Subscribe to Updates

    Get the latest creative news from FooBar about art, design and business.

    What's Hot

    ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ಪ್ರೇಕ್ಷಕರನ್ನು ರಂಜಿಸಿದ ‘ಶ್ರೀ ಕೃಷ್ಣ ಸಂಧಾನ’ ನಾಟಕ

    May 20, 2025

    ಸಹೋದಯ ಸಭಾಂಗಣದಲ್ಲಿ ಹಂಝ ಮಲಾರ್‌ರ ಬ್ಯಾರಿ ಪುಸ್ತಕಗಳು ಲೋಕಾರ್ಪಣೆ

    May 20, 2025

    ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ದತ್ತಿ ಉಪನ್ಯಾಸ ಮತ್ತು ದತ್ತಿ ಪುರಸ್ಕಾರ ಪ್ರದಾನ | ಮೇ 21

    May 20, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮುದ್ದಣ 155ನೇ ಜನ್ಮದಿನ ಸಂಭ್ರಮ
    Book Release

    ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮುದ್ದಣ 155ನೇ ಜನ್ಮದಿನ ಸಂಭ್ರಮ

    January 25, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಎಂ.ಜಿ.ಎಂ. ಕಾಲೇಜು ಹಾಗೂ ನಂದಳಿಕೆಯ ಮುದ್ದಣ ಪ್ರಕಾಶನದ ಸಹಯೋಗದಲ್ಲಿ ಮುದ್ದಣ 155ನೆಯ ಜನ್ಮದಿನಾಚರಣೆಯ ಪ್ರಯುಕ್ತ ತೆಕ್ಕುಂಜ ಗೋಪಾಲಕೃಷ್ಣ ಭಟ್ಟರ ಮುದ್ದಣ ಕವಿ ರಚಿತಂ ‘ಶ್ರೀರಾಮಾಶ್ವಮೇಧಂ’ ಹಾಗೂ ‘ನಂದಳಿಕೆ ಐಸಿರಿ ದರ್ಶನ’ ಕೃತಿಗಳ ಅನಾವರಣ ಕಾರ್ಯಕ್ರಮವು ದಿನಾಂಕ 24 ಜನವರಿ 2025ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿರುವ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು.

    ಈ ಕಾರ್ಯಕ್ರಮದಲ್ಲಿ ಕೃತಿಗಳನ್ನು ಅನಾವರಣಗೊಳಿಸಿ ಮಾತನಾಡಿದ ಡಾ. ಬಿ.ಎ. ವಿವೇಕ ರೈ “ನಂದಳಿಕೆಯ ಕವಿ ಮುದ್ದಣ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಎಂದೂ ಮರೆಯಲಾಗದ ಕವಿ. ಬದುಕಿದ ಕಾಲ ಕಡಿಮೆಯಾದರೂ ಕನ್ನಡ ಸಾರಸ್ವತ ಲೋಕಕ್ಕೆ ಅವರ ಕೊಡುಗೆ ಅಪಾರ. ಕನ್ನಡ ಸಾಹಿತ್ಯಕ್ಕೆ ಹೊಸ ಮನ್ವಂತರವನ್ನೇ ಸೃಷ್ಟಿಸಿದ ಕವಿ ಮುದ್ದಣ. ಭಾಷೆ, ಸಾಹಿತ್ಯ ರಚನೆ, ಹೊಸ ಶೈಲಿ ಮುಂತಾದವುಗಳಲ್ಲಿ ಅವರ ಕೊಡುಗೆ ಅಪಾರ. ಭಾಷೆಯ ಸಂವಹನ ಶಕ್ತಿಗೆ, ಸಾಹಿತ್ಯದ ಹೊಸರೂಪಕ್ಕೆ ನಾಂದಿ ