Subscribe to Updates

    Get the latest creative news from FooBar about art, design and business.

    What's Hot

    ರಾಜ್ಯ ಮಟ್ಟದ ಸಂಶೋಧನಾ ಕಮ್ಮಟ ‘ಕನ್ನಡ ನಾಟಕಗಳ ವಿಭಿನ್ನ ನೆಲೆಗಳು’ | ಮೇ 27

    May 23, 2025

    ಪುತ್ತೂರಿನ ‘ಬಹುವಚನಂ’ ಸಭಾಂಗಣದಲ್ಲಿ ಅದ್ಭುತವಾಗಿ ಸಂಪನ್ನಗೊಂಡ ಸಂಗೀತ ಕಛೇರಿ

    May 23, 2025

    ಮಂಡ್ಯದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕ | ಮೇ 24

    May 23, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕುಡ್ಲ ತುಳು ಕೂಟ ಇದರ ಬಂಗಾರ್ ಪರ್ಬ ಸರಣಿ ಕಾರ್ಯಕ್ರಮದ ಅಂಗವಾಗಿ ‘ಮಾರ್ನೆಮಿದ ಮಿನದನ’
    Cultural

    ಕುಡ್ಲ ತುಳು ಕೂಟ ಇದರ ಬಂಗಾರ್ ಪರ್ಬ ಸರಣಿ ಕಾರ್ಯಕ್ರಮದ ಅಂಗವಾಗಿ ‘ಮಾರ್ನೆಮಿದ ಮಿನದನ’

    October 31, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಕುಡ್ಲ ತುಳು ಕೂಟ (ರಿ) ಇದರ ಬಂಗಾರ್ ಪರ್ಬ ಸರಣಿ ವೈಭವ ಕಾರ್ಯಕ್ರಮದ 8ನೇ ಕಾರ್ಯಕ್ರಮ ‘ಮಾರ್ನೆಮಿದ ಮಿನದನ’ ದಿನಾಂಕ 29-10-2023 ರಂದು ಟೆಲಿಕಾಂ ರಸ್ತೆಯಲ್ಲಿರುವ ಶ್ರೀದೇವಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
    ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕಣ್ಣೂರಿನ ಮಾಜಿ ಮ.ನಾ.ಪ. ಸದಸ್ಯ ಮೋಹನ್ ಪಡೀಲ್ ಇವರು “ತುಳು ಕೂಟ ತುಳುವಿಗಾಗಿ ನಡೆಸುವ ಹೋರಾಟಕ್ಕೆ ತುಳುವರಾದ ನಾವು ಬೆಂಬಲ ನೀಡಬೇಕು. ಅದು ನಮ್ಮ ಕರ್ತವ್ಯವೂ ಹೌದು. ತುಳು ಭಾಷಾ ಬೆಳವಣಿಗೆಗೆ ಶ್ರಮಿಸುವವರು ಇರುವವರಿಂದಲೇ ಇಂದು ಭಾಷೆ – ಭಾಷಿಗರು ಎಲ್ಲೆಡೆ ಇದ್ದಾರೆ. ನಾವೆಲ್ಲಾ ಇವರ ಜೊತೆ ಹೆಜ್ಜೆ ಹಾಕೋಣ” ಎಂದರು.
    ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಡ್ಲ ತುಳು ಕೂಟದ ಅಧ್ಯಕ್ಷ ಮರೋಳಿ ಬಿ.ದಾಮೋದರ ನಿಸರ್ಗ ” ತುಳು ಭಾಷೆಯ ಸೌಂದರ್ಯ ವೃದ್ಧಿಸಲು ಮನೆಯ ಮಾತೆಯರು ಶ್ರಮಿಸಬೇಕು. ಇಂದು ವಿಶ್ವದಲ್ಲೇ ತುಳುವಿಗೆ ಮಾನ್ಯತೆ ಇದೆ. ತುಳುವರು ಎಲ್ಲೆಡೆ ಪಸರಿಸಿಕೊಂಡಿದ್ದಾರೆ. ಆದರೆ ನಾವು ನಮ್ಮ ಮಕ್ಕಳಿಗೆ ಆಂಗ್ಲ ವ್ಯಾಮೋಹವನ್ನೇ ಹಚ್ಚುವ ಜೊತೆಗೆ ನಮ್ಮ ಅನಾದಿ ಭಾಷೆಯಾದ ತುಳುವನ್ನು ನಿರ್ಲಕ್ಷಿಸಬಾರದು. ಮಾತೃ ಸಂಸ್ಕಾರದಿಂದಲೇ ಇದು ಬೆಳೆಯಬೇಕು”.ಎಂದು ಸಮಾಜಕ್ಕೆ ಕರೆ ನೀಡಿದರು.

