Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಕುವೆಂಪು ಸಿರಿಗನ್ನಡ ದತ್ತಿ’ ಹಾಗೂ ‘ಕನ್ನಡ ಚಳವಳಿ ವೀರಸೇನಾನಿ ಮ. ರಾಮಮೂರ್ತಿ ದತ್ತಿ’ ಪ್ರಶಸ್ತಿ ಪ್ರದಾನ ಸಮಾರಂಭ
    Awards

    ‘ಕುವೆಂಪು ಸಿರಿಗನ್ನಡ ದತ್ತಿ’ ಹಾಗೂ ‘ಕನ್ನಡ ಚಳವಳಿ ವೀರಸೇನಾನಿ ಮ. ರಾಮಮೂರ್ತಿ ದತ್ತಿ’ ಪ್ರಶಸ್ತಿ ಪ್ರದಾನ ಸಮಾರಂಭ

    June 22, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಸಭಾಂಗಣದಲ್ಲಿ ಪರಿಷತ್ತಿನ ಎರಡು ಪ್ರಮುಖ ಪ್ರಶಸ್ತಿಗಳಾದ ‘ಕುವೆಂಪು ಸಿರಿಗನ್ನಡ ದತ್ತಿ’ ಹಾಗೂ ‘ಕನ್ನಡ ಚಳವಳಿ ವೀರಸೇನಾನಿ ಮ. ರಾಮಮೂರ್ತಿ ದತ್ತಿ’ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 21-06-2024ರಂದು ನಡೆಯಿತು.

    ಈ ಸಮಾರಂಭದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು “ಸಾಹಿತ್ಯ ರಾಜಕೀಯವನ್ನು ಎಚ್ಚರಿಸುವ ಶಕ್ತಿಯಾಗಬೇಕೆಂದು ರಾಷ್ಟ್ರಕವಿ ಕುವೆಂಪು ಅವರು ಬಯಸಿದ್ದರು. ‘ಅಖಂಡ ಕರ್ನಾಟಕ : ಅಲ್ತೊ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ ! ಇಂದು ಬಂದು ನಾಳೆ ಸಂದುಹೋಹ ಸಚಿವ ಮಂಡಲ ರಚಿಸುವೊಂದು ಕೃತಕವಲ್ತೊ ಸಿರಿಗನ್ನಡ ಸರಸ್ವತಿಯವಜ್ರ ಕರ್ಣಕುಂಡಲ !’ ಎಂದು ಬಹು ಹಿಂದೆಯೇ ಎಚ್ಚರಿಸಿದ್ದರು. ಸಾಹಿತ್ಯವು ವ್ಯಕ್ತಿತ್ವ ನಿರ್ಮಾಣದಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸಬೇಕು ಎಂದು ಕುವೆಂಪು ಅವರು ಬಯಸಿದ್ದರು. ಇಂತಹ ಮನಸ್ಥಿತಿಯನ್ನು ಪಡೆಯಲು ಅವರಿಗೆ ರಾಮಕೃಷ್ಣಾಶ್ರಮದಲ್ಲಿ ದೊರೆತ ಸಂಸ್ಕಾರ ಕಾರಣವಾಗಿತ್ತು ಎಂದರು.

    1928ರಲ್ಲಿ ಕಲ್ಬುರ್ಗಿಯಲ್ಲಿ ಜರುಗಿದ 14ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಟ್ಟಪ್ಪನವರ ‘ಯಮನ ಸೋಲು’ ನಾಟಕವನ್ನು ಅಭಿನಯಿಸಲಾಯಿತು. ಸತ್ಯವಾನನ ಪಾತ್ರಧಾರಿ ಗೈರುಹಾಜರಾಗಿದ್ದರಿಂದ ಆ ಪಾತ್ರವನ್ನು ನಿರ್ವಹಿಸುವ ಜವಾಬ್ದಾರಿಯು ಕುವೆಂಪು ಅವರದಾಯಿತು. ಅದರಲ್ಲಿ ಜನ ಮೆಚ್ಚುಗೆ ಪಡೆದುಕೊಂಡರು. 33ನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಂಯೋಜಿಸಿದ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ. ಕುವೆಂಪು ಅವರು ಕನ್ನಡದ ಅಸ್ಮಿತೆಯ ಪ್ರತೀಕವಾದರೆ ಮ.ರಾಮಮೂರ್ತಿಯವರು ಕನ್ನಡದ ಹೋರಾಟದ ಪ್ರತೀಕವೆಂದು ಹೇಳಿ ಚಳವಳಿ ಅನಿವಾರ್ಯವಾದಾಗ ಮಾತ್ರ ಮಾಡಬೇಕು ಎಂಬ ಎಚ್ಚರಿಕೆ ಕನ್ನಡಿಗರಲ್ಲಿದೆ. ಸ್ವಭಾವತ: ಕನ್ನಡಿಗರು ಶಾಂತಿ ಪ್ರಿಯರು, ಆದರೆ ಕನ್ನಡಿಗರಿಗೇ ಅವರ ನೆಲದಲ್ಲಿ ನೆಲೆ ಇಲ್ಲದ ಸ್ಥಿತಿ ಬಂದಾಗ ಮ. ರಾಮಮೂರ್ತಿಯವರು ಹೋರಾಟದ ಹಾದಿಯನ್ನು ಹಿಡಿದವರು. ಅವರ ಹೋರಾಟದ ಫಲವಾಗಿಯೇ ಇಂದು ಕನ್ನಡಿಗರು ತಮ್ಮ ಸ್ವಂತಿಕೆ ಉಳಿಸಿಕೊಳ್ಳಲು ಸಾಧ್ಯವಾಗಿದೆ. ಕನ್ನಡ ಬಾವುಟ ಇರುವವರೆಗೂ ರಾಮಮೂರ್ತಿಯವರ ನೆನಪು ಇರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಸದಾ ಕನ್ನಡಿಗರ ಪ್ರಬುದ್ಧತೆ ಮತ್ತು ಬದ್ಧತೆಗೆ ಬೆಂಬಲವಾಗಿ ನಿಲ್ಲಲಿದೆ” ಎಂದು ಹೇಳಿದರು.

