Subscribe to Updates

    Get the latest creative news from FooBar about art, design and business.

    What's Hot

    ಕೋಲಾರದಲ್ಲಿ ಯಶಸ್ವಿಯಾಗಿ ನಡೆದ ‘ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನ-2025’

    July 21, 2025

    ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ನಾಟಕ ಪ್ರದರ್ಶನ

    July 21, 2025

    ಡಾ.ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ ವಿಮರ್ಶಾ ಕೃತಿಗಳ ಆಹ್ವಾನ | ಆಗಸ್ಟ್ 10

    July 21, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರಿನಲ್ಲಿ ‘ಕ್ರಾಂತಿ ಬಂತು # ಕ್ರಾಂತಿ’ ನಾಟಕ ಪ್ರದರ್ಶನ | ಜುಲೈ 23
    Drama

    ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರಿನಲ್ಲಿ ‘ಕ್ರಾಂತಿ ಬಂತು # ಕ್ರಾಂತಿ’ ನಾಟಕ ಪ್ರದರ್ಶನ | ಜುಲೈ 23

    July 21, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್ ಮತ್ತು ಜೆ.ಎಸ್.ಡಬ್ಲ್ಯೂ ಇದರ ವತಿಯಿಂದ ಕಲಾವಿಲಾಸಿ ತಂಡದ ಕಲಾವಿದರು ಪ್ರಸ್ತುತ ಪಡಿಸುವ ಪಿ. ಲಂಕೇಶ್ ಅವರ ‘ಕ್ರಾಂತಿ ಬಂತು # ಕ್ರಾಂತಿ’ ಎಂಬ ನಾಟಕ ದಿನಾಂಕ 23 ಜುಲೈ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರಿನಲ್ಲಿ ಪ್ರದರ್ಶನಗೊಳ್ಳಲಿದೆ. ಯುವ ನಿರ್ದೇಶಕ ಅಭಿಷೇಕ ಚಕ್ರಣ್ಣವರ ನಿರ್ದೇಶಿಸುತ್ತಿರುವ ನಾಟಕವನ್ನು ಹಿರಿಯ ರಂಗಕರ್ಮಿ ಮಹಾದೇವ ಹಡಪದ ಇವರು ವಿನ್ಯಾಸ ಮಾಡಿದ್ದಾರೆ. ನಾಟಕದ ಅವಧಿ 110 ನಿಮಿಷಗಳು. ಹೆಚ್ಚಿನ ಮಾಹಿತಿಗೆ 9739398819 ಸಂಖ್ಯೆಗೆ ಕರೆ ಅಥವಾ ವಾಟ್ಸಪ್‌ ಮಾಡಬಹುದು.

    ‘ಕ್ರಾಂತಿ ಬಂತು # ಕ್ರಾಂತಿ’ ನಾಟಕವನ್ನು ಸಾಹಿತಿ ಪಿ. ಲಂಕೇಶ್‌ ಅವರ ‘ಕ್ರಾಂತಿ ಬಂತು ಕ್ರಾಂತಿ’ ನಾಟಕದ ಪಠ್ಯವನ್ನು ಪ್ರಸ್ತುತಕ್ಕೆ ಅಳವಡಿಸಿಕೊಂಡು ಕಟ್ಟಲಾಗಿದೆ. ಈ ನಾಟಕವು ಮೊದಲ ಬಾರಿಗೆ ಪ್ರಕಟವಾಗಿದ್ದು 1971ರಲ್ಲಿ. ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳಲ್ಲಿ ಅಂದಿಗೂ – ಇಂದಿಗೂ ಸಾಕಷ್ಟು ಬದಲಾವಣೆಗಳು ಕಂಡುಬಂದರೂ, ಆ ಬದಲಾದ ಪರಿಸ್ಥಿತಿಗಳು ತಮ್ಮ ಮೂಲ ಸ್ವರೂಪವನ್ನು ಹಾಗೆಯೇ ಉಳಿಸಿಕೊಂಡಿರುವುದು ನೋವಿನ ಸಂಗತಿ. ಸಮಾಜವಾದ, ಸಮತಾವಾದ, ಕ್ರಾಂತಿಯಂತಹ ವಿಚಾರಗಳ ಘರ್ಷಣೆ ಉತ್ತುಂಗದಲ್ಲಿದ್ದಾಗ ಬರೆಯಲ್ಪಟ್ಟಿರುವ ನಾಟಕ ಇಂದಿನ ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶಗಳನ್ನು ಕೂಡ ಸಮರ್ಥವಾಗಿ ಪ್ರತಿಧ್ವನಿಸುತ್ತದೆ. ಮೂಲ ಪಠ್ಯದ ವಿಸ್ತರಣೆಯನ್ನು ಕಲಾವಿಲಾಸಿ ತಂಡದ ಕಲಾವಿದರು ಈಗಿನ ಕಾಲದ ಸಂಕೀರ್ಣ ಮತ್ತು ಸೂಕ್ಷ್ಮ ಘಟನೆಗಳನ್ನು ಇಟ್ಟುಕೊಂಡು ಇಂದಿನ ತಲೆಮಾರಿಗೆ ಹತ್ತಿರವಾಗುವ ಹಾಗೆ ವಿಸ್ತರಿಸಿದ್ದಾರೆ.

