Subscribe to Updates

    Get the latest creative news from FooBar about art, design and business.

    What's Hot

    “ಪ್ರತಿಯೊಬ್ಬ ವ್ಯಕ್ತಿಯ ಒಳಗೊಬ್ಬ ಕಲಾವಿದನಿರ್ತಾನೆ” – ಕಾಸರಗೋಡು ಚಿನ್ನಾ

    June 2, 2025

    ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿಯಿಂದ ಅರೆಭಾಷೆ ಕಥೆ ಬರೆಯುವ ಕಾರ್ಯಾಗಾರ

    June 2, 2025

    ‘ಬಾಳ ಹಾದಿಯಲಿ ಬೆಳ್ಳಿ ಚುಕ್ಕಿ’ ಕಾದಂಬರಿಗೆ ಇಂಡಿಯನ್ ಐಕಾನ್ ಅವಾರ್ಡ್

    June 2, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಿಂಗಾಪುರದ ರಂಗ ತರಬೇತಿಗೆ ಮನೀಷ್ ಆಯ್ಕೆ
    Theatre

    ಸಿಂಗಾಪುರದ ರಂಗ ತರಬೇತಿಗೆ ಮನೀಷ್ ಆಯ್ಕೆ

    September 28, 2024Updated:September 27, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಸಿಂಗಾಪುರದ ಪ್ರತಿಷ್ಟಿತ ಅಂತರ್ ಸಾಂಸ್ಕೃತಿಕ ರಂಗ ಅಧ್ಯಯನ ಸಂಸ್ಥೆಯು (Intercultural Theatre Institute) ಆಯೋಜಿಸುವ ಮೂರು ವರ್ಷಗಳ ವೃತ್ತಿಪರ ನಾಟಕ ತರಬೇತಿಗೆ ಮಂಗಳೂರು ದೇರೇಬೈಲ್ ನಿವಾಸಿ ಮನೀಷ್ ಗೊಡ್ಲಿನ್ ಪಿಂಟೊ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಹೈದರಾಬಾದಿನಲ್ಲಿ ನಡೆದ ಸಂದರ್ಶನದ ಮುಖಾಂತರ ಈ ಆಯ್ಕೆ ನಡೆದಿದೆ.
    ಏಶಿಯಾದ ಪ್ರಮುಖ ಸಾಂಪ್ರದಾಯಿಕ ಕಲಾ ಪ್ರಕಾರಗಳಾದ ಜಪಾನಿನ ನೊ ಥಿಯೇಟರ್, ಚೀನಾದ ಬೀಜಿಂಗ್ ಒಪೆರಾ ಮತ್ತು ಥಾಯ್ಚೀ, ಇಂಡೋನೇಶ್ಯಾದ ವಯಾಂಗ್ ವೊಂಗ್, ಭಾರತದ ಕುಡಿಯಾಟ್ಟಂ ಇತ್ಯಾದಿ ಈ ತರಬೇತಿಯಲ್ಲಿ ಒಳಗೊಂಡಿದೆ. ಅದೇ ರೀತಿ ಸಮಕಾಲೀನ ರಂಗಭೂಮಿಯ ಬಗ್ಗೆ ಸಮಗ್ರ ಕಲಿಕೆ ಇರಲಿದ್ದು, ನಟನೆ, ಆಂಗಿಕ ಅಭಿನಯ, ಧ್ವನಿ ನಿಯಂತ್ರಣ, ರಂಗಭೂಮಿಯ ತಾಂತ್ರಿಕತೆಗಳು ಕೂಡಾ ಕಲಿಕೆಯ ಭಾಗವಾಗಿವೆ. ಸಂಸ್ಥೆಯ ತರಬೇತಿಗೆ ಇದುವರೆಗೆ ಕರ್ನಾಟಕದಿಂದ ಆಯ್ಕೆಯಾದ ಮೂರನೇ ರಂಗಕರ್ಮಿ ಮನೀಷ್.
    ಮನೀಷ್ ಇವರು ಮಾಂಡ್ ಸೊಭಾಣ್ ಪ್ರವರ್ತಿತ ನಾಟಕ ರೆಪರ್ಟರಿ ಕಲಾಕುಲ್ ಇದರ ಹಳೆ ವಿದ್ಯಾರ್ಥಿಯಾಗಿದ್ದು, 2019 ರ ಸಾಲಿನ `ಶ್ರೇಷ್ಟ ಕಲಾ ವಿದ್ಯಾರ್ಥಿ’ ಪ್ರಶಸ್ತಿ ಪಡೆದಿದ್ದರು. 2022 – 23 ನೇ ರಾಷ್ಟ್ರೀಯ ನಾಟಕ ಶಾಲೆ (ತ್ರಿಪುರ) ಇಲ್ಲಿಂದ ಪದವಿ ಪಡೆದಿದ್ದಾರೆ. ನಂತರ ಮಣಿಪುರ, ತ್ರಿಪುರ, ಕಾಶ್ಮೀರ ಇಲ್ಲಿ ತಾನೇ ಸ್ವತಃ ರಂಗ ತರಬೇತಿ ನೀಡಿದ್ದಾರೆ. ಎನ್. ಎಸ್. ಡಿ. ಇದರ ಅಂತರಾಷ್ಟ್ರೀಯ ನಾಟಕ ‘ಹಬ್ಬ ಭಾರತ್ ರಂಗ್ ಮಹೋತ್ಸವ’ದಲ್ಲಿ ಭಾಗವಹಿಸಿದ್ದಾರೆ. ಇದುವರೆಗೆ ಕೊಂಕಣಿ, ಕನ್ನಡ, ತುಳು, ಹಿಂದಿ ಮತ್ತಿತರ ಭಾಷೆಯ ಇಪ್ಪತ್ತಕ್ಕೂ ಮಿಕ್ಕಿ ನಾಟಕಗಳಲ್ಲಿ ನಟನೆ ಮಾಡಿದ್ದಾರೆ. ನಾಲ್ಕು ನಾಟಕಗಳಿಗೆ ನಿರ್ದೇಶನ ನೀಡಿರುವುದು ಇವರ ಹೆಗ್ಗಳಿಕೆ.

