Subscribe to Updates

    Get the latest creative news from FooBar about art, design and business.

    What's Hot

    ಬೇಕಲದಲ್ಲಿ ‘ಸಮನ್ವಯ ಗಡಿನಾಡ ಜಾನಪದ ಉತ್ಸವ’ | ಫೆಬ್ರುವರಿ 01

    January 31, 2026

    ಕುಂದಾಪುರದ ಸರಕಾರಿ ಕಾಲೇಜಿನಲ್ಲಿ ‘ಉಡುಪಿ ಜಿಲ್ಲಾ ಗಮಕ ಕಲಾ ಸಮ್ಮೇಳನ’

    January 31, 2026

    ಪುಸ್ತಕ ಬಹುಮಾನಕ್ಕೆ ಕೃತಿ ಆಹ್ವಾನ | ಕೊನೆಯ ದಿನಾಂಕ ಮಾರ್ಚ್ 31

    January 31, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರು ‘ನಾಟ್ಯಾಲಯ’ದಿಂದ ‘ಕಿಂಕಿಣಿ ಉತ್ಸವ’ ಸಂಭ್ರಮ
    Bharathanatya

    ಮಂಗಳೂರು ‘ನಾಟ್ಯಾಲಯ’ದಿಂದ ‘ಕಿಂಕಿಣಿ ಉತ್ಸವ’ ಸಂಭ್ರಮ

    August 30, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ನಾಟ್ಯಾಲಯ ಉರ್ವ (ರಿ) ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕರಂಗಲ್ಪಾಡಿಯ ಸುಬ್ರಮಣ್ಯ ಸಭಾದಲ್ಲಿ ದಿನಾಂಕ 26-08-2023ರಂದು ಆಯೋಜಿಸಿರುವ ‘ಕಿಂಕಿಣಿ ಉತ್ಸವ’ ಸಂಭ್ರಮವನ್ನು ಸುಬ್ರಮಣ್ಯ ಸಭಾ ಸದನದ ಅಧ್ಯಕ್ಷರಾದ ಶ್ರೀ ಹರ್ಷಕುಮಾರ್ ಕೇದಿಗೆಯವರು ಉದ್ಘಾಟಿಸಿದರು. ಅವರು ಮಾತನಾಡುತ್ತಾ “ಭರತನಾಟ್ಯ ಕಲೆಯು ಪರಂಪರೆಯ ಕಲೆಯಾಗಿದ್ದು ಶಾಸ್ತ್ರೀಯ ಅಂಶಗಳನ್ನು ಒಳಗೊಂಡ ಕ್ರೀಡೆ. ಈ ಕಲೆಯ ಅಭ್ಯಾಸದಿಂದ ದೇಹದ ಎಲ್ಲಾ ಅಂಗಾಂಗಗಳನ್ನು ಸಕ್ರಿಯೆಗೊಳಿಸಿ ಬುದ್ಧಿಯನ್ನು ಚುರುಕುಗೊಳಿಸಬಲ್ಲದು. ನೃತ್ಯದ ಅಡವುಗಳ ಅಭ್ಯಾಸದಿಂದ ಉಸಿರಾಟದ ನಿಯಂತ್ರಣ, ಶರೀರದ ಧೃಡತೆ ನಿಲುವು ಸರಿಪಡಿಸಲು ಸಾಧ್ಯವಾಗಿ ದೇಹಕ್ಕೆ ಒಂದು ಆಕರ್ಷಕ ರೂಪ ಬರಲು ಸಾಧ್ಯ” ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಮಂಗಳೂರು ಸೌಹಾರ್ದ ಸಹಕಾರಿ ಸಂಘ ಜಪ್ಪು ಇದರ ಅಧ್ಯಕ್ಷರಾದ ಶ್ರೀ ಭಾಸ್ಕರ್ ರಾವ್, ವಿದ್ಯಾವರ್ಧಕ ಸಂಘ ಅಶೋಕನಗರ ಇದರ ಅಧ್ಯಕ್ಷ ಪಿ. ಸೀತಾರಾಮ್ ಭಟ್ ಮುಖ್ಯ ಅತಿಥಿಗಳಾಗಿದ್ದರು. ನಾಟ್ಯಾಲಯದ ಗುರು ವಿದುಷಿ ಕಮಲ ಭಟ್ ಸ್ವಾಗತಿಸಿ, ವಿ.ವಿನಯ ರಾವ್ ವಂದಿಸಿ, ವಿದ್ವಾನ್ ಎಂ.ವಿ. ಗಣೇಶ್ ರಾಜ್ ನಿರೂಪಿಸಿದರು. ನೃತ್ಯ ಗುರುಗಳಾದ ವಿದುಷಿ ರಾಜಶ್ರೀ ಉಳ್ಳಾಲ್, ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಪ್ರತಿಮಾ ಶ್ರೀಧರ್ ಮೊದಲಾದವರು ಉಪಸ್ಥಿತರಿದ್ದರು.

