Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನಲ್ಲಿ ಯಕ್ಷ ನೃತ್ಯ -ಸಂವಾದ ಸನ್ಮಾನ’ | ಜುಲೈ 12

    July 9, 2025

    ವಿಸ್ತಾರ್‌ ರಂಗಶಾಲೆಯಿಂದ ನಾಟಕ ಡಿಪ್ಲೋಮ ಕೋರ್ಸ್ ಗೆ ಅರ್ಜಿ ಆಹ್ವಾನ | ಜುಲೈ 30

    July 9, 2025

    ಎಸ್.ಎನ್.ಪಿ.ಯು ಕಾಲೇಜಿನಲ್ಲಿ ‘ಜನಪದದೊಂದಿಗೆ ಜೀವನ ಮೌಲ್ಯ ಸಂಗೀತ ಕಾರ್ಯಾಗಾರ’

    July 9, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಂಗಳೂರಿನ ಕಲಾಗ್ರಾಮದಲ್ಲಿ ‘ಲಕ್ಷ್ಮೀ ಕಟಾಕ್ಷ’ | ಜುಲೈ 13
    Drama

    ಬೆಂಗಳೂರಿನ ಕಲಾಗ್ರಾಮದಲ್ಲಿ ‘ಲಕ್ಷ್ಮೀ ಕಟಾಕ್ಷ’ | ಜುಲೈ 13

    July 9, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಬ್ಯಾಂಗಲೋರ್ ಪ್ಲೇಯರ್ಸ್ ಪ್ರಸ್ತುತ ಪಡಿಸುವ ನೂತನ ನಾಟಕ ‘ಲಕ್ಷ್ಮೀ ಕಟಾಕ್ಷ’ ಇದರ ಮೊದಲ ಪ್ರದರ್ಶನವು ದಿನಾಂಕ 13 ಜುಲೈ 2025ರಂದು ಸಂಜೆ ಘಂಟೆ 7.00ಕ್ಕೆ ಬೆಂಗಳೂರಿನ ಕಲಾಗ್ರಾಮದಲ್ಲಿ ನಡೆಯಲಿದೆ.
    ಕಿಶೋರ್ ಕುಮಾರ್ ರಚಿಸಿ, ನಿರ್ದೇಶಿಸಿರುವ ಈ ನಾಟಕಕ್ಕೆ ಸಹಾಯಕ ನಿರ್ದೇಶಕರಾಗಿ ಗಿರೀಶ್ ಹಾಗೂ ಹೃತಿಕ್, ಸಂಗೀತದಲ್ಲಿ ಸುಭಾಸ್ ಹಾಗೂ ಶರತ್, ರಂಗ ಸಜ್ಜಿಕೆಯಲ್ಲಿ ತೇಜಸ್, ವೇಷ ಭೂಷಣದಲ್ಲಿ ಉಲ್ಲಾಸ್, ಬೆಳಕಿನ ಸಂಯೋಜನೆಯಲ್ಲಿ ಶ್ರೀನಿಧಿ, ಹಾಗೂ ಪ್ರಚಾರದಲ್ಲಿ ಯಶವಂತ್ ಸಹಕರಿಸಲಿದ್ದಾರೆ.