    ಬಂಡವಾಳ ಶಾಹಿಗಳ ಧೋರಣೆ, ವ್ಯವಸ್ಥೆಯ ಹಸ್ತಕ್ಷೇಪ, ತಮ್ಮ ಲಾಭಕ್ಕಾಗಿ ಅಮಾಯಕರ ದಿಕ್ಕು ತಪ್ಪಿಸುವ ಪ್ರಭಾವಿಗಳ ಅವಕಾಶವಾದಿ ಧೋರಣೆ, ಕ್ಷಮತೆ ಕಳೆದುಕೊಳ್ಳುವ ಯುವಕರ ಆಕ್ರೋಶ, ಸಾಮಾಜಿಕ ಜಾಲತಾಣಗಳ ಸಾಮೂಹಿಕ ಅಭಿಪ್ರಾಯಗಳು ಮತ್ತು ಇವೆಲ್ಲವನ್ನು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಬಳಸಿಕೊಳ್ಳುವ ವೇಗದ ಮಾಧ್ಯಮಗಳು… ಹೀಗೆ ನಾಟಕವು ಹಲವು ಜ್ವಲಂತ ಸಮಸ್ಯೆಗಳಿಗೆ ಪ್ರೇಕ್ಷಕರನ್ನು ಮುಖಾಮುಖಿಗೊಳಿಸುತ್ತಾ ಹೋಗುತ್ತದೆ. ಸರಿ ತಪ್ಪುಗಳು ಅವರವರ ವಿವೇಚನೆಗೆ ಬಿಟ್ಟಿದ್ದು. ನಾಟಕದುದ್ದಕ್ಕೂ ತಮಗೆ ಸರಿ ಎನಿಸುವ ನಿರ್ಧಾರಗಳನ್ನು ತಗೆದುಕೊಂಡು ತಮ್ಮ ದಾರಿಗಳನ್ನು ಆರಿಸಿಕೊಳ್ಳುವ ಪಾತ್ರಗಳು ಈ ಸಂಕೀರ್ಣ ವ್ಯವಸ್ಥೆಯ ಸುಳಿಯಲ್ಲಿ ಸಿಕ್ಕಿಕೊಂಡು ಕುತೂಹಲವನ್ನು ಕೆರಳಿಸುತ್ತವೆ. ಹಾಸ್ಯ ಮಿಶ್ರಿತ ವಿಡಂಭನೆಯೊಂದಿಗೆ ಕಟ್ಟಿರುವ ನಾಟಕ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆಯನ್ನೂ ಒದಗಿಸುತ್ತದೆ.

    baikady drama roovari
    Share. Facebook Twitter Pinterest LinkedIn Tumblr WhatsApp Email
    Previous Articleಉಳಿಯ ಮನೆಯ ಸುಧಾ ಮಂದಿರದಲ್ಲಿ ವಾರದ ಕೂಟ ತಾಳಮದ್ದಳೆ
    Next Article ಚಂದಗುಳಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ತಾಳಮದ್ದಲೆ | ಜುಲೈ 25
    roovari

    Add Comment Cancel Reply


    Related Posts

    ಕೋಲಾರದಲ್ಲಿ ಯಶಸ್ವಿಯಾಗಿ ನಡೆದ ‘ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನ-2025’

    July 21, 2025

    ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ನಾಟಕ ಪ್ರದರ್ಶನ

    July 21, 2025

    ಡಾ.ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ ವಿಮರ್ಶಾ ಕೃತಿಗಳ ಆಹ್ವಾನ | ಆಗಸ್ಟ್ 10

    July 21, 2025

    ಹಿರಿಯ ಸಾಹಿತಿಗಳಾದ ಕುಂಪನೀಸೀಮೆ ಪಿ.ಸಿ. ಅಂಥೋನಿಸ್ವಾಮಿ ಮತ್ತು ಡಾ. ಬಿ.ಎಸ್. ತಲ್ವಾಡಿಯವರಿಗೆ ಪ್ರಶಸ್ತಿ ಪ್ರದಾನ

    July 21, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.