Subscribe to Updates

    Get the latest creative news from FooBar about art, design and business.

    What's Hot

    ಡಾ. ಸುರೇಶ ನೆಗಳಗುಳಿ ಇವರಿಗೆ ‘ನಮ್ಮ ವೈದ್ಯೋ ನಾರಾಯಣ’ ಪ್ರಶಸ್ತಿ

    August 2, 2025

    ವಿಜಯಪುರದಲ್ಲಿ ಕುಮಾರವ್ಯಾಸ ಭಾರತ ವೇದಿಕೆಯಿಂದ ಗಮಕ ಕಾರ್ಯಕ್ರಮ | ಆಗಸ್ಟ್ 03

    August 2, 2025

    ಕೊಪ್ಪಳದಲ್ಲಿ ಕಿರು ಪುಸ್ತಕ ಲೋಕಾರ್ಪಣೆ ಸಮಾರಂಭ | ಆಗಸ್ಟ್ 03

    August 2, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಮೇಕಪ್ ಕಿಟ್’ ಮುಖವರ್ಣಿಕೆ ಕಾರ್ಯಗಾರ | ಅಕ್ಟೋಬರ್ 28 ಮತ್ತು 29ರಂದು 
    Workshop

    ‘ಮೇಕಪ್ ಕಿಟ್’ ಮುಖವರ್ಣಿಕೆ ಕಾರ್ಯಗಾರ | ಅಕ್ಟೋಬರ್ 28 ಮತ್ತು 29ರಂದು 

    October 23, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಣಿಪಾಲ : ಸಂಗಮ ಕಲಾವಿದೆರ್ ಮಣಿಪಾಲ (ರಿ.) ಸಂಸ್ಥೆಯು ದಿನಾಂಕ 28-10-2023 ಮತ್ತು 29-10-2023ರಂದು ಎರಡು ದಿನಗಳ ಮುಖವರ್ಣಿಕೆ ಕಾರ್ಯಗಾರ ‘ಮೇಕಪ್ ಕಿಟ್’ನ್ನು ಪ್ರಸ್ತುತ ಪಡಿಸುತ್ತದೆ. ಮಣಿಪಾಲದ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಐದು ಜನ ಸಂಪನ್ಮೂಲ ವ್ಯಕ್ತಿಗಳ ನೇತೃತ್ವದಲ್ಲಿ ನಡೆಯುವ ಈ ಕಾರ್ಯಾಗಾರದಲ್ಲಿ ಯಕ್ಷಗಾನ, ರಿಯಾಲಿಸ್ಟಿಕ್, ಮೈಮ್ ಮತ್ತು stylized ಮೇಕಪ್ ಇವುಗಳ ಬಗ್ಗೆ ತರಬೇತಿ ನಡೆಯಲಿದೆ.

    ಸಂಪನ್ಮೂಲ ವ್ಯಕ್ತಿಗಳು : ಭುವನ್ ಮಣಿಪಾಲ್, ಸಂದೀಪ್ ಶೆಟ್ಟಿಗಾರ್, ಉಜ್ವಲ್ ಯು.ವಿ., ಶ್ವೇತ ಅರೆಹೊಳೆ ಮತ್ತು ಪ್ರಜ್ವಲ್ ಶೇರಿಗಾರ್

    ಸೂಚನೆಗಳು:
    1. ಕಾರ್ಯಗಾರ ಬೆಳಿಗ್ಗೆ ಒಂಬತ್ತು ಗಂಟೆಯಿಂದ ಸಂಜೆ ಐದು ಗಂಟೆಯವರಗೆ ನಡೆಯಲಿದೆ.
    2. 10 ವರ್ಷ ಮೇಲ್ಪಟ್ಟ ಆಸಕ್ತರು ಭಾಗವಹಿಸಬಹುದು.
    3. ಭಾಗವಹಿಸುವ ವಿದ್ಯಾರ್ಥಿಗಳಿಗೆ ಊಟ ತಿಂಡಿಯ ವ್ಯವಸ್ಥೆ ಮಾಡಲಾಗುವುದು.
    4. ಕಾರ್ಯಾಗಾರಕ್ಕೆ 1000/- ಶುಲ್ಕ ನಿಗದಿ ಪಡಿಸಲಾಗಿದೆ.
    5. ಹೆಚ್ಚಿನ ಮಾಹಿತಿಗಳನ್ನು ಕಾರ್ಯಾಗಾರದ ಮುಂಚಿತವಾಗಿ ನೀಡಲಾಗುವುದು.

    ಸಂಗಮ ಕಲಾವಿದೆರ್ ಮಣಿಪಾಲ (ರಿ.), 1997ರಲ್ಲಿ ತುಳು ರಂಗಭೂಮಿಯ ಹವ್ಯಾಸಿ ಕಲಾವಿದರ ಉತ್ಸಾಹದಿಂದ ಹುಟ್ಟಿ, ಕ್ರಿಯಾಶೀಲವಾಗಿ ಬೆಳೆದು ಬಂದ ಸಂಸ್ಥೆ. ತನ್ನ ನವ್ಯತೆ ಮತ್ತು ನೈಪುಣ್ಯತೆಗೆ ಸಾಕ್ಷಿಯೆಂಬಂತೆ ಪ್ರತೀ ವರ್ಷ ಹೊಸ ನಾಟಕದ ಪ್ರಯೋಗದಲ್ಲಿ ತೊಡಗಿಸಿಕೊಳ್ಳುತ್ತದೆ. ಟಾಗೋರ್, ಮೊಲಿಯಾರ್ ಮುಂತಾದವರ ಪ್ರಸಿದ್ಧ ನಾಟಕಗಳನ್ನು ತುಳು ರಂಗಭೂಮಿಯಲ್ಲಿ ಪ್ರಯೋಗಿಸಿ, ರಾಜ್ಯದ ಅನೇಕ ರಂಗಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.

