Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮೇಘ ರಂಜನಾ ಚಂದ್ರಗಿರಿಯಲ್ಲಿ ‘ನೃತ್ಯ ವೈವಿಧ್ಯ’ ಹಾಗೂ ‘ಮೇಘ ಮಲ್ಹಾರ್’
    Dance

    ಮೇಘ ರಂಜನಾ ಚಂದ್ರಗಿರಿಯಲ್ಲಿ ‘ನೃತ್ಯ ವೈವಿಧ್ಯ’ ಹಾಗೂ ‘ಮೇಘ ಮಲ್ಹಾರ್’

    July 18, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಮೇಘ ರಂಜನಾ ಚಂದ್ರಗಿರಿ, ಸಾಹಿತ್ಯಿಕ – ಸಾಂಸ್ಕೃತಿಕ ಸಂಸ್ಥೆಯ ಐದನೇ ವರ್ಷದ ಸಂಭ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಕೂಡ್ಲು ಶೇಷವನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಯೂರ ಮಂಟಪದಲ್ಲಿ ದಿನಾಂಕ : 16-07-2023ರಂದು ‘ಭಜಿಸು ಕನ್ನಡ’ ಕಾರ್ಯಕ್ರಮ ನಡೆಯಿತು.

    ರಂಗ ನಿರ್ದೇಶಕ ಮತ್ತು ನಟರಾದ ಕಾಸರಗೋಡು ಚಿನ್ನಾ ದೀಪ ಬೆಳಗಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ಕಾಸರಗೋಡಿನ ಕನ್ನಡಿಗರು ಆಲಸಿ ಮನೋಭಾವ ಹೊಂದಿದರೆ ಇಂದಲ್ಲ ನಾಳೆ, ನಾವು ಅನ್ಯ ಭಾಷಿಗರ ಗುಲಾಮರಾಗಿ ಬಾಳಬೇಕಾದೀತು. ನಾವು ಕನ್ನಡಿಗರು ಎಂಬ ಸ್ವಾಭಿಮಾನವನ್ನು ಇಟ್ಟುಕೊಳ್ಳದೇ ಹೋದರೆ ಮುಂದಿನ ತಲೆಮಾರಿಗೆ ಕಷ್ಟ ಕಟ್ಟಿಟ್ಟ ಬುತ್ತಿ. ನಮ್ಮ ಹಕ್ಕನ್ನು ನಾವು ಕೇಳದೆ ಹೋದರೆ ಹೇಗೆ ? ಕನ್ನಡ ಶಾಲೆಗಳಿಗೆ ನಮ್ಮ ಮಕ್ಕಳನ್ನು ಕಳಿಸಿದರೆ ಮಾತ್ರ ಕನ್ನಡ ಭಾಷೆ ಉಳಿದೀತು. ನಮ್ಮ ಸಂಸ್ಕೃತಿ, ಪರಂಪರೆಯನ್ನು ನಮ್ಮ ಮಕ್ಕಳಿಗೆ ಹೇಳಿಕೊಡುವ ಕೆಲಸ ಪ್ರಾಮಾಣಿಕವಾಗಿ ಹಿರಿಯರು ಮಾಡಬೇಕು ಹಾಗೂ ಇದು ನಮ್ಮ ಕರ್ತವ್ಯವಾಗಬೇಕು” ಎಂದು ಹೇಳಿದರು.

    ಶ್ರೀ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ವೇಣುಗೋಪಾಲ, ಕವಯತ್ರಿ ಶ್ರೀಮತಿ ದಿವ್ಯಾ ಗಟ್ಟಿ ಪರಕ್ಕಿಲ ಮುಂತಾದವರು ಶುಭಾಶಂಸನೆಗೈದರು. ಕೀರ್ತನೆಕಾರರಾದ ಶ್ರೀ ನರಸಿಂಹ ಹೊಸಮನೆ, ರಂಗ ನಟ, ನಿರ್ದೇಶಕ ಶ್ರೀ ಉದಯ ಕುಮಾರ್ ಮನ್ನಿಪ್ಪಾಡಿ ಇವರನ್ನು ಸಂಸ್ಥೆಯ ಪರವಾಗಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಶ್ರೀ ಉದಯ ಕುಮಾರ್ ಮಾತನಾಡಿದರು. ಕೂಡ್ಲು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರರೂ, ಗಾಯಕರೂ, ಕ್ರೀಡಾಪಟುವೂ ಆಗಿರುವ ಶ್ರೀ ಕೆ.ಜಿ. ಶ್ಯಾನುಭೋಗ್ ಅಧ್ಯಕ್ಷತೆ ವಹಿಸಿ ಗ್ರಾಮೀಣ ಭಾಗದಲ್ಲಿ ಕನ್ನಡ ಭಾಷೆ ಜೀವಂತವಿದ್ದು ಅದನ್ನು ಉಳಿಸಿಬೇಕಲ್ಲದೆ, ಕನ್ನಡ ಮಾಧ್ಯಮದ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಮನವಿ ಮಾಡಿದರು.