    ಬೆಂಗಳೂರಿನ ಚಿಗುರು ನೃತ್ಯ ಸಂಸ್ಥೆಯ ವಿ. ಸರಿತಾ ಕೊಟ್ಟಾರಿ ಮತ್ತು ತಂಡ, ಕು.ಸಾಧನಾ ಮತ್ತು ಬಳಗ, ಕು.ಪ್ರಜ್ಞಾ  ಮತ್ತು ಬಳಗ, ಕು.ಪ್ರಣವಿ ಪಿ.ಕೆ. ಮತ್ತು ಬಳಗ, ಕು.ಯಶ್ಮಿತಾ ಮತ್ತು ಬಳಗದವರಿಂದ ಸಮೂಹ ನೃತ್ಯ ಕಾರ್ಯಕ್ರಮಗಳು ಹಾಗೂ ಏಕವ್ಯಕ್ತಿ ನೃತ್ಯ ಪ್ರಸ್ತುತಿಯನ್ನು ಶಿವ ಪ್ರಣಾಮ್ ಸಂಸ್ಥೆಯ ವಿ.ಅನ್ನಪೂರ್ಣ ರಿತೇಶ್, ಕು.ಅಮೃತಾ ವಿ., ಕು.ತೇಜಸ್ವಿನಿ  ಎಲ್,  ಮಾಸ್ಟರ್ ಪ್ರದ್ಯುಮ್ನ ತೇಜಸ್ವಿ, ಕುಮಾರಿ ಶ್ರದ್ಧಾ ಎಂ.ಜೆ. ಮೊದಲಾದವರು ಪ್ರದರ್ಶಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Article‘ಮೊಗವೀರೆರ್ನ ಸಾಂಸ್ಕೃತಿಕ ಬದ್ಕ್ ಬೊಕ್ಕ ಆರ್ಥಿಕ ಚಿಂತನೆ’ ತುಳುವಿನ ಪ್ರಥಮ ಪ್ರಕಟಿತ ಸಂಶೋಧನಾ ಗ್ರಂಥ ಲೋಕಾರ್ಪಣೆ   
    Next Article ಸುಳ್ಯದ ರಂಗಮನೆಯಲ್ಲಿ ‘ಯಕ್ಷ ಸಂಭ್ರಮ’ ಮತ್ತು ‘ವನಜ ರಂಗಮನೆ’ ಪ್ರಶಸ್ತಿ ಪ್ರದಾನ
    roovari

    Add Comment Cancel Reply


    Related Posts

    ‘ವೀರರಾಣಿ ಅಬ್ಬಕ್ಕ ಪ್ರಶಸ್ತಿ’ಗೆ ಡಾ. ಸಾಯಿಗೀತಾ ಮತ್ತು ವಿದುಷಿ ರಾಜಶ್ರೀ ಉಳ್ಳಾಲ್‌ ಆಯ್ಕೆ

    January 31, 2026

    ಬೆಂಗಳೂರಿನ ಕಲಾಗ್ರಾಮದಲ್ಲಿ ‘ಭಾರತ ರಂಗ ಮಹೋತ್ಸವ ಹಾಗೂ ರಂಗ ಪರಿಷೆ’ | ಫೆಬ್ರವರಿ 01ರಿಂದ 06

    January 31, 2026

    ದಿವ್ಯಾ ರವಿ ಇವರಿಂದ ‘ವರ್ಕಾರಿ’ ನೃತ್ಯ ಪ್ರದರ್ಶನ | ಫೆಬ್ರುವರಿ 01

    January 30, 2026

    ಕೊಲ್ಯದ ನಾಟ್ಯನಿಕೇತನದ ನೃತ್ಯಾಂಗಣದಲ್ಲಿ ‘ನಾಟ್ಯಮೋಹನ ನವತ್ಯುತ್ಸಹ’ ನೃತ್ಯ ಸರಣಿ 25 | ಜನವರಿ 30

    January 29, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.