Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಜನಪ್ರಿಯ ರಂಗಭೂಮಿ ನಟ ಯಶವಂತ ಸರದೇಶಪಾಂಡೆ

    June 13, 2025

    ಯಕ್ಷಧ್ರುವ ಪಟ್ಲ ಫೌಂಡೇಶನ್ ಬಂಟ್ವಾಳ ಘಟಕದ ಅಧ್ಯಕ್ಷರಾಗಿ ದಿವಾಕರ ಶೆಟ್ಟಿ ಆಯ್ಕೆ

    June 13, 2025

    ಲೋಕಾರ್ಪಣೆಗೊಂಡ ‘ಬ್ಯಾರಿ ಬಾಸೆ ಪಡಿಕೋರು’ ಕೃತಿ

    June 13, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಉಡುಪಿಯಲ್ಲಿ ‘ಮಾರ್ನಮಿ’ ನಾಟಕ ಪ್ರದರ್ಶನ | ಮಾರ್ಚ್ 5
    Drama

    ಉಡುಪಿಯಲ್ಲಿ ‘ಮಾರ್ನಮಿ’ ನಾಟಕ ಪ್ರದರ್ಶನ | ಮಾರ್ಚ್ 5

    March 1, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷರಂಗಾಯಣ ಕಾರ್ಕಳ ವತಿಯಿಂದ ಉಡುಪಿಯ ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ ದಿನಾಂಕ 05-03-2024ರ ಮಂಗಳವಾರ ಸಂಜೆ ಗಂಟೆ 6:15ಕ್ಕೆ ಡಾ. ಗೀತಾ ಪಿ. ಸಿದ್ಧಿ ಅವರ ಕಥೆ ಆಧಾರಿತ ಶಿವಮೊಗ್ಗ ರಂಗಾಯಣ ಪ್ರಸ್ತುತಪಡಿಸುವ ‘ಮಾರ್ನಮಿ’ ನಾಟಕ ಪ್ರದರ್ಶನ ನಡೆಯಲಿದೆ.

    ಈ ನಾಟಕದ ರಚನೆ, ಪರಿಕಲ್ಪನೆ ಮತ್ತು ನಿರ್ದೇಶನ ಶ್ರೀಕಾಂತ್ ಕುಮಟಾ ಇವರು ಮಾಡಿದ್ದು, ಶ್ರೀಪಾದ್ ತೀರ್ಥಹಳ್ಳಿ ಇವರ ಸಂಗೀತ ಇರುತ್ತದೆ. ನೃತ್ಯ ಸಂಯೋಜನೆ ಮತ್ತು ಸಿದ್ಧಿ ಹಾಡುಗಳು ಗಿರೀಶ್ ಪಿ. ಸಿದ್ಧಿ ಮಂಚಿಕೇರಿಯವರು ಸಂಯೋಜನೆ ಮಾಡಿರುತ್ತಾರೆ. ರಂಗಸಜ್ಜಿಕೆ ಮತ್ತು ಪರಿಕರ ಮಧುಸೂದನ್, ವಸ್ತ್ರವಿನ್ಯಾಸ ರಾಜಣ್ಣ ಗಡಿಕಟ್ಟೆ ಮತ್ತು ಬೆಳಕು ಚಂದನ್ ಎನ್. ಇವರು ನಿರ್ವಹಿಸಿರುತ್ತಾರೆ.

