ಬೆಂಗಳೂರು : ಒಡನಾಡಿ ಬಂಧು ಸಿಜಿಕೆ 75ರ ಮಾಸದ ನೆನಪು ಕಾರ್ಯಕ್ರಮದಲ್ಲಿ ದೃಶ್ಯಕಾವ್ಯ ತಂಡವು ಕೆ.ವೈ. ನಾರಾಯಣ ಸ್ವಾಮಿಯವರ ರಚನೆಯ ‘ಮಾಯಾ ಬೇಟೆ’ ನಾಟಕ ಪ್ರದರ್ಶನವನ್ನು ದಿನಾಂಕ 20 ಡಿಸೆಂಬರ್ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರು ಬನಶಂಕರಿ ಸುಚಿತ್ರ ಸಿನೆಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯ ನಾಣಿ ಅಂಗಳದಲ್ಲಿ ಪ್ರಯೋಗಿಸುತ್ತಿದೆ. ಪ್ರಸನ್ನ ಕುಮಾರ ಇವರ ಸಂಗೀತ, ಜಯರಾಜ ಇವರ ಪ್ರಸಾದನ, ಮಂಜು ನಾರಾಯಣ್ ಇವರ ಬೆಳಕಿನ ವಿನ್ಯಾಸ ಮತ್ತು ನಂಜುಂಡೇಗೌಡ ಸಿ. ಇವರ ನಿರ್ದೇಶನದಲ್ಲಿ ಈ ನಾಟಕ ಪ್ರಸ್ತುತಗೊಳ್ಳಲಿದೆ.

