Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ‘ಲೈಟ್ಸ್ ಆಫ್’ ನಾಟಕ ಪ್ರದರ್ಶನ | ಡಿಸೆಂಬರ್ 19

    December 18, 2025

    ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ‘ವಾದಿರಾಜ-ಕನಕ ಗಾಯನ ಸ್ಪರ್ಧೆ’ | ಡಿಸೆಂಬರ್ 27

    December 18, 2025

    ಮೂಡಬಿದಿರೆ ಜೈನಮಠದಲ್ಲಿ ‘ಮಹಾತ್ಮ’ ತುಳು ತಾಳಮದ್ದಳೆ

    December 18, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರು ವಿವಿಯಲ್ಲಿ ಕಸಾಪ ದತ್ತಿ ಉಪನ್ಯಾಸ
    Literature

    ಮಂಗಳೂರು ವಿವಿಯಲ್ಲಿ ಕಸಾಪ ದತ್ತಿ ಉಪನ್ಯಾಸ

    July 1, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮುಡಿಪು : ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕವು ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಂಬಲಪಾಡಿ ವ್ಯಾಸ ಬಲ್ಲಾಳ ಜಾನಕಿ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ : 28-06-2023 ರಂದು ಮಂಗಳೂರು ವಿವಿಯ ಯು.ಆರ್. ರಾವ್ ಸಭಾಂಗಣದಲ್ಲಿ ನಡೆಯಿತು.

    ಕಾಸರಗೋಡು ಸರಕಾರಿ ಸ್ನಾತಕೋತ್ತರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕಿ ಡಾ. ಯು. ಮಹೇಶ್ವರಿ ಇವರು ಸೇಡಿಯಾಪು ಕೃಷ್ಣ ಭಟ್ಟರ ಬದುಕು ಮತ್ತು ಸಾಹಿತ್ಯದ ಕುರಿತು ಮಾತನಾಡುತ್ತಾ “ಆರ್ಯ ದ್ರಾವಿಡ ಚಿಂತನೆ ಬ್ರಿಟಿಷರ ಒಡಕಿನ ರಾಜಕೀಯ ದಾಳದ ಸೃಷ್ಟಿ. ಇದನ್ನು ಭಾರತೀಯ ಪರಂಪರೆ ಮತ್ತು ಇತಿಹಾಸ ಸಾಕ್ಷ್ಯಗಳ ಬೆಳಕಿನಲ್ಲಿ ವಿಶ್ಲೇಷಿಸಿದವರು ಸೇಡಿಯಾಪು ಕೃಷ್ಣಭಟ್ಟರು. ಅವರ ತಥ್ಯದರ್ಶನ ಕೃತಿ ಇದನ್ನು ಅನಾವರಣ ಮಾಡಿದೆ. ಸೇಡಿಯಾಪು ಅವರು ಗಾಂಧೀವಾದಿಯಾಗಿ ಜೀವನದುದ್ದಕ್ಕೂ ನಡೆದು ಬಂದ ಹಾದಿ ವಿಶೇಷವಾದುದು. ದೇಶೀಯತೆಗೆ ಒತ್ತುಕೊಟ್ಟು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅವರ ಚಿಂತನೆ ನಮಗೆ ದಾರಿದೀಪ.

    ಗಡಿಪ್ರದೇಶದಲ್ಲಿ ಕನ್ನಡದ ಚಟುವಟಿಕೆಗಳಿಗೆ ಸಕ್ರಿಯತೆಯನ್ನು ಒದಗಿಸಿದ ಗೋವಿಂದ ಪೈ, ಮುಳಿಯ ತಿಮ್ಮಪ್ಪಯ್ಯರ ಬಳಿಕ ಸೇಡಿಯಾಪು ಅವರು ಮುಂದುವರಿಸಿ, ಈ ಪ್ರದೇಶಕ್ಕೆ ಹಿರಿಮೆಯ ಘನತೆಯನ್ನು ಹೆಚ್ಚಿಸಿದವರಾಗಿದ್ದಾರೆ. ಅವರು ದೃಷ್ಟಿಯನ್ನು ಬೇಗ ಕಳೆದುಕೊಂಡರೂ ತಮ್ಮ ಅಗಾಧ ನೆನಪಿನ, ಜ್ಞಾನದ ಶಕ್ತಿಯಿಂದ ಅನೇಕ ಕೃತಿಗಳನ್ನು ಹೊರತಂದಿರುವುದು ಅವರ ವಿದ್ವತ್ ಶಕ್ತಿಗೆ ಸಾಕ್ಷಿಯಾಗಿದೆ. ಅವರು ಬರೆದಿರುವ ಕತೆ, ಕವಿತೆ ಕಡಿಮೆಯೆನಿಸಿದರೂ, ಅವರ ಚಿಂತನೆಗಳು ತಳಸ್ಪರ್ಶಿಯಾಗಿತ್ತು. ಅವರ ಬರಹಗಳು ಊಹಾಪೋಹಗಳಿಗೆ ಸೀಮಿತವಾಗಿರದೆ ಆಧಾರಸಹಿತವಾಗಿತ್ತು. ಸೇಡಿಯಾಪು ಅವರು ಸೃಜಶೀಲತೆ ಮತ್ತು ಪಾಂಡಿತ್ಯ ಸಂಗಮಿಸಿದ ವ್ಯಕ್ತಿಯಾಗಿದ್ದರು. ಭಾಷೆ, ಸಾಹಿತ್ಯದ ಪುನರುತ್ಥಾನಕ್ಕೆ ಇಂತವರ ನೆನಪನ್ನು ಶಾಶ್ವತವಾಗಿಸುವ ಕೆಲಸ ನಮ್ಮಿಂದಾಗಬೇಕಿದೆ” ಎಂದರು.

