Subscribe to Updates

    Get the latest creative news from FooBar about art, design and business.

    What's Hot

    ಪುಸ್ತಕ ವಿಮರ್ಶೆ | ಕೆ. ಸತ್ಯನಾರಾಯಣ ಇವರ ‘ನೆದರ್ ಲ್ಯಾಂಡ್ಸ್ ಬಾಣಂತನ’

    October 28, 2025

    ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರಬಂಧ, ಕಥಾ ಸ್ಪರ್ಧೆಗಳಿಗೆ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 02

    October 28, 2025

    ರಾಷ್ಟ್ರೋತ್ಥಾನ ಸಾಹಿತ್ಯದ ‘ಕನ್ನಡ ಪುಸ್ತಕ ಹಬ್ಬ’ ಸಾಹಿತ್ಯ-ಸಂಸ್ಕೃತಿ ಉತ್ಸವ | ನವೆಂಬರ್ 01ರಿಂದ ಡಿಸೆಂಬರ್ 07

    October 28, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಯ ಪ್ರತಿಷ್ಠಾನದ ಸದಸ್ಯ ಸಮಾವೇಶ
    Yakshagana

    ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಯ ಪ್ರತಿಷ್ಠಾನದ ಸದಸ್ಯ ಸಮಾವೇಶ

    October 28, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಯ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ದಿನಾಂಕ 26 ಅಕ್ಟೋಬರ್ 2025ರಂದು ಸದಸ್ಯ ಸಮಾವೇಶ ಜರಗಿತು.

    ಈ ಸಮಾವೇಶದ ಉದ್ಘಾಟನೆ ಆಶೀರ್ಚವನವನ್ನು ನೆರವೇರಿಸಿದ ಒಡಿಯೂರು ಶ್ರೀಗಳು “ಇದು ಸಿರಿಬಾಗಿಲು ಮಾತ್ರವಲ್ಲ ಧರ್ಮ ಸಂಸ್ಕೃತಿಗೆ ಹೆಬ್ಬಾಗಿಲು. ಆರಾಧನಾ ಕಲೆಯಾದ ಯಕ್ಷಗಾನವನ್ನು ಇಂದು ವಿದ್ವಾಂಸರುಗಳು ಸೇರಿ ಅದರ ಸಿರಿವಂತಿಕೆಯನ್ನು ಹೆಚ್ಚಿಸಿದ್ದಾರೆ. ನವರಸ ಕಲೆ ಎಂದೇ ಹೇಳಬಲ್ಲ ಯಕ್ಷಗಾನದಲ್ಲಿ ಭಾವ -ಭಾಷಾಶುದ್ದಿಗೆ ಆದ್ಯತೆ ಹಾಗೂ ಸಮಾಜಕ್ಕೆ ಪುರಾಣ ಕಥೆಗಳ ಪರಿಚಯವು ಉಂಟಾಗುತ್ತದೆ. ಪ್ರತಿಯೊಬ್ಬರ ಬದುಕಿಗೆ ಪ್ರತಿ ಪ್ರಸಂಗದಲ್ಲಿ ಬರುವ ಸಂದೇಶಗಳು ಮಾರ್ಗದರ್ಶನವಾಗುತ್ತದೆ. ಒಬ್ಬ ವ್ಯಕ್ತಿಯ ನಿಸ್ವಾರ್ಥ ಸೇವೆಗೆ ದಾನಿಗಳ ಸಹಕಾರ ಸಿಗುತ್ತದೆ ಎಂಬುದಕ್ಕೆ ಪ್ರತಿಷ್ಠಾನ ಮುಖೇನ ಸಿರಿಬಾಗಿಲು ಮಯ್ಯರು ಅವರು ನಡೆಸುವ ಯಶಸ್ವಿ ಚಟುವಟಿಕೆ ಉದಾಹರಣೆ. ಯಕ್ಷಗಾನ ಕಲೆ ಅದರ ಶ್ರೇಷ್ಠತೆ ಅದನ್ನು ಉಳಿಸುವಲ್ಲಿ ಮಯ್ಯರು ಹಾಗೂ ಮನೆಯವರ, ಸದಸ್ಯರ ಶತ ಪ್ರಯತ್ನ ಮೆಚ್ಚುವಂತದ್ದು” ಎಂದರು.