    ಕಾರ್ಯಕ್ರಮದ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನವನ್ನು ಮಾಡಿದ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿಯವರು “ಚಳುವಳಿಗಳು ಸದಾ ಕನ್ನಡವನ್ನು ಕಾಪಾಡುತ್ತಲೇ ಬಂದಿವೆ. ಕನ್ನಡವು ಸದಾ ನಮ್ಮ ಆದ್ಯತೆಯಾಗಬೇಕು. ಮನೆಯಲ್ಲಿ ಕನ್ನಡ ವಾತಾವರಣವಿದ್ದರೆ ಮುಂದಿನ ಪೀಳಿಗೆಯ ಮನಸ್ಸಿನಲ್ಲಿಯೂ ಕನ್ನಡ ಉಳಿಯಲಿದೆ. ಕನ್ನಡ ನಮ್ಮ ಸರ್ಕಾರದ ಆದ್ಯತೆಯಾಗಲಿದೆ” ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ನಿವೃತ್ತ ಪೋಲೀಸ್ ಅಧಿಕಾರಿ ಶ್ರೀ ಬಿ.ಕೆ. ಶಿವರಾಂ ಮಾತನಾಡಿ “ವಿದ್ಯಾರ್ಥಿ ಚಳವಳಿ, ಭಾಷಾ ಚಳವಳಿ, ದಲಿತ ಚಳವಳಿ, ರೈತ ಚಳವಳಿಗಳು ನಮ್ಮ ಸಾಂಸ್ಕೃತಿಕ ಸಂದರ್ಭವನ್ನು ರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದು, ನಮ್ಮ ರಾಜಕೀಯ ಸಂದರ್ಭ ಅವುಗಳನ್ನು ನಾಶಗೊಳಿಸಿತು. ಮತ್ತೆ ಚಳವಳಿಗಳ ಕಾಲ ಬರಬೇಕು ಇದು ಕನ್ನಡಿಗರ ಜೀವನ್ಮರಣದ ಪ್ರಶ್ನೆ” ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ರೂಪುಗೊಂಡಿರುವ ಕನ್ನಡಪರ ವಾತಾವರಣಕ್ಕಾಗಿ ನಾಡೋಜ ಡಾ. ಮಹೇಶ ಜೋಶಿಯವರನ್ನು ಶಿವರಾಂ ವಿಶೇಷವಾಗಿ ಅಭಿನಂದಿಸಿದರು.

    ಪ್ರಶಸ್ತಿ ಪುರಸ್ಕೃತರಾದ ಸಾ.ರಾ. ಗೋವಿಂದು ಮತ್ತು ಜೆ. ಹುಚ್ಚಪ್ಪನವರು ತಮ್ಮ ಹೋರಾಟದ ಹಾದಿಯಯನ್ನು ನೆನಪು ಮಾಡಿಕೊಂಡು ತಮಗೆ ಜೊತೆ ನೀಡಿದವರಿಗೂ ಈ ಪುರಸ್ಕಾರ ಸಲ್ಲುತ್ತದೆ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗ ಶೆಟ್ಟಿಯವರು ಸ್ವಾಗತವನ್ನು ಕೋರಿದರೆ, ಡಾ. ಪದ್ಮಿನಿ ನಾಗರಾಜು ವಂದನಾರ್ಪಣೆಯನ್ನು ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ್ ಪಾಂಡು ಅವರ ಕಾರ್ಯಕ್ರಮವನ್ನು ನಿರ್ವಹಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Article‘ಆರ್ಯಭಟ’ ಪ್ರಶಸ್ತಿ’ಗೆ ಭಾಜನರಾದ ರಂಗಕರ್ಮಿ ಶಶಿಕಾಂತ ಯಡಹಳ್ಳಿ
    Next Article ಅರೆಭಾಷೆ ಕಥೆಗಳ ಆಹ್ವಾನ
    roovari

    Add Comment Cancel Reply


    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಖ್ಯಾತ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ನಿಧನ

    May 8, 2025

    ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ | ಮೇ 11

    May 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.