    ಸಾಂಸ್ಕೃತಿಕ ಅಭಿರುಚಿಯ ಜೊತೆಗೆ ಸಾಮಾಜಿಕ ಸಂವೇದನೆ ತಂಡದ ಮುಖ್ಯ ಧ್ಯೇಯವಾಗಿದ್ದು. ಆ ಹಾದಿಯಲ್ಲಿ ನಕ್ಸಲಿಸಂ, ಕೋಮುವಾದ, ನದಿ ತಿರುವು ಯೋಜನೆ ಮುಂತಾದ ತುರ್ತು ಹಾಗೂ ಪ್ರಾದೇಶಿಕ ಸಮಸ್ಯೆಗಳಿಗೆ ತನ್ನ ನಾಟಕದ ಮೂಲಕ ಸ್ಪಂದಿಸಲು ಪ್ರಯತ್ನಿಸಿದೆ. ‘ಉಂದು ರಾಮಾಯಣ ಅತ್ತ್’ ಎಂಬ ರಂಗಪ್ರಯೋಗ ನಕ್ಸಲ್ ಚಟುವಟಿಕೆಗಳು ಹೆಚ್ಚಿರುವ ಮತ್ತು ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಸುಮಾರು ಐವತ್ತು ಹಳ್ಳಿಗಳಲ್ಲಿ ಪ್ರದರ್ಶನಗೊಂಡಿದೆ.

    ಪ್ರಯತ್ನಕ್ಕೆ ಫಲಶ್ರುತಿ ಎಂಬಂತೆ  ತುಳುಕೂಟ (ರಿ.) ಉಡುಪಿ ನಡೆಸುವ ನಾಟಕ ಸ್ಪರ್ಧೆಯಲ್ಲಿ ಏಳು ಬಾರಿ ಪ್ರಥಮ ಬಹುಮಾನ ಪಡೆದಿದ್ದು, ‘ಕರ್ಣಭಾರ’, ‘ವಾಲಿವಧೆ’ ಮತ್ತು ‘ವಿ ಟೀಚ್ ಲೈಫ್ ಸರ್’ ಎಂಬ ನಾಟಕಗಳು ಡೆಲ್ಲಿಯ ರಾಷ್ಟ್ರೀಯ ನಾಟಕ ಶಾಲೆ (NSD) ನಡೆಸುವ ಅಂತರರಾಷ್ಟ್ರೀಯ ಮಟ್ಟದ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಇದರ ಜೊತೆಗೆ ‘ಬಣ್ಣದ ಹೆಜ್ಜೆ’ ಎಂಬ ಮಕ್ಕಳ ರಂಗ ಶಿಬಿರವನ್ನು ಪ್ರತಿವರ್ಷ ಆಯೋಜಿಸುತ್ತಾ ಬಂದಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರು ವಿವಿ ಕನಕ ಪೀಠದಿಂದ ರಾಷ್ಟ್ರೀಯ ವಿಚಾರಸಂಕಿರಣಕ್ಕೆ ಪ್ರಬಂಧಗಳ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 4
    Next Article ‘ಕಥಾಬಿಂದು ಸಾಹಿತೋತ್ಸವ 2023’ | ಅಕ್ಟೋಬರ್ 29ರಂದು
    roovari

    Add Comment Cancel Reply


    Related Posts

    ನಾಪೋಕ್ಲುವಿನಲ್ಲಿ ಒಂದು ದಿನದ ಅರೆಭಾಷೆ ಕಥೆ ರಚನೆ ಕಾರ್ಯಾಗಾರ

    August 2, 2025

    ಯಶಸ್ವಿಯಾಗಿ ನಡೆದ ವಿದ್ಯಾರ್ಥಿಗಳ ಸಾಹಿತ್ಯ ಸಾಂಸ್ಕೃತಿಕ ಕಮ್ಮಟ

    July 31, 2025

    ಮೈಸೂರಿನ ಕಲಾಮಂದಿರ ಆವರಣದಲ್ಲಿ ‘ನಟನಾಭ್ಯಾಸ ಶಿಬಿರ’ | ಆಗಸ್ಟ್ 04ರಿಂದ 15

    July 30, 2025

    ಉಡುಪಿಯಲ್ಲಿ ‘ನೃತ್ಯ ರಂಗದಲ್ಲಿ ಬೆಳಕಿನ ವಿನ್ಯಾಸ’ ಪ್ರಾತ್ಯಕ್ಷಿಕೆ ಮತ್ತು ಕಾರ್ಯಾಗಾರ | ಜುಲೈ 20

    July 16, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.