    ಮೇಘ ರಂಜನಾ ಸಂಸ್ಥೆಯ ನಿರ್ದೇಶಕಿ ಕು. ಮೇಘನಾ ಪ್ರಾರ್ಥನೆ ಹಾಡಿದರು. ಆಡಳಿತ ನಿರ್ದೇಶಕ ಶ್ರೀ ಪುರುಷೋತ್ತಮ ಕೊಪ್ಪಲ್ ಸ್ವಾಗತಿಸಿದರು. ಸಂಘಟಕ, ಅಧ್ಯಾಪಕ ಶ್ರೀ ಕಿರಣ್ ಪ್ರಸಾದ್ ಕೂಡ್ಲು ಕಾರ್ಯಕ್ರಮ ನಿರ್ವಹಿಸಿದರು.

    ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಗಾಯಕ ಶ್ರೀ ರವೀಂದ್ರ ಪ್ರಭು, ಶ್ರೀ ಕಿಶೋರ ಪೆರ್ಲ ಬಳಗದವದಿಂದ ‘ಮೇಘ ಮಲ್ಹಾರ್’ ಭಕ್ತಿ, ಭಾವ ಹಾಗೂ ಜನಪದ ಗೀತೆಗಳ ಸಂಗೀತ ಕಾರ್ಯಕ್ರಮ ಸೇರಿದ ಜನಸ್ತೋಮವನ್ನು ರಂಜಿಸಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆಲ್ಲ ಮೇಘ ರಂಜನಾ ತಂಡದ ಪರವಾಗಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕು.ಮೇಘನ ವಂದಿಸಿದರು.ಮೇಘರಂಜನಾ ನಿರ್ದೇಶಕಿ ಶ್ರೀಮತಿ ರೂಪಕಲಾ.ಕೆ , ನಿರ್ದೇಶಕರಾದ ರಂಜನ್ ಕೆ, ಕ್ಷೇತ್ರದ ಅನುವಂಶಿಕ ಮೊಕ್ತೇಸರರಾದ ಶ್ರೀ ಸದಾಶಿವ ಅವರು ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಹರಿದಾಸರ ಕೃತಿ ಕೀರ್ತನೆಗಳ ಗಾಯನ ‘ದಾಸ ಸೌರಭ’
    Next Article ‘ಯಕ್ಷಾರಾಧನಾ’ ವರ್ಷಾಚರಣೆ ಸಂಭ್ರಮದಲ್ಲಿ ‘ಮಹಾಕಲಿ ಮಗಧೇಂದ್ರ’ ಯಕ್ಷಗಾನ ಪ್ರದರ್ಶನ
    roovari

    Add Comment Cancel Reply


    Related Posts

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    ಕೊಡಗು ಕಲಾವಿದರ ಸಂಘದಿಂದ ಹಿರಿಯ ಕಲಾವಿದ ಚೆಕ್ಕೆರ ತ್ಯಾಗರಾಜರಿಗೆ ಸನ್ಮಾನ

    May 24, 2025

    ಪುತ್ತೂರಿನ ‘ಬಹುವಚನಂ’ ಸಭಾಂಗಣದಲ್ಲಿ ಅದ್ಭುತವಾಗಿ ಸಂಪನ್ನಗೊಂಡ ಸಂಗೀತ ಕಛೇರಿ

    May 23, 2025

    ಮಂಗಳೂರಿನ ರಾಮಕೃಷ್ಣ ಮಠದಲ್ಲಿ ‘ಯುವ ಸಂಗೀತೋತ್ಸವ 2025’ | ಮೇ 25

    May 23, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.