Subscribe to Updates

    Get the latest creative news from FooBar about art, design and business.

    What's Hot

    ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಕವನ ಆಹ್ವಾನ | ಕೊನೆಯ ದಿನಾಂಕ ಡಿಸೆಂಬರ್ 02

    November 25, 2025

    ಮಂಗಳೂರಿನ ರಾಮಕೃಷ್ಣ ಮಠದಲ್ಲಿ ‘ಮಂಗಳೂರು ಸಂಗೀತೋತ್ಸವ’ | ನವೆಂಬರ್ 28, 29 ಮತ್ತು 30

    November 25, 2025

    ನಾಟಕ ವಿಮರ್ಶೆ | ಭಾವನಾತ್ಮಕ ಸಂಬಂಧ ನಾಟಕ ‘ಗೋಕುಲ ನಿರ್ಗಮನ’

    November 25, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮೈಸೂರಿನ ಜನಾರ್ದನ ಜನ್ನಿ ಇವರು ಪಂಚಪ್ಪ ಸಮುದಾಯ ಮಾರ್ಗಿ ಪ್ರಶಸ್ತಿಗೆ ಆಯ್ಕೆ
    Awards

    ಮೈಸೂರಿನ ಜನಾರ್ದನ ಜನ್ನಿ ಇವರು ಪಂಚಪ್ಪ ಸಮುದಾಯ ಮಾರ್ಗಿ ಪ್ರಶಸ್ತಿಗೆ ಆಯ್ಕೆ

    May 21, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕೊಪ್ಪಳ : ಮೇ ಸಾಹಿತ್ಯ ಮೇಳದ ಬಳಗದವರಾಗಿರುವ ದಾವಣಗೆರೆಯ ಉಪಪ್ರಾಚಾರ್ಯರಾದ ಕಲ್ಪಿತರಾಣಿ ಇವರು ತಮ್ಮ ತಂದೆಯ ಹೆಸರಿನಲ್ಲಿ ಪ್ರಯೋಜಿಸಿರುವ ಪಂಚಪ್ಪ ಸಮುದಾಯ ಮಾರ್ಗಿ ಪ್ರಶಸ್ತಿಗೆ ಮೈಸೂರಿನ ಜನಾರ್ದನ ಜನ್ನಿ ಆಯ್ಕೆಯಾಗಿದ್ದಾರೆ. ಮೇ 25 ಹಾಗೂ 26ರಂದು ಕೂಪ್ಪಳದಲ್ಲಿ ನಡೆಯಲಿರುವ ಮೇ ಸಾಹಿತ್ಯ ಮೇಳದ ಸಂದರ್ಭದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ಪ್ರಶಸ್ತಿಯು ಹತ್ತು ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಈ ಪ್ರಶಸ್ತಿ ಕಳೆದ ವರ್ಷ ರಂಗಕರ್ಮಿ ಬಸವಲಿಂಗಯ್ಯ ಅವರಿಗೆ ಸಂದಾಯವಾಗಿತ್ತು.
    ಸಮುದಾಯದ ಗೌರವಾಧ್ಯಕ್ಷರಾಗಿ ಹಾಗೂ ಮೈಸೂರು ರಂಗಾಯಣದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಮೈಸೂರಿನ ಜನಾರ್ದನ ಜನ್ನಿ ತಮ್ಮ ಕಂಚಿನ ಕಂಠದ ಕ್ರಾಂತಿಗೀತೆಗಳಿಂದ ಕರ್ನಾಟಕದ ಜನಚಳುವಳಿಗೆ ದೊಡ್ಡ ಶಕ್ತಿ ತುಂಬಿದವರು ಹಾಗೂ ಸಾಹಿತ್ಯದಷ್ಟೇ ಹಾಡುಗಾರಿಕೆಗೂ ಘನತೆಯನ್ನು ತಂದುಕೊಟ್ಟವರು ಮತ್ತು ಹೃದಯ ತುಂಬಿ ಹಾಡುತ್ತ ರಾಜ್ಯದ ಜನಗಳಲ್ಲಿ ಅರಿವಿನ ಎಚ್ಚರ ಮೂಡಿಸಿದವರು. ಎಂಬತ್ತು ತೊಂಬತ್ತರ ದಶಕಗಳಲ್ಲಿ ಎಲ್ಲಿಯೇ ಚಳವಳಿಗಳು ನಡೆದರೂ ಅಲ್ಲಿ ಜನ್ನಿ ಇರಲೇಬೇಕು ಎಂಬಂಥ ವಾತಾವರಣ ಇತ್ತು. ಈ ಮೂಲಕ ನೂರಾರು ಕ್ರಾಂತಿಗೀತೆಗಳ ಹಾಡುಗಾರರು ಸೃಷ್ಟಿಯಾದರು. ಚಳುವಳಿಗಳು ಗರಿಗಟ್ಟಿದವು. ಹಲವು ಎದೆಗಳಲ್ಲಿ ಈ ಹಾಡುಗಳು ನಾನಾತರದ ಅಲೆಗಳನ್ನು ಎಬ್ಬಿಸಿದ್ದಂತೂ ನಿಜವೇ.

    Share. Facebook Twitter Pinterest LinkedIn Tumblr WhatsApp Email
    Previous Articleಬಂಡಾಯ ಕವಿ ಹಾಗೂ ವಿಮರ್ಶಕ ಆನಂದ ಲಕ್ಕೂರು ನಿಧನ
    Next Article ಪುಸ್ತಕ ವಿಮರ್ಶೆ | ಅನುಪಮಾ ರಾಘವೇಂದ್ರ ಅವರ ‘ಹತ್ತಗುಳು’
    roovari

    Add Comment Cancel Reply


    Related Posts

    ಮಂಗಳೂರಿನ ರಾಮಕೃಷ್ಣ ಮಠದಲ್ಲಿ ‘ಮಂಗಳೂರು ಸಂಗೀತೋತ್ಸವ’ | ನವೆಂಬರ್ 28, 29 ಮತ್ತು 30

    November 25, 2025

    ಮಂಗಳೂರಿನ ವಿಶ್ವವಿದ್ಯಾನಿಲಯದಲ್ಲಿ ಉದ್ಘಾಟನೆಗೊಂಡ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2025’

    November 25, 2025

    ‘ದಶಕ ಸಮರ್ಪಣಂ’ ಆರೋಹಣಂ ಸಂಗೀತ ಶಾಲೆಯ ದಶಮಾನೋತ್ಸವ ಸಂಭ್ರಮಾಚರಣೆ

    November 25, 2025

    ಯಕ್ಷಗಾನ ಹಿರಿಯ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಇವರಿಗೆ ಪ್ರಶಸ್ತಿ ಪ್ರದಾನ

    November 25, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.