    ಕನ್ನಡ ಮತ್ತು ಕೊಂಕಣಿ ಮಿಶ್ರಿತ ‘ಮಾರ್ನಮಿ’ ಎಂಬ ನಾಟಕ ಶ್ರೀಕಾಂತ್ ಕುಮಟಾ ಇವರ ನಿರ್ದೇಶನದಲ್ಲಿ ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಯಶಸ್ವಿಯಾಗಿ 4 ಪ್ರದರ್ಶನಗಳನ್ನು ಕಂಡು ಪ್ರೇಕ್ಷಕರ ಮನಗೆದ್ದ ನಾಟಕವಾಗಿದೆ. ಈ ನಾಟಕವನ್ನು ಶ್ರೀಕಾಂತ್ ಕುಮಟಾ ಇವರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಿಗಳ ಬುದುಕಿನ ಕತೆ, ವ್ಯಥೆಯನ್ನು ಡಾ. ಗೀತಾ ಪಿ. ಸಿದ್ಧಿ ಇವರಿಂದ ಕೇಳಿದ ಕತೆಯಿಂದ ನಾಟಕ ರಚನೆ ಮಾಡಿ ಮಾಡಿರುತ್ತಾರೆ. ಈ ನಾಟಕ ಪೋರ್ಚುಗೀಸ್‌ರು 1510ರಲ್ಲಿ ಆಫ್ರಿಕಾದ ಕರಿಯ ಜನರನ್ನು ಗುಲಾಮರನ್ನಾಗಿ ಗೋವಾದಲ್ಲಿ ಮಾರುವುದರಿಂದ ಪ್ರಾರಂಭವಾಗಿ ಆ ಗುಲಾಮರಲ್ಲಿ ಕೆಲವರು ಗೋವಾದ ದೊರೆಗಳಿಂದ ತಪ್ಪಿಸಿಕೊಂಡು ಕಾಡು ಸೇರಿ ಸಿದ್ಧಿಗಳಾಗಿ ಬದುಕು ಕಟ್ಟಿಕೊಂಡ ಸಿದ್ಧಿಗಳ ಜೀವನದ ಬವಣೆಯನ್ನು ಮತ್ತು ಸ್ವಾತಂತ್ರ್ಯ ನಂತರದಲ್ಲಿ ನಮ್ಮ ಮಣ್ಣಿನ ಜನರಿಂದ ಸಿದ್ಧಿಗಳು ಅನುಭವಿಸಿದ ದೌರ್ಜನ್ಯವನ್ನು ಶ್ರೀಕಾಂತ್ ಕುಮಟಾ ಇವರು ತಮ್ಮ ನಾಟಕದಲ್ಲಿ ಮನ ಕಲಕುವಂತೆ, ಮನ ಕರಗುವಂತೆ, ಸಿದ್ಧಿ ಜನಾಂಗದ ಹಾಡು, ನೃತ್ಯ, ಅವರ ಆಚರಣೆ ಹಾಗೂ ನಂಬಿಕೆಗಳನ್ನು ಇಟ್ಟುಕೊಂಡು ನಾಟಕವನ್ನು ಕಟ್ಟಿರುತ್ತಾರೆ. ಸಿದ್ಧಿ ಜನಾಂಗದಲ್ಲಿ ಒಂದು ವಿಶೇಷ ಅಂದರೆ ಸಿದ್ಧಿಗಳಲ್ಲಿ ಹಿಂದೂ ಸಿದ್ದಿಗಳು, ಮುಸ್ಲೀಂ ಸಿದ್ಧಿಗಳು, ಕ್ರಿಶ್ಚಿಯನ್ ಸಿದ್ಧಿಗಳು ಇದ್ದಾರೆ ಎನುವುದೇ ವಿಶೇಷ. ಈ ಮೂರು ಧರ್ಮದಲ್ಲಿ ಸಿದ್ಧಿಗಳು ಇದ್ದಾರೆ ಅಂದರೆ ಇದರ ಹಿಂದಿನ ಮರ್ಮವೇನು ಎಂದು ತಿಳಿಯಬೇಕಾದರೆ ನಾಟಕ ಪ್ರದರ್ಶನ ನೋಡಿ ತಿಳಿದುಕೊಳ್ಳಿ.

    Share. Facebook Twitter Pinterest LinkedIn Tumblr WhatsApp Email
    Previous Articleಆಳ್ವಾಸ್‌ನಲ್ಲಿ ಮಹಿಳಾ ದಿನಾಚರಣೆಯ ಪೂರ್ವಭಾವಿ ಸ್ಪರ್ಧೆ
    Next Article ಬೆಂಗಳೂರಿನ ನಯನ ಸಭಾಂಗಣದಲ್ಲಿ ‘ಸಂಗ್ಯಾಬಾಳ್ಯಾ’ ನಾಟಕ ಪ್ರದರ್ಶನ | ಮಾರ್ಚ್ 2
    roovari

    Add Comment Cancel Reply


    Related Posts

    ವಿಶೇಷ ಲೇಖನ – ಜನಪ್ರಿಯ ರಂಗಭೂಮಿ ನಟ ಯಶವಂತ ಸರದೇಶಪಾಂಡೆ

    June 13, 2025

    ಬಿ.ಸಿ. ರೋಡಿನಲ್ಲಿ ‘ತುಳುವೆರೆನ ತುಳುನಾಡ ಸಂತೆ’ ತುಳು ಸಾಹಿತ್ಯ ಸಾಂಸ್ಕೃತಿಕ ರಂಗ | ಜೂನ್ 20, 21 ಮತ್ತು 22

    June 13, 2025

    ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘Beg Borrow ಅಳಿಯ’ ಹಾಸ್ಯ ನಾಟಕ | ಜೂನ್ 14

    June 13, 2025

    ಜನಪದರು ರಂಗಮಂದಿರದಲ್ಲಿ ಯಕ್ಷಗಾನ ಮತ್ತು ನಾಟಕ ಪ್ರದರ್ಶನ | ಜೂನ್ 14 ಮತ್ತು 15

    June 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.