ಹಾಸನ : ಮನೆ ಮನೆ ಕವಿಗೋಷ್ಠಿ ಸಾಹಿತ್ಯ ಸಂಘಟನೆ ಹಾಸನ ಇವರ ವತಿಯಿಂದ ಕವಯಿತ್ರಿ ಶ್ರೀಮತಿ ರೇಖಾ ಪ್ರಕಾಶ್ ಇವರ ಪ್ರಾಯೋಜಕತ್ವದಲ್ಲಿ ‘ಲಕ್ಷ್ಮೀ ನಿವಾಸ’, 6ನೇ ಕ್ರಾಸ್, ಎರಡನೇ ಹಂತ, ಆದಾಯ ತೆರಿಗೆ ಕಛೇರಿ ಹಿಂಭಾಗ, ವಿಜಯನಗರ, ಹಾಸನ ಇಲ್ಲಿ ದಿನಾಂಕ 01 ಜೂನ್ 2025ರ ಭಾನುವಾರದಂದು ಸಂಜೆ 3-30 ಗಂಟೆಗೆ ಕವಿಗೋಷ್ಠಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಮೊದಲಿಗೆ ಕವಯಿತ್ರಿ ಶ್ರೀಮತಿ ಡಾ. ಶಾಂತ ಅತ್ನಿಯವರ ‘ಕಷ್ಟಗಳಿಗೂ ಸಾವಿದೆ’ ಕೃತಿ ಕುರಿತು ಸಾಹಿತಿಗಳಾದ ಶ್ರೀಮತಿ ವಾಣಿ ಮಹೇಶ್ ಇವರಿಂದ ವಿಶ್ಲೇಷಣೆ ಹಾಗೂ ಆಗಮಿಸಿದ ಕವಿಗಳಿಂದ ಕವನವಾಚನ ಮತ್ತು ವಿಮರ್ಶೆ ಹಾಗೂ ಎಂ. ಕುಸುಮರವರ ‘ಸಂವಾದಿ’ ಕವನ ಸಂಕಲನ ಲೋಕಾರ್ಪಣೆಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕವಿಗಳು, ಸಾಹಿತ್ಯಾಸಕ್ತರು ಭಾಗವಹಿಸಬೇಕೆಂದು ಮನೆ ಮನೆ ಕವಿಗೋಷ್ಠಿ ಸಂಚಾಲಕರಾದ ಶ್ರೀಮತಿ ಸುಕನ್ಯಾ ಮುಕುಂದರವರು ಕೋರಿರುತ್ತಾರೆ. ಸಂಪರ್ಕಕ್ಕಾಗಿ ಸಂಖ್ಯೆಗಳು ಸುಕನ್ಯಾ ಮುಕುಂದ – 81238 27811, ರೇಖಾ ಪ್ರಕಾಶ್ – 8660468341, ಸಮುದ್ರವಳ್ಳಿ ವಾಸು -9449311298, ವಾಣಿ ಮಹೇಶ್ – 7975353693.