    ಗಾಯಕಿ ಶ್ರೀದೇವಿ ಕಲ್ಲಡ್ಕ ಸೇಡಿಯಾಪು ಕವಿತೆಗಳನ್ನು ಹಾಡಿದರು. ಮಂಗಳೂರು ವಿವಿ ಕನ್ನಡ ವಿಭಾಗದ ಅಧ್ಯಕ್ಷ ಡಾ.ಸೋಮಣ್ಣ ಹೊಂಗಳ್ಳಿ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, “ಸೇಡಿಯಾಪು ಅವರ ಬಗ್ಗೆ ಹೆಚ್ಚು ಅಧ್ಯಯನಗಳು ನಡೆಯದಿರುವುದು ವಿಷಾದನೀಯ. ಸೇಡಿಯಾಪು ಅವರು ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ಕನ್ನಡಕ್ಕಾಗಿ ಹೋರಾಡಿದವರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನೇಕ ಕೊಡುಗೆ ನೀಡಿದ ಇವರ ಬಗ್ಗೆ ಹೆಚ್ಚೆಚ್ಚು ಅಧ್ಯಯನಗಳು ನಡೆಯಬೇಕಿದೆ” ಎಂದರು.

    ಉಳ್ಳಾಲ ಕಸಾಪ ಅಧ್ಯಕ್ಷರಾದ ಡಾ.ಧನಂಜಯ ಕುಂಬ್ಳೆ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಳ್ಳಾಲ ಕಸಾಪ ಹೋಬಳಿ ಅಧ್ಯಕ್ಷರಾದ ವಿಜಯಲಕ್ಷ್ಮಿ ರೈ ಕಲ್ಲಿಮಾರ್, ಕಸಾಪ ಪದಾಧಿಕಾರಿಗಳಾದ ರಾಧಾಕೃಷ್ಣ ರಾವ್, ತ್ಯಾಗಂ ಹರೇಕಳ, ಅಮರ್ ಪೂಪಾಡಿಕಲ್ಲು, ಪ್ರಸಾದ್ ರೈ ಕಲ್ಲಿಮಾರ್, ಕನ್ನಡ ವಿಭಾಗದ ಡಾ. ಯಶುಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಕೋಶಾಧಿಕಾರಿ ಚಂದ್ರಹಾಸ ಶೆಟ್ಟಿ ವಂದಿಸಿ, ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರ್ ಅವರು ಕಾರ್ಯಕ್ರಮ ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleರಾಷ್ಟ್ರೀಯ ವೈದ್ಯರ ದಿನಾಚರಣೆ | ವಿಶೇಷ ಪರಿಚಯ ಲೇಖನ – ಶ್ರೀ ಜಯಪ್ರಕಾಶ್ ಬಿ.
    Next Article ನಾಟಕ ವಿಮರ್ಶೆ | ‘ಜುಂ ಜುಂ ಆನೆ ಮತ್ತು ಪುಟ್ಟಿ’ – ಸತ್ಯನಾ ಕೊಡೇರಿ
    roovari

    Add Comment Cancel Reply


    Related Posts

    ಶ್ರೀ ರಾಮಾಶ್ರಮ ಶಾಲೆಯಲ್ಲಿ 115ನೇಯ ‘ಸಾಹಿತ್ಯ ಅಭಿರುಚಿ ಕಾರ್ಯಕ್ರಮ’

    December 18, 2025

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ತಂದೆ ಬದುಕು ಗುಲಾಬಿ’

    December 17, 2025

    ‘ಭೂತಾರಾಧನೆ’ ಡಾ. ಕೆ. ಚಿನ್ನಪ್ಪ ಗೌಡರ ಸಂಶೋಧನಾ ಕೃತಿ ಬಿಡುಗಡೆ ಸಮಾರಂಭ | ಡಿಸೆಂಬರ್ 20

    December 17, 2025

    ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರೊ. ಬಿ.ಎ. ವಿವೇಕ ರೈ ಇವರಿಂದ ಉಪನ್ಯಾಸ | ಡಿಸೆಂಬರ್ 22ರಿಂದ 24

    December 17, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.