    ಅಧ್ಯಕ್ಷತೆ ವಹಿಸಿದ ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣ ಮಯ್ಯರವರು ಪ್ರತಿಷ್ಠಾನದ ಇದುವರೆಗಿನ ಚಟುವಟಿಕೆ, ಮುಂದಿನ ಹಲವು ಯೋಜನೆಗಳನ್ನು ವಿವರಿಸಿದರು. ಮುಖ್ಯ ಅತಿಥಿಯಾಗಿ ಶ್ರೀ ರಾಧಾಕೃಷ್ಣ ಕೆ. ಉಳಿಯತಡ್ಕ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಶ್ರೀ ಸತೀಶ ಅಡಪ ಸಂಕಬೈಲು, ಮಾಜಿ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಶ್ರೀ ಯೋಗೀಶ ರಾವ್ ಚಿಗುರುಪಾದೆ, ಪುತ್ತೂರು ಶ್ರೀ ಮಹಾದೇವ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ಶೀನಶೆಟ್ಟಿ ಕಜೆ ಶುಭ ಹಾರೈಸಿದರು.

    ಶ್ರೀ ರಾಜಾರಾಮ ರಾವ್ ಮೀಯಪದವು ಇವರು ಅತಿಥಿಗಳನ್ನು ಸ್ವಾಗತಿಸಿದರೆ ,ಶ್ರೀ ಪ್ರಶಾಂತ ಹೊಳ್ಳ ನೀರಾಳ ನಿರೂಪಿಸಿದರು. ಪ್ರತಿಷ್ಠಾನದ ಪೋಷಕರಾದ ಶ್ರೀ ಯಚ್. ಕೃಷ್ಣ ಭಟ್ ಮಂಗಳೂರು, ಸದಸ್ಯರುಗಳಾದ ಶ್ರೀ ಯಂ.ಯಲ್. ಭಟ್ ಸಾಗರ, ಶ್ರೀ ಸದಾಶಿವ ಭಟ್ ಎದ್ರುಕಳ ಉಪಸ್ಥಿತರಿದ್ದರು. ಶ್ರೀ ಪ್ರಸನ್ನ ಕೃಷ್ಣ ಕಾರಂತ ದೇಶಮಂಗಲ ಇವರು ಧನ್ಯವಾದವಿತ್ತರು. ಇದಕ್ಕೂ ಮುಂಚೆ ಶ್ರೀ ಜಯರಾಮ ದೇವಸ್ಯ ಮತ್ತು ಬಳಗದವರಿಂದ ‘ಶರ ಸೇತುಬಂಧನ’ ಯಕ್ಷಗಾನ ತಾಳಮದ್ದಳೆ ಜರಗಿತು. ಸಂಜೆ ಸಾಕೇತ ಕಲಾವಿದರು ಹೆಗ್ಗೋಡು ಸಾಗರ ಇವರಿಂದ ಬಡಗುತಿಟ್ಟಿನ ‘ಗದಾಯುದ್ಧ’ ಯಕ್ಷಗಾನ ಪ್ರದರ್ಶನ ನಡೆಯಿತು.

    baikady roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಮೈಸೂರು ಕಿರು ರಂಗಮಂದಿರದಲ್ಲಿ ‘ಸಮುದಾಯ ಮೈಸೂರು ರಂಗೋತ್ಸವ’ | ಅಕ್ಟೋಬರ್ 31, ನವೆಂಬರ್ 1 ಮತ್ತು 2
    Next Article ಮಂಗಳೂರಿನಲ್ಲಿ ‘ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ಕೆ. ಸತ್ಯನಾರಾಯಣ ಇವರ ‘ನೆದರ್ ಲ್ಯಾಂಡ್ಸ್ ಬಾಣಂತನ’

    October 28, 2025

    ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರಬಂಧ, ಕಥಾ ಸ್ಪರ್ಧೆಗಳಿಗೆ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 02

    October 28, 2025

    ರಾಷ್ಟ್ರೋತ್ಥಾನ ಸಾಹಿತ್ಯದ ‘ಕನ್ನಡ ಪುಸ್ತಕ ಹಬ್ಬ’ ಸಾಹಿತ್ಯ-ಸಂಸ್ಕೃತಿ ಉತ್ಸವ | ನವೆಂಬರ್ 01ರಿಂದ ಡಿಸೆಂಬರ್ 07

    October 28, 2025

    ಮಂಗಳೂರಿನಲ್ಲಿ ‘ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ

    October 28, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.