಡಿದ ಸಾಹಸಗಳ ಬಗ್ಗೆ ಹೇಳಿದರು. ಅನಂತ ವೈದಿಕ ಕೇಂದ್ರದ ಮುಖ್ಯಸ್ಥರಾದ ವೇದ ಮೂರ್ತಿ ಚೇಂಪಿ ರಾಮಚಂದ್ರ ಭಟ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಕಾಸರಗೋಡು ಚಿನ್ನಾ ನೇತೃತ್ವದಲ್ಲಿ ಜರಗಿದ ರಾಜ್ಯ ಮಟ್ಟದ ಕೊಂಕಣಿ ಸಾಹಿತ್ಯ ಸಮ್ಮೇಳನ “ಕೊಂಕಣಿ ಮಾತಾ” ಮಹಿಳಾ ಸಮ್ಮೇಳನ – ಘರ ಘರ ಕೊಂಕಣಿ ಜೊತೆಗೆ ಗಾಂಟಿ, ಧರ್ಮಯುದ್ಧ ಮುಂತಾದ ಕಾರ್ಯಕ್ರಮಗಳನ್ನು ವಿವರಿಸಿದರು.
    ಕೊಂಕಣಿ ಭಾಷಾ ಸೇವಕರಾದ ಪ್ರಕಾಶ್ ಶೆಣೈ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಟ ನಿರ್ದೇಶಕ ಕಾಸರಗೋಡು ಚಿನ್ನಾ ಅವರನ್ನು ಅನಂತ ವೈದಿಕ ಕೇಂದ್ರದ ಪರವಾಗಿ ಟಿ. ಅಶೋಕ ಪೈ, ರಂಗಪ್ಪ ಗಿರಿಧರ ಕಿಣಿ, ಮನೋಹರ ನಾಯಕ್ ಅವರು ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಿದರು. ಕಾರ್ಯಕ್ರಮವನ್ನು ವೇದ ಮೂರ್ತಿ ಹರಿಪ್ರಸಾದ ಭಂಡಾರ್ಕರ್ ಅವರು ನಿರೂಪಿಸಿದರು. ಚೇಂಪಿ ರಮ್ಯಾಚಂದ್ರ ಭಟ್ ಧನ್ಯವಾದವಿತ್ತರು.
    ಕೊನೆಯಲ್ಲಿ ನಾಟಕ ಕಲಾವಿದರಿಗೆಲ್ಲ ಮಲ್ಪೆ ಆನಂದ ನಾಯಕ್ ನೀಡಿರುವ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

    ನಾಟಕ ಕಲಾವಿದರು : ಶಶಿಭೂಷಣ ಕಿಣಿ, ಡಾ. ಸುಧೇಶ ರಾವ್, ರಾಜ ಗೋಪಾಲ ಶೇಟ್, ಶ್ರೀಮತಿ ರಂಜಿತಾ ಶೇಟ್, ದೇವೇಂದ್ರ ಶೆಣೈ
    ಸಂಗೀತ : ಅನಿಲ್ ನಾವೂರ್ ಬೆಳಕು : ಈಶ್ವರ
    ರಂಗ ಸಜ್ಜಿಕೆ : ವೆಂಕಟೇಶ್ ಶೇಟ್, ಸುಬ್ರಹ್ಮಣ್ಯ ಪ್ರಭು

    Share. Facebook Twitter Pinterest LinkedIn Tumblr WhatsApp Email
    Previous Article3ನೇ ದಿನದ ಸುಮನಸ ರಂಗ ಹಬ್ಬ – ದ್ಯಾಟ್ಸ್ ಆಲ್ ಯುವರ್ ಆನರ್ – ಕನ್ನಡ ನಾಟಕ
    Next Article ಖ್ಯಾತ ಗಾಯಕಿ ವಿದುಷಿ ನೀಲಾ ರಾಮ್ ಗೋಪಾಲ್ ವಿಧಿವಶ
    roovari

    Add Comment Cancel Reply


    Related Posts

    “Sri Krishna Leela Amrutham” Transcends audiences at Bharat Nritya Utsav 2025, Chennai

    February 5, 2025

    ಮಂಗಳೂರಿನಲ್ಲಿ ಗಾಯಕಿ ಸೂರ್ಯಗಾಯತ್ರಿ ‘ರಾಮಂ ಭಜೇ’ | ಜ. 12ರಂದು

    January 11, 2025

    ಮಂಗಳೂರಿನ ಪುರಭವನದಲ್ಲಿ ‘ರಾಜ್ಯಮಟ್ಟದ ವಚನ ಸಾಹಿತ್ಯ ಸಮ್ಮೇಳನ’ | ಜನವರಿ 04

    December 31, 2024

    ಹಿರಿಯ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ನಿಧನ  

    October 21, 2024

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.