Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಾರ್ವಿ ನಾರಣಪ್ಪ ಉಪ್ಪೂರರ ಸಂಸ್ಕರಣೆ, ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ಬಯಲಾಟ | ದಶಂಬರ್ 2ರಂದು
    Awards

    ಮಾರ್ವಿ ನಾರಣಪ್ಪ ಉಪ್ಪೂರರ ಸಂಸ್ಕರಣೆ, ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ಬಯಲಾಟ | ದಶಂಬರ್ 2ರಂದು

    November 17, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಪ್ಪೂರು : ಮಯ್ಯ ಯಕ್ಷ ಬಳಗ ಹಾಲಾಡಿ ಕುಂದಾಪುರ, ಕರ್ನಾಟಕ ಯಕ್ಷಧಾಮ ಮಂಗಳೂರು ಹಾಗೂ ಕಲ್ಕೂರ ಪ್ರತಿಷ್ಠಾನ ಇದರ ಸಂಯೋಜನೆಯಲ್ಲಿ ಪ್ರಾಚಾರ್ಯ ಮಾರ್ವಿ ನಾರಣಪ್ಪ ಉಪ್ಪೂರರ ಸಂಸ್ಕರಣೆ, ಯಜಮಾನ ‘ಪಿ ಶ್ರೀಧರ ಹಂದೆಯವರ ನೆನಪು’ ಶಿಷ್ಯ ಭಾಗವತ ‘ಜಿ. ರಾಘವೇಂದ್ರ ಮಯ್ಯರ ಕನಸು’ ಯಕ್ಷಗಾನ ಸಭಾವಂದನ, ಸಂಸ್ಮರಣೆ ಸಮ್ಮಾನ ಹಾಗೂ ಯಕ್ಷಗಾನ ಬಯಲಾಟ ಕಾರ್ಯಕ್ರಮವು ದಿನಾಂಕ 02-12-2023 ರಂದು ಮದ್ಯಾಹ್ನ ಘಂಟೆ 3.00 ರಿಂದ. ಮುದೂರಿ (ಮಯ್ಯರ ಮನೆ) ಶಾಲೆಯ ನಾರಣಪ್ಪ ಉಪ್ಪರರ ವೇದಿಕೆಯಲ್ಲಿ ನಡೆಯಲಿರುವುದು.

    ಕಾರ್ಯಕ್ರಮದಲ್ಲಿ ಗೌರವ ಅಭ್ಯಾಗತರಾಗಿ ಶ್ರೀ ಕಿರಣ್ ಕುಮಾರ್ ಕೊಡ್ಲಿ, ಶ್ರೀ ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ, ಶ್ರೀ ಪ್ರದೀಪ ಕುಮಾ‌ರ್ ಕಲ್ಕೂರ, ಶ್ರೀ ಬಾಲಕೃಷ್ಣ ಶೆಟ್ಟಿ ಹಿಲಿಯಾಣ, ಶ್ರೀ ಕೃಷ್ಣಮೂರ್ತಿ ಉಪ್ಪೂರ, ಶ್ರೀ ಪಿ. ವೆಂಕಟೇಶ್ ಹಂದೆ, ಶ್ರೀ ಅಶೋಕ ಶೆಟ್ಟಿ ಚೋರಾಡಿ, ಶ್ರೀ ಸಂಜೀವ ನಾಯ್ಕ, ಶ್ರೀ ಆನಂದ ಕುಂದರ್, ಡಾ. ನಾಗೇಶ್‌ ಕುಂದಾಪುರ, ಶ್ರೀ ಜನಾರ್ದನ ಹಂದೆ, ಶ್ರೀ ಪ್ರಕಾಶ ಶೆಟ್ಟಿ ಗೈನಾಡಿ, ಶ್ರೀ ರಾಜಶೇಖರ ಹೆಬ್ಬಾರ್, ಶ್ರೀ ಹೆಚ್. ಸುಜಯೀಂದ್ರ ಹಂದೆ, ಶ್ರೀ ನಾಗರಾಜ್ ಗೋಳಿ ಹಾಗೂ ಶ್ರೀ ಗಣೇಶ್ ಎಂ. ಭಾಗವಹಿಸಲಿದ್ದಾರೆ.
    ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣಗೋಳಿ ಕಾಸಾಡಿಇವರಿಗೆ, ಭಾಗವತ ಮಾರ್ವಿ ನಾರಣಪ್ಪ ಉಪ್ಪೂರರ ಪ್ರಶಸ್ತಿ, ಶ್ರೀ ಮೊಳಹಳ್ಳಿ ಕೃಷ್ಣ ಇವರಿಗೆ ಯಜಮಾನ ಶ್ರೀಧರ ಹಂದೆ ಯವರ ಪ್ರಶಸ್ತಿ ಹಾಗೂ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಆರ್ಗೋಡು ಮೋಹನದಾಸ ಶೆಣೈ ಇವರಿಗೆ ಮಯ್ಯ ಯಕ್ಷೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
    ಸಭಾಕರ್ಯಕ್ರಮ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ “ಶ್ರೀ ಕೃಷ್ಣ ವಿಲಾಸ” ಯಕ್ಷಗಾನ ಬಯಲಾಟ ನಡೆಯಲಿರುವುದು. ಹಿಮ್ಮೇಳದಲ್ಲಿ ಭಾಗವತರಾಗಿ ಸರ್ವಶ್ರೀಗಳಾದ ಜಿ. ರಾಘವೇಂದ್ರ ಮಯ್ಯ ಹಾಲಾಡಿ ಹಾಗೂ ಲಂಬೋದರ ಹೆಗಡೆ, ಮದ್ದಳೆಯಲ್ಲಿ ರಾಘವೇಂದ್ರ ಹೆಗಡೆ ಹಾಗೂ ಚಂಡೆಯಲ್ಲಿ ಸುಜನ್ ಹಾಲಾಡಿ ಭಾಗವಹಿಸಲಿದ್ದು, ಮುಮ್ಮೇಳದಲ್ಲಿ ಅಜ್ಜಿಯಾಗಿ ರಮೇಶ್ ಭಂಡಾರಿ ಮೂರೂರು, ಚಂದಗೋಪನಾಗಿ ಕೋಡಿ ವಿಶ್ವನಾಥ ಗಾಣಿಗ, ಶ್ರೀ ಕೃಷ್ಣನಾಗಿ ಚಂದ್ರಹಾಸ ಗೌಡ ಹೊಸಪಟ್ಟ, ಚಂದ್ರಾವಳಿಯಾಗಿ ಶಶಿಕಾಂತ ಶೆಟ್ಟಿ ಕಾರ್ಕಳ, ರಾಧೆಯಾಗಿ ಮಾಧವ ನಾಗೂರು ಹಾಗೂ ಲಂಡಿಪುಸ್ಕಿಯಾಗಿ ನಾರಾಯಣ ಉಳ್ಳೂರ ಭಾಗವಹಿಸಲಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಅಮ್ಮುಂಜೆ ಅನುದಾನಿತ ಹಿ.ಪ್ರಾ ಶಾಲೆಯಲ್ಲಿ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ‘ಸವಿನೆನಪು’
    Next Article ಹೊಸಕೋಟೆಯಲ್ಲಿ ಪ್ರೇಕ್ಷಕರ ಗಮನ ಸೆಳೆದ ನಿನಾಸಂ ನಾಟಕಗಳು
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಮಾಣಿಕ್ಯ ಪ್ರಕಾಶನದ 2025ನೇ ಸಾಲಿನ ರಾಜ್ಯಮಟ್ಟದ ವಿವಿಧ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ

    May 10, 2025

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.