Subscribe to Updates

    Get the latest creative news from FooBar about art, design and business.

    What's Hot

    ‘ಮಥಾಯಸ್ ಕುಟುಂಬ ಕಾವ್ಯ ಪ್ರಶಸ್ತಿ’ಗೆ ವಲೇರಿಯನ್ ಡಿಸೋಜರು ಆಯ್ಕೆ

    January 8, 2026

    ಜಯಲಕ್ಷ್ಮೀ ಎಸ್. ಜೋಕಟ್ಟೆಯವರ ‘ಕವಿತೆಗಳು’ ಕವನ ಸಂಕಲನ ಬಿಡುಗಡೆ

    January 7, 2026

    ಹಿರಿಯ ಯಕ್ಷಗಾನ ಭಾಗವತ ಕಡತೋಕಾ ಲಕ್ಷ್ಮೀನಾರಾಯಣ ನಿಧನ

    January 7, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮೂಡಬಿದಿರೆ ಜೈನಮಠದಲ್ಲಿ ‘ಮಹಾತ್ಮ’ ತುಳು ತಾಳಮದ್ದಳೆ
    Tulu

    ಮೂಡಬಿದಿರೆ ಜೈನಮಠದಲ್ಲಿ ‘ಮಹಾತ್ಮ’ ತುಳು ತಾಳಮದ್ದಳೆ

    December 18, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೂಡಬಿದಿರೆ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಧವಳತ್ರಯ ಜೈನಕಾಶಿ ಟ್ರಸ್ಟ್ (ರಿ.) ಶ್ರೀ ಜೈನಮಠ ಮೂಡಬಿದಿರೆ ಮತ್ತು ನಾದನೂಪುರ ಯಕ್ಷೋತ್ಥಾನ ಟ್ರಸ್ಟ್ ವಂಡಾರು ಇವರ ಆಶ್ರಯದಲ್ಲಿ ದಿನಾಂಕ 16 ಡಿಸೆಂಬರ್ 2025ರಂದು ಮೂಡಬಿದಿರೆ ಜೈನಮಠದಲ್ಲಿ ಜರಗಿದ ‘ತುಳು ನಾಡು – ನುಡಿಗೆ ಜೈನರ ಕೊಡುಗೆ’ ವಿಚಾರ ಸಂಕಿರಣದ ಅಂಗವಾಗಿ ‘ಮಹಾತ್ಮ’ ನೂತನ ಪ್ರಸಂಗದ ತುಳು ತಾಳಮದ್ದಳೆ ಜರಗಿತು.

    ಜೈನ ಧರ್ಮದ 16ನೇ ತೀರ್ಥಂಕರ ಶಾಂತಿನಾಥ ಸ್ವಾಮಿಯ ಪ್ರಥಮ ಭವಾಂಕವನ್ನು ಆಧರಿಸಿ ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ಕಾರ್ಯದರ್ಶಿ ಮತ್ತು ಯುವ ಪ್ರಸಂಗಕರ್ತೆ ಶುಭಾಶಯ ಇವರು ಬರೆದ ‘ಮಹಾತ್ಮ’ ಪ್ರಸಂಗದ ಮೊದಲ ಪ್ರಯೋಗದಲ್ಲಿ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರು ಭಾಗವಹಿಸಿದರು.

    ಹೆಸರಾಂತ ತಾಳಮದ್ದಳೆ ಅರ್ಥಧಾರಿಗಳಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ (ಸತ್ಯಕ – ವಿದ್ಯಾಧರ), ಎಂ.ಕೆ. ರಮೇಶಾಚಾರ್ಯ (ಸತ್ಯಭಾಮೆ), ಡಾ. ತಾರಾನಾಥ ವರ್ಕಾಡಿ (ಧರಣೀಜಟ), ರಾಧಾಕೃಷ್ಣ ಕಲ್ಚಾರ್ (ಕಪಿಲ), ಸದಾಶಿವ ಆಳ್ವ ತಲಪಾಡಿ (ಶ್ರೀಷೇಣ ರಾಜ) ಮತ್ತು ಡಾ. ಶ್ರುತಕೀರ್ತಿ ರಾಜ್ (ಅಗ್ನಿಭೂತಿ) ವಿವಿಧ ಪಾತ್ರಗಳನ್ನು ನಿರ್ವಹಿಸಿದರು. ಭಾಗವತರಾಗಿ ಶಿವಪ್ರಸಾದ್ ಎಡಪದವು, ಹಿಮ್ಮೇಳದಲ್ಲಿ ಚಂದ್ರಶೇಖರ ಗುರುವಾಯನಕೆರೆ ಮತ್ತು ರವಿರಾಜ ಜೈನ್ ಕಾರ್ಕಳ ಚೆಂಡೆ ಮದ್ದಳೆಗಳಲ್ಲಿ ಸಹಕರಿಸಿದರು.

    ಮೂಡಬಿದಿರೆ ಜೈನಮಠದ ಜಗದ್ಗುರು ಡಾ. ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಕಲಾವಿದರನ್ನು ಗೌರವಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಮಾಜಿ ಸಚಿವ ಅಭಯಚಂದ್ರ ಜೈನ್, ಜಗದೀಶ ಅಧಿಕಾರಿ ಮೂಡಬಿದಿರೆ, ಸಂಜಯಂತ್ ಕುಮಾರ್ ಶೆಟ್ಟಿ, ಸನತ್ ಜೈನ್, ಶುಭಾಶಯ, ಚಂದ್ರಿಕಾ ಮೊದಲಾದವರು ಉಪಸ್ಥಿತರಿದ್ದರು.

    baikady roovari Tulu yakshagana
    Share. Facebook Twitter Pinterest LinkedIn Tumblr WhatsApp Email
    Previous Articleಯಕ್ಷನಿಧಿ ಡೈರಿ ಬಿಡುಗಡೆ ಮತ್ತು ಕಲಾವಿದರಿಗೆ ಬಸ್ ಪಾಸ್ ವಿತರಣೆ
    Next Article ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ‘ವಾದಿರಾಜ-ಕನಕ ಗಾಯನ ಸ್ಪರ್ಧೆ’ | ಡಿಸೆಂಬರ್ 27
    roovari

    Add Comment Cancel Reply


    Related Posts

    ‘ಮಥಾಯಸ್ ಕುಟುಂಬ ಕಾವ್ಯ ಪ್ರಶಸ್ತಿ’ಗೆ ವಲೇರಿಯನ್ ಡಿಸೋಜರು ಆಯ್ಕೆ

    January 8, 2026

    ಜಯಲಕ್ಷ್ಮೀ ಎಸ್. ಜೋಕಟ್ಟೆಯವರ ‘ಕವಿತೆಗಳು’ ಕವನ ಸಂಕಲನ ಬಿಡುಗಡೆ

    January 7, 2026

    ಹಿರಿಯ ಯಕ್ಷಗಾನ ಭಾಗವತ ಕಡತೋಕಾ ಲಕ್ಷ್ಮೀನಾರಾಯಣ ನಿಧನ

    January 7, 2026

    ಸಂಭ್ರಮದಿಂದ ಸಂಪನ್ನಗೊಂಡ ಮಂಗಳೂರು ತಾಲೂಕು ‘ಬ್ಯಾರಿ ಸಾಹಿತ್ಯ ಸಮ್ಮೇಳನ’

    January 7, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.