Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ತೆಕ್ಕಟ್ಟೆ ಹಯಗ್ರೀವದಲ್ಲಿ ಕುಂದಾಪುರ ಕನ್ನಡ ದಿನಾಚರಣೆ ಕಾರ್ಯಕ್ರಮ
    Literature

    ತೆಕ್ಕಟ್ಟೆ ಹಯಗ್ರೀವದಲ್ಲಿ ಕುಂದಾಪುರ ಕನ್ನಡ ದಿನಾಚರಣೆ ಕಾರ್ಯಕ್ರಮ

    August 13, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ತೆಕ್ಕಟ್ಟೆ : ಶ್ರೀ ಸಿದ್ಧಿವಿನಾಯಕ ಕ್ಯಾಶೂ ಇಂಡಸ್ಟ್ರೀಸ್ ಕೆದೂರು ಪ್ರಾಯೋಜನೆಯಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಸಂಯೋಜನೆಯಲ್ಲಿ ದಿನಾಂಕ 10 ಆಗಸ್ಟ್ 2024ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ಕುಂದಾಪುರ ಕನ್ನಡ ದಿನಾಚರಣೆ ಕಾರ್ಯಕ್ರಮವು ನಡೆಯಿತು.

    ಈ ಕಾರ್ಯಕ್ರಮದಲ್ಲಿ ಕುಂದಗನ್ನಡ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಕುಂದಗನ್ನಡದ ಹಿರಿಯ ಸಾಹಿತಿ, ವಕೀಲ ಎ.ಎಸ್.ಎನ್. ಹೆಬ್ಬಾರ್ “ಕುಂದಗನ್ನಡದ ಸೊಗಡನ್ನು ದೇಶ ವಿದೇಶಗಳೂ ಕೊಂಡಾಡಿದೆ. ಸೆಕಿ ಗೆಮಿತ್, ಎದಿ ಹೊಯಿಲ್, ಹಾಸತ್ ಹೊದಿತ್ ಹೀಗೆ ಕುಂದಗನ್ನಡ ಸಹಸ್ರ ಸಹಸ್ರ ಶಬ್ದವು ಕುಂದಗನ್ನಡದಲ್ಲಿ ಹಾಸಿ ಹೋಗಿದೆ. ಆಷಾಡದಲ್ಲಿ ಕುಂದಾಪುರ ಕನ್ನಡ ದಿನವನ್ನಾಗಿ ನಿಗದಿಸಿ, ದೇಶ ವಿದೇಶದಲ್ಲಿ ಆಚರಿಸುವ ಹಾಗೆ ಸಂಘಟಕರನ್ನು ಹುರಿದುಂಬಿಸಿದವರು ವಸಂತ ಗಿಳಿಯಾರ್. ಇದಕ್ಕೆ ಕುಂದಗನ್ನಡ ಸಾಹಿತ್ಯವನ್ನು ಯಕ್ಷಗಾನದಲ್ಲಿ ಛಂದೋಬದ್ಧವಾಗಿ ಯಕ್ಷಗಾನ ಪ್ರಸಂಗವನ್ನು ರಚಿಸುವುದು ಸಾಧಾರಣ ವಿಷಯವಲ್ಲ. ಪ್ರಸಾದ್ ಮೊಗೆಬೆಟ್ಟು ಈ ಪ್ರಸಂಗವನ್ನು ರಚಿಸಿ ಕುಂದಗನ್ನಡದ ಜೊತೆಗೆ ಬೆರೆತು ಹೋದರು. ಅವರನ್ನು ಎಂದೂ ಕುಂದಗನ್ನಡದ ಅಭಿಮಾನಿಗಳು ಮರೆಯಲಾರರು” ಎಂದು ಹೇಳಿದರು.

    ಮುಖ್ಯ ಅತಿಥಿ ಜನ ಸೇವಾ ಟ್ರಸ್ಟಿನ ವಸಂತ್ ಗಿಳಿಯಾರ್ ಮಾತನಾಡಿ, “ಕುಂದಗನ್ನಡದಲ್ಲಿ ಅನೇಕರು ಪ್ರಸಿದ್ಧರು. ಹಿಂದೆಲ್ಲ ಕುಂದಗನ್ನಡವನ್ನು ಮಾತನ್ನಾಡುವುದು ಘನತೆಗೆ ಧಕ್ಕೆ ಎನ್ನುವ ಕಾಲವಿತ್ತು. ಆ ಕಾಲದಲ್ಲೂ ಹಿರಿಯರಾದ ಎ.ಎಸ್.ಎನ್. ಹೆಬ್ಬಾರ್ ಕುಂದಗನ್ನಡದಲ್ಲಿ ಭಾಷಣ ಮಾಡಿ ಗೆದ್ದವರು, ಹೆಸರುವಾಸಿಯಾದವರು. ಶುದ್ಧ ಕನ್ನಡದ ಭಾಷೆಗೆ ಅತೀ ಹತ್ತಿರವಾಗಿರುವ ಭಾಷೆ ಕುಂದಗನ್ನಡ. ಇಂತಹ ಭಾಷೆಗೆ ದಿನ ನಿಗದಿಯಾದಾಗ ಇಡೀ ದೇಶದಲ್ಲಿಯೇ ಕುಂದಗನ್ನಡದ ಜನ ಕಾರ್ಯಕ್ರಮದ ಮೂಲಕ ಮೆರೆಸಿದರು. ಕುಂದಗನ್ನಡದಲ್ಲಿ ಕಥೆ ಬರೆಯಿರಿ ಎಂದಾಗ ಈ ಭಾರಿ 1500ಕ್ಕೂ ಹೆಚ್ಚೂ ಕಥೆಗಳು ನಮ್ಮ ಫೈಲ್ ಸೇರಿತು. ಇದಕ್ಕೆ ಉತ್ಸಾಹಿಗಳೆಷ್ಟು? ಎನ್ನುವುದನ್ನು ಈ ಮೂಲಕ ನಾವು ಗುರುತಿಸಬಹುದು. ಕುಂದಗನ್ನಡ ಅಜರಾಮರ” ಎಂದರು.

    ಡಾ. ಕೆ.ಎಸ್. ಕಾರಂತ್ ಶುಭಾಶಂಸನೆಗೈದರು. ರೊ| ಚಂದ್ರಶೇಖರ ಮೆಂಡನ್, ರೊ| ತಿಮ್ಮ ಪೂಜಾರಿ ಉಪಸ್ಥಿತರಿದ್ದರು. ಪ್ರಸಂಗಕರ್ತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಪ್ರಾಸ್ತಾವಿಕ ಮಾತನ್ನಾಡಿದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ಯಕ್ಷಗಾನ ‘ಹೆಣ್ ಬಣ್ಣ’ ರಂಗದಲ್ಲಿ ಪ್ರಸ್ತುತಿಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleಕ. ಸಾ. ಪ. ಉಡುಪಿ ತಾಲೂಕು ಘಟಕದಿಂದ ಗ್ರಂಥಪಾಲಕರ ದಿನಾಚರಣೆ
    Next Article ಸಾಹಿತ್ಯ ಕೂಟ ಮಂಗಳೂರು ತಂಡದಿಂದ ‘ಸಾಹಿತ್ಯ ಕಲರವ’ ಕಾರ್ಯಕ್ರಮ
    roovari

    Comments are closed.

    Related Posts

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20

    May 24, 2025

    ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ‘ತಾಳಮದ್ದಳೆ ಜ್ಞಾನಯಜ್ಞ’ | ಮೇ 26

    May 24, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.

    Notifications