ಸುರತ್ಕಲ್ : ಕಲಾಬ್ದಿ ಗೋವಿಂದದಾಸ ಕಾಲೇಜು ಸುರತ್ಕಲ್ ಪ್ರಸ್ತುತ ಪಡಿಸಿದ ಚೇತನ್ ಗಣೇಶಪುರ ನಿರ್ದೇಶನದ ಪುರಂದರ ದಾಸರ ಕೀರ್ತನೆ ಆಧಾರಿತ ‘ಕೂಸಿನ ಕಂಡೀರ’ ಇದರ ಪ್ರಥಮ ಪ್ರದರ್ಶನವು ದಿನಾಂಕ 01 ಜೂನ್ 2025ರಂದು ವಿದ್ಯಾದಾಯಿನಿ ಪ್ರೌಢಶಾಲೆಯ ವಜ್ರಮಹೋತ್ಸವ ವೇದಿಕೆಯಲ್ಲಿ ಉದ್ಘಾಟನೆಗೊಂಡಿತು.
ಕಲಾವಿದರಾದ ಸ್ವಾತಿ, ಕಾರ್ತಿಕ್ ಸೂರಿಂಜೆ, ತನುಶ್ರೀ ಶೆಟ್ಟಿಗಾರ, ಶ್ರೇಯ ಟಿ. ಶೆಟ್ಟಿ, ಅನನ್ಯಾ ಕೆ. ಭಟ್, ತೃಪ್ತಿ, ಪ್ರಾಪ್ತಿ, ಪಲ್ಲವಿ ಹೊಸಬೆಟ್ಟು, ರಿತೇಶ್ ದೇವಾಡಿಗ, ರಾಹುಲ್, ಆದೀಶ ಭಂಡಾರಿ, ವಿನೀತ್ ರಾಜ್ ಮಧ್ಯ, ಪ್ರತೀಕ್ಷಾ ಎ. ಭಟ್, ಸುಪ್ರೀತ್ ನಟಿಸಿದರು. ಶಶಾಂಕ್ ಶೆಟ್ಟಿಗಾರ್, ಧೀರಜ್, ಗೌರೀಶ್ ಶೇನೋಯ್, ಸಂಚಿತ್ ಬಂಗೇರ ಸಂಗೀತ ನಿರ್ವಹಣೆಯಲ್ಲಿ ಸಹಕರಿಸಿದರು.