ಬೆಂಗಳೂರು : ಕಪ್ಪಣ್ಣ ಅಂಗಳ ಹಾಗೂ ಸಮಂಜಸ ಇದರ ವತಿಯಿಂದ ‘ಕಾವ್ಯ ಕಾಮಧೇನು ಎಚ್.ಎಸ್.ವಿ.’ ಗೌರವಾರ್ಪಣೆ ಕಾರ್ಯಕ್ರಮವನ್ನು ದಿನಾಂಕ 08 ಜೂನ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಬೆಂಗಳೂರಿನ ಎನ್.ಆರ್. ಕಾಲೋನಿಯಲ್ಲಿರುವ ಶ್ರೀ ಸಿ. ಅಶ್ವಥ್ ಕಲಾ ಭವನದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಪ್ರೊ. ಕೆ.ಈ. ರಾಧಾಕೃಷ್ಣ, ಮಲ್ಲೇಪುರಂ ಜಿ. ವೆಂಕಟೇಶ್, ಬಿ.ಆರ್. ಲಕ್ಷ್ಮಣ ರಾವ್, ರೆವರೆಂಡ್ ಫಾದರ್ ಚಾರ್ಲ್ಸ್ ಲಸ್ರಾಡೋ, ಸುಂದರ್ ವೀಣಾ ಮತ್ತು ಟಿ.ಎನ್. ಸೀತಾರಾಮ್ ಇವರಿಂದ ಸಾಹಿತ್ಯ ಗೌರವ, ಬಿ. ಜಯಶ್ರೀ ಇವರಿಂದ ರಂಗ ಗೌರವ, ಎಂ.ಡಿ. ಪಲ್ಲವಿ ಇವರಿಂದ ಗೀತ ಗೌರವ ಪ್ರಸ್ತುತಗೊಳ್ಳಲಿದೆ. ಪ್ರೊ. ಹಂ.ಪ.ನಾ. ಮತ್ತು ಬಿ.ಎಂ. ವಿಠ್ಠಲ ಮೂರ್ತಿ ಇವರುಗಳು ವಿಶೇಷ ಉಪಸ್ಥಿತಿ ಇರಲಿದೆ.