    ವಿಶೇಷವಾಗಿ ಗೆಲುವಿನ ವಿಜಯದಶಮಿಯ ಬಗ್ಗೆ ಬೀರಿ – ಕೋಟೆಕಾರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಉಪನ್ಯಾಸಕ ಡಾ. ರಾಕೇಶ್ ಕುಮಾರ್ ಹಾಗೂ ಆದಿ ಅಕ್ಷರದ ದಿನ ವಿದ್ಯಾ ದಶಮಿಯ ಬಗ್ಗೆ ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಶೇಷಪ್ಪ ಅಮಿನ್ ಉಪನ್ಯಾಸವಿತ್ತರು.

    ಕಾರ್ಯಕ್ರಮದ ಆರಂಭದಲ್ಲಿ ಅಶೋಕ್. ಬಿ, ಶ್ರೀಮತಿ ಶೋಭಾ ವಿ. ಐತಾಳ್. ಶಿವಪ್ರಸಾದ್ ಪ್ರಭು, ಮಧುಸೂದನ ಅಲೆವೂರಾಯ ಕೂಟದಿಂದ ತುಳುವಿನಲ್ಲೇ ಯಕ್ಷಗಾನ ವೈಭವ ನಡೆಯಿತು. ಸಭಾಕಾರ್ಯಕ್ರಮದ ಬಳಿಕ ಸದಸ್ಯ ದಿನೇಶ್ ಕುಂಪಲ ಇವರ ನೇತೃತ್ವದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ, ಮಾರ್ನೆಮಿಯ ಬಗೆ ಬಗೆಯ ವೇಷಗಳು, ಶಾರ್ದೂಲ, ‘ಹುಲಿ ಕುಣಿತ ಮತ್ತು ಕಂಗೀಲು ನೃತ್ಯಗಳ ಪ್ರದರ್ಶನ ನಡೆಯಿತು. ತುಳುಕೂಟದ ಗೋಪಾಲ ಕೃಷ್ಣ ಪಿ, ರಮೇಶ್ ಕುಲಾಲ್, ವಿಶ್ವನಾಥ್ ಸಹಕರಿಸಿದರು.

    ಶ್ರೀ ದೇವಿ ದೇವಸ್ಥಾನದ ಅಧ್ಯಕ್ಷ ಹಾಗೂ ಧಾರ್ಮಿಕ ಮುಂದಾಳು ಮಯೂರ್ ಉಳ್ಳಾಲ್ ಶುಭ ಹಾರೈಸಿದರು. ಆನಂದ ಕೆ. ಸರಿಪಳ್ಳ, ಕೂಟದ ಖಚಾಂಚಿ ಸಿವಿಲ್ ಕಂಟ್ರಾಕ್ಟರ್ ಚಂದ್ರಶೇಖರ್ ಸುವರ್ಣ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಸ್ವಾಗತಿಸಿ, ಸುವರ್ಣರು ಧನ್ಯವಾದವಿತ್ತರು. ಶ್ರೀಮತಿ ಹೇಮಾ ನಿಸರ್ಗ ನಿರ್ವಹಿಸಿದ್ದರು..

    Share. Facebook Twitter Pinterest LinkedIn Tumblr WhatsApp Email
    Previous Articleದೀಪಾವಳಿ ಪ್ರಯುಕ್ತ ವಿವಿಧ ಸ್ಪರ್ಧೆಗಳು | ಕೊನೆಯ ದಿನಾಂಕ ನವೆಂಬರ್ 10
    Next Article ಕಾಸರಗೋಡಿನ ಪದ್ಮಗಿರಿ ಕಲಾಕುಟೀರದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ‘ಶರದ್ವಿಲಾಸ’
    roovari

    Add Comment Cancel Reply


    Related Posts

    ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಿರಿಯ ಚೇತನ ಪ್ರೊ. ಹೇರಂಜೆ ಕೃಷ್ಣ ಭಟ್ಟರ ನುಡಿ ನಮನ

    May 21, 2025

    ಯಕ್ಷಧ್ರುವ ಪಟ್ಲ ಫೌಂಡೇಶನ್ ಯೂರೋಪ್ ಘಟಕದಿಂದ ‘ಭಾರತ್ ಕಲಾ ವೈಭವ’ ಸಾಂಸ್ಕೃತಿಕ ಉತ್ಸವ

    May 14, 2025

    ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಸಿರಿಪರ್ಬ- 2025’ ತುಳು ಸಾಂಸ್ಕೃತಿಕ ಉತ್ಸವ

    May 10, 2025

    ಮಣಿಪಾಲದಲ್ಲಿ ‘ಕಲಾಮಯಂ’ ಸಾಂಸ್ಕೃತಿಕ ಸಂಘಟನೆ ಉದ್ಘಾಟನೆ

    May 6, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.