    ‘ಲಕ್ಷ್ಮೀ ಕಟಾಕ್ಷ’ :
    ಪ್ರತಿಯೊಬ್ಬ ಮನುಷ್ಯನು ಜೀವನವೆಂಬ ಪಥದಲ್ಲಿ, ಸಂಬಂಧಗಳ ಹಳಿಯಲ್ಲಿ ನಡೆಯುತ್ತಿದ್ದಾನೆ. ಆ ನಡೆಗೆ ಒಂದು ಉದ್ದೇಶ, ಆ ಉದ್ದೇಶದ ಹಿಂದೆ ಹಲವಾರು ಲೆಕ್ಕಾಚಾರಗಳು, ಹಾಗಿದ್ದರೆ ಜೀವನ ಲೆಕ್ಕಾಚಾರವೇ? ಹಾಗಿದ್ದಲ್ಲಿ ಸಂಬಂಧಗಳು? ಲೆಕ್ಕಾಚಾರದ ಉದ್ದೇಶದಿಂದ ಸಂಬಂಧಗಳು ಬಂಧಿತವಾಯಿತೆ?
    ಗಂಡ – ಹೆಂಡ್ತಿ, ಪ್ರೀತಿ – ಕಾಮ
    ಗುರು – ಶಿಷ್ಯ, ವಿದ್ಯೆ – ವ್ಯಾಪಾರ
    ಹೆತ್ತವರು – ಮಕ್ಕಳು, ಮಮತೆ – ತಾತ್ಸಾರ
    ಒಡಹುಟ್ಟಿದವರು – ಒಡನಾಡಿಗಳು, ತ್ಯಾಗ – ಸ್ವಾರ್ಥ
    ಪ್ರಜೆ – ರಾಜಕಾರಣಿ, ಭರವಸೆ – ಭ್ರಷ್ಟಾಚಾರ
    ಯಾವುದು ಕಲ್ಮಶ? ಯಾವುದು ನಿಷ್ಕಲ್ಮಶ?
    ಈ ಸ್ವಾರ್ಥದ ಜಗತ್ತಿನಲ್ಲಿ ನಿರ್ಮಲವಾದ ಸಂಬಂಧಗಳು ಉಸಿರಾಡಲು ಸಾಧ್ಯವೇ? ಹಾಗದರೆ ಸಂಬಂಧಗಳು ಮಾನವನ ಸೃಷ್ಟಿಯೇ? ಅಥವಾ ದೈವ ನಿರ್ಮಿತವೆ? ಸಂಭಂದಗಳಿಲ್ಲದೆ ಮನುಷ್ಯನು ಜೀವಿಸಲು ಸಾಧ್ಯವಿಲ್ಲವೇ? ಇಲ್ಲಿ ಅಧಿಕಾರದ ವ್ಯಾಮೋಹದಲ್ಲಿ, ಕಳ್ಳತನ, ಭ್ರಷ್ಟತೆ, ದರ್ಪ, ಸುಳ್ಳು, ಮೋಸ, ವಂಚನೆ ಹೀಗೆ ಎಲ್ಲವನ್ನೂ ರೂಢಿಯಾಗಿಸಿ, ಸಂಬಂಧಗಳ ಸುಳಿಯಲ್ಲಿ, ಸ್ವಾರ್ಥದ ಕನಸೇರಿ, ಹಣ, ಅಧಿಕಾರ, ಆಸ್ತಿ, ಅಂತಸ್ತು, ಕೀರ್ತಿ, ಯಶಸ್ಸು, ಯಾವುದರ ಹಿಂದೆ ಓಡುತ್ತಿದ್ದಾರೆ? ಅದರ ಫಲವಾದರೂ ಏನು? ಯಾಕೀ ಲೆಕ್ಕಾಚಾರ? ಎಲ್ಲಿಗೀ ಓಟ? ಮನುಷ್ಯನ ಸಂಪೂರ್ಣತೆಯು ಸಾರ್ಥಕ್ಯಕ್ಕೆ ಏರುವುದು, ಉದ್ದೇಶ ಘನ್ನೋದೇಶವಾದಾಗಲ್ಲವೇ? ಅದಕ್ಕೆ ಮೊದಲು ನಾವು ಮಾನವರಾಗ ಬೇಕಲ್ಲವೆ? ಹಾಗಾದರೆ ಅದನ್ನು ಅರಿಯಲು ಹುಡುಕಾಟ ಬೇಕಲ್ಲವೆ? ಆ ಹುಡುಕಾಟದಲ್ಲಿ ನಮಗೆ ದೊರಕಬೇಕಿರುವ ಕೃಪೆಯೇ ಲಕ್ಷ್ಮಿ ಕಟಾಕ್ಷ!
    ಇದೊಂದು ವಿಡಂಬನಾತ್ಮಕ, ಸಾಂಸಾರಿಕ ರಾಜಕೀಯ ನಾಟಕ.

    baikady drama kannada Kannada drama roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನ ಪತ್ರಿಕಾ ಭವನದಲ್ಲಿ ಅಂಕಣ ಬರಹಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮ | ಜುಲೈ 10
    Next Article ಎಸ್.ಎನ್.ಪಿ.ಯು ಕಾಲೇಜಿನಲ್ಲಿ ‘ಜನಪದದೊಂದಿಗೆ ಜೀವನ ಮೌಲ್ಯ ಸಂಗೀತ ಕಾರ್ಯಾಗಾರ’
    roovari

    Add Comment Cancel Reply


    Related Posts

    ಬೆಂಗಳೂರಿನಲ್ಲಿ ಯಕ್ಷ ನೃತ್ಯ -ಸಂವಾದ ಸನ್ಮಾನ’ | ಜುಲೈ 12

    July 9, 2025

    ವಿಸ್ತಾರ್‌ ರಂಗಶಾಲೆಯಿಂದ ನಾಟಕ ಡಿಪ್ಲೋಮ ಕೋರ್ಸ್ ಗೆ ಅರ್ಜಿ ಆಹ್ವಾನ | ಜುಲೈ 30

    July 9, 2025

    ಎಸ್.ಎನ್.ಪಿ.ಯು ಕಾಲೇಜಿನಲ್ಲಿ ‘ಜನಪದದೊಂದಿಗೆ ಜೀವನ ಮೌಲ್ಯ ಸಂಗೀತ ಕಾರ್ಯಾಗಾರ’

    July 9, 2025

    ಮಂಗಳೂರಿನ ಪತ್ರಿಕಾ ಭವನದಲ್ಲಿ ಅಂಕಣ ಬರಹಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮ | ಜುಲೈ 10

    July 9, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.