    Share. Facebook Twitter Pinterest LinkedIn Tumblr WhatsApp Email
    Previous Articleಮೈಸೂರಿನ ಕಲಾಮಂದಿರದ ಆವರಣದಲ್ಲಿ ಸಮಾರೋಪ ಸಮಾರಂಭ ಮತ್ತು ನಾಟಕ ಪ್ರದರ್ಶನ | ಸೆಪ್ಟೆಂಬರ್ 29
    Next Article ಮಂಗಳೂರಿನ ಸಂತ ಅಲೋಶಿಯಸ್ ಪ್ರೌಢ ಶಾಲೆಯಲ್ಲಿ ‘ಜೀವ -ಭಾವ-ಯಾನ’ ಕಾರ್ಯಕ್ರಮ
    roovari

    Comments are closed.

    Related Posts

    “ಪ್ರತಿಯೊಬ್ಬ ವ್ಯಕ್ತಿಯ ಒಳಗೊಬ್ಬ ಕಲಾವಿದನಿರ್ತಾನೆ” – ಕಾಸರಗೋಡು ಚಿನ್ನಾ

    June 2, 2025

    ಆಳ್ವಾಸ್ ರಂಗ ತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 10

    May 31, 2025

    ನಟನ ರಂಗಶಾಲೆಯಲ್ಲಿ ಮಕ್ಕಳ ‘ಅಭಿನಯ ಮತ್ತು ರಂಗ ತರಬೇತಿ’ | ಜೂನ್ 08

    May 31, 2025

    ವಿಜಯನಗರ ಬಿಂಬ ವತಿಯಿಂದ ‘ಶನಿವಾರದ ರಂಗ ಶಾಲೆ’ | ಜೂನ್ 07  

    May 31, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.