Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ವೀಣಾ ವಾದನ ಗಂಧರ್ವ ಆರ್. ಕೆ. ಸೂರ್ಯನಾರಾಯಣ

    June 14, 2025

    ‘ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್’ ಪ್ರಶಸ್ತಿ ಪ್ರದಾನ ಸಮಾರಂಭ | ಜೂನ್ 22

    June 14, 2025

    ಉದ್ಘಾಟನೆಗೊಂಡ ‘ಯಕ್ಷಾಂತರಂಗ’ದ ಉಚಿತ ಯಕ್ಷಗಾನ ಹೆಜ್ಜೆ ತರಗತಿ

    June 14, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಖ್ಯಾತ ಕಾಷ್ಠ ಶಿಲ್ಪಿ ಮುರುವ ಮಾಣಿಲದ ನಾರಾಯಣ ಆಚಾರ್ಯ ಇನ್ನಿಲ್ಲ
    Sculpture

    ಖ್ಯಾತ ಕಾಷ್ಠ ಶಿಲ್ಪಿ ಮುರುವ ಮಾಣಿಲದ ನಾರಾಯಣ ಆಚಾರ್ಯ ಇನ್ನಿಲ್ಲ

    August 31, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪೆರುವಾಯಿ: ಮುರುವ ಬಳಿಯ ಮಾಣಿಲದ ನಿವಾಸಿ ಖ್ಯಾತ ಕಾಷ್ಠ ಶಿಲ್ಪಿ ನಾರಾಯಣ ಆಚಾರ್ಯ ಹೃದಯಾಘಾತದಿಂದ ದಿನಾಂಕ 30 ಆಗಸ್ಟ್ 2024ರ ರಾತ್ರಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
    ಶ್ರೀಯುತರು ದಿ. ಪಕೀರ ಆಚಾರ್ಯ ಹಾಗೂ ದಿ. ಪುಟ್ಟಮ್ಮ ದಂಪತಿಗಳ ಪುತ್ರನಾಗಿದ್ದು, ಮರದ ಕೆತ್ತನೆ ಕೆಲಸದ ಜೊತೆ ಖ್ಯಾತ ಕಾಷ್ಠ ಶಿಲ್ಪಿಯಾಗಿ ಹೆಸರುವಾಸಿಯಾಗಿದ್ದರು. ತಂದೆಯ ಜೊತೆ ಹಾಗೂ ಮಂಜೇಶ್ವರದ ರಥದ ಶಿಲ್ಪಿ ದಿ. ಈಶ್ವರ ಆಚಾರ್ಯರ ಮಾರ್ಗದರ್ಶನದಲ್ಲಿ ರಥದ ಶಿಲ್ಪದ ಭವ್ಯ ಪರಂಪರೆಯನ್ನು ವಿನೂತನ ಶೈಲಿಯಲ್ಲಿ ರಚಿಸಿ ಕೀರ್ತಿ ಪಡೆದಿದ್ದರು. ಮುರುವದ ಗ್ರಾಮ ದೈವ ಪಂಜುರ್ಲಿ, ಹುಲಿ ಭೂತಗಳ ವರಾಹ ಮತ್ತು ವ್ಯಾಘ್ರ ಬಂಡಿಯಲ್ಲಿ ಇವರ ಕೈಚಳಕದ ಕೆತ್ತನೆಯನ್ನು ಈಗಲೂ ಕಾಣಬಹುದು. ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನ ಮಾಣಿಲ, ಕೇಪು, ಚೆಲ್ಲಡ್ಗ ಮುಂತಾದ ಕಡೆಗಳಲ್ಲಿ ರಚಿತವಾದ ಶಿಲ್ಪ ಕಲೆಗಳಲ್ಲಿ ಇವರ ಕಲಾ ಪ್ರೌಢಿಮೆ ಎದ್ದು ಕಾಣುವಂತಿದೆ. ಅದೇ ರೀತಿ ಬೆಂಗಳೂರು ಗಿರಿನಗರ ಗಣೇಶ ದೇವಾಲಯದಲ್ಲಿ ಕೂಡ ಇವರ ಕಾಷ್ಠ ಶಿಲ್ಪ ಕಲೆಯ ಕೈಚಳಕವನ್ನು ಈಗಲೂ ಕಾಣಬಹುದು. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ರಥಶಿಲ್ಪದ ಕಾರ್ಯವನ್ನು ನಿರ್ವಹಿಸಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು. ಕಲೆಗಾಗಿ ಇವರು ಮಾಡಿದ ತ್ಯಾಗ ಅಮರವಾದುದು.
    ಇವರ ಕಾಷ್ಠ ಶಿಲ್ಪ ಕಲೆಯ ಸೇವೆಯನ್ನು ಮನಗಂಡು ಶ್ರೀ ದುರ್ಗಾ ಪರಮೇಶ್ವರೀ ಯುವಕ ಸಂಘ ತಾರಿದಳ ಮಾಣಿಲ ತಮ್ಮ ದಶಮಾನೋತ್ಸವದ ಸುಸಂದರ್ಭದಲ್ಲಿ ‘ಹುಟ್ಟೂರ ಸನ್ಮಾನ’ವನ್ನು ನೀಡಿ ಗೌರವಿಸಿದೆ.
    ಮೃತರು ಪತ್ನಿ ನಿರ್ಮಲ, ಮಕ್ಕಳಾದ ಗೋಪಾಲಕೃಷ್ಣ ಆಚಾರ್ಯ, ಹೇಮಂತ ಆಚಾರ್ಯ, ಸನತ್ ಆಚಾರ್ಯ, ಸುನಿಲ್ ಕುಮಾ‌ರ್ ಆಚಾರ್ಯ, ಸೊಸೆಯಂದಿರಾದ ಪ್ರಿಯ, ದೀಪಿಕಾ, ಸಹೋದರ ಸಹೋದರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಶಸ್ತಿ
    Next Article ‘ಶ್ರೀಕೃಷ್ಣ ಮಾಸೋತ್ಸವ’ದ ಸಮಾರೋಪ | ಸೆಪ್ಟೆಂಬರ್ 1
    roovari

    Comments are closed.

    Related Posts

    ಶಿಲ್ಪಿ ಶೇಶಪ್ಪ ಆಚಾರ್ಯ ಕಲ್ಲೊಟ್ಟೆ ನಿಧನ

    June 13, 2025

    ಮೈಸೂರಿನಲ್ಲಿ ಪ್ರೇರಣಾ ಕಲಾ ಕಾರ್ಯಾಗಾರ | ಜೂನ್ 28

    June 12, 2025

    ಚಿತ್ರಶಿಲ್ಪ ಕಲಾವಿದ ಬಿ.ಕೆ. ಗಣೇಶ್ ರೈಯವರಿಗೆ ‘ಸಂಸ್ಕೃತಿ ಶಿಲ್ಪಕಲಾ ರತ್ನ ಪ್ರಶಸ್ತಿ’ ಪ್ರದಾನ

    June 11, 2025

    ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ್ಸ್ ಪ್ರವೇಶಾತಿ ಅರ್ಜಿ ಆಹ್ವಾನ

    June 7, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.

    Notifications