Subscribe to Updates

    Get the latest creative news from FooBar about art, design and business.

    What's Hot

    ಕಯ್ಯಾರಿನಲ್ಲಿ ಡಾ. ಕಯ್ಯಾರ ಕಿಞಣ್ಣ ರೈಯವರ ಜನ್ಮದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ | ಜೂನ್ 18

    June 16, 2025

    ಪಾರ್ವತಿ ಜಿ. ಐತಾಳರ ‘ಮಲೆಯಾಳ ಸಾಹಿತ್ಯದಲ್ಲಿ ಮಹಿಳಾ ಧ್ವನಿಗಳು’ ಕೃತಿ ಲೋಕಾರ್ಪಣೆ

    June 16, 2025

    ಯಶಸ್ವಿಯಾಗಿ ಜರಗಿದ ಭಾವಗೀತೆಗಳ ಹರಿಕಾರ ಎಚ್.ಎಸ್.ವಿ. ನುಡಿನಮನ ಮತ್ತು ಮುಂಗಾರು ಕಾವ್ಯೋತ್ಸವ

    June 16, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಕೃಷ್ಣೇಗೌಡರ ಆನೆ’ ನಾಟಕ ಪ್ರದರ್ಶನ | ನವೆಂಬರ್ 19, 21, 25 ಮತ್ತು ಡಿಸೆಂಬರ್ 7
    Drama

    ‘ಕೃಷ್ಣೇಗೌಡರ ಆನೆ’ ನಾಟಕ ಪ್ರದರ್ಶನ | ನವೆಂಬರ್ 19, 21, 25 ಮತ್ತು ಡಿಸೆಂಬರ್ 7

    November 18, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೈಸೂರು : ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧರಿಸಿದ ‘ಕೃಷ್ಣೇಗೌಡರ ಆನೆ’ ನಾಟಕವು ಶ್ರೀ ಮಂಡ್ಯ ರಮೇಶರವರು ನಿರ್ದೇಶಿಸಿದ್ದು, ನಾಟಕದ ರಂಗರೂಪ ಶ್ರೀ ಶಶಿಕಾಂತ ಯಡಹಳ್ಳಿ ಹಾಗೂ ವಿನ್ಯಾಸ ನಟನ ರಂಗಶಾಲೆಯ ಪ್ರಾಂಶುಪಾಲರಾದ ಶ್ರೀ ಮೇಘ ಸಮೀರ ಅವರದ್ದು. ಈಗಾಗಲೇ ಮೈಸೂರು, ನೋಯಿಡಾ, ದೆಹಲಿಯಲ್ಲಿ ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ. ದಿನಾಂಕ 19-11-2023ರಂದು ಮೈಸೂರಿನ ನಟನಾ ರಂಗಮಂದಿರದಲ್ಲಿ, 21-11-2023ರಂದು ಮೈಸೂರಿನ ರಮಾಗೋವಿಂದ ರಂಗಮಂದಿರದಲ್ಲಿ, ದಿನಾಂಕ 25-11-2023ರಂದು ಹುಬ್ಬಳ್ಳಿಯ ವಿದ್ಯಾನಗರ ಮತ್ತು ದಿನಾಂಕ 07-12-2023ರಂದು ವಿಜಯಪುರದಲ್ಲಿ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.

    ಮಂಡ್ಯರಮೇಶ್ ಅವರ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ಕಲಾಮಾಧ್ಯಮದಲ್ಲಿ ಕ್ರಿಯಾಶೀಲವಾಗಿದ್ದು, ರಂಗಭೂಮಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ. ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ ಹಾಗೂ ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ನಟನ ಸತತವಾಗಿ ಪ್ರಯತ್ನ ನಡೆಸುತ್ತಾ ಬಂದಿದ್ದು ಶ್ಲಾಘನೀಯ. ಮೈಸೂರಿನಲ್ಲಿ ನೆಲೆಗೊಂಡಿದ್ದರೂ ಭಾರತದಾದ್ಯಂತ ರಂಗಯಾತ್ರೆಗಳನ್ನು ಹಾಗೂ ರಂಗ ತರಬೇತಿ ಶಿಬಿರಗಳನ್ನು ನಡೆಸುವುದರ ಮೂಲಕ ತನ್ನ ವ್ಯಾಪ್ತಿಯನ್ನು ಇದು ವಿಸ್ತರಿಸಿಕೊಂಡಿದೆ.

    ನಟನ ರಂಗಶಾಲೆಯು ತನ್ನ ಚಟುವಟಿಕೆಯ ಭಾಗವಾಗಿ ಆಧುನಿಕ ಕನ್ನಡ ರಂಗಭೂಮಿಗೆ ಅಪಾರ ಕೊಡುಗೆ ನೀಡಿದೆ. ಕರ್ನಾಟಕದ ಹಳ್ಳಿ ಹಳ್ಳಿಗೂ ನಾಟಕ ತಲುಪುವಂತೆ ಮಾಡಿ, ಮೂಲೆ ಮೂಲೆಯಲ್ಲಿಯೂ ರಂಗ ಚಟುವಟಿಕೆಗಳು ಚಿಗುರುವಂತಾಗಲು ಮೂಲ ಕಾರಣರಾದ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ, ನಾಟಕಕಾರ, ಚಿಂತಕ, ರಂಗ ಸಂಘಟಕ ಹಾಗೂ ನೀನಾಸಂನ ನಿರ್ಮಾತೃ ಶ್ರೀ ಕೆ.ವಿ. ಸುಬ್ಬಣ್ಣ ಅವರ ನೆನಪಿನಲ್ಲಿ ನಾಟಕೋತ್ಸವವನ್ನು ಹಮ್ಮಿಕೊಳ್ಳುತ್ತಾ ಬಂದಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleದೇರಾಜೆ ಸೀತಾರಾಮಯ್ಯ ‘ನೆನಪು ನೂರೆಂಟು’ ಮತ್ತು ‘ರಸಋಷಿ’ ಕೃತಿಗಳೆರಡರ ಲೋಕಾರ್ಪಣೆ 
    Next Article ಇಂಟಾಕ್ ವತಿಯಿಂದ ‘ವಿಶ್ವ ಪರಂಪರೆಯ ಸಪ್ತಾಹ’ ಆಚರಣೆ | ನವೆಂಬರ್ 19ರಿಂದ 25
    roovari

    Add Comment Cancel Reply


    Related Posts

    ಮಂಗಳೂರಿನ ರಂಗ ಸಂಸ್ಥೆ ಕಲಾಭಿಯಿಂದ ಶೀಘ್ರದಲ್ಲಿ ನಟನ ತರಬೇತಿ

    June 14, 2025

    ವಿಶೇಷ ಲೇಖನ – ಜನಪ್ರಿಯ ರಂಗಭೂಮಿ ನಟ ಯಶವಂತ ಸರದೇಶಪಾಂಡೆ

    June 13, 2025

    ಬಿ.ಸಿ. ರೋಡಿನಲ್ಲಿ ‘ತುಳುವೆರೆನ ತುಳುನಾಡ ಸಂತೆ’ ತುಳು ಸಾಹಿತ್ಯ ಸಾಂಸ್ಕೃತಿಕ ರಂಗ | ಜೂನ್ 20, 21 ಮತ್ತು 22

    June 13, 2025

    ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘Beg Borrow ಅಳಿಯ’ ಹಾಸ್ಯ ನಾಟಕ | ಜೂನ್ 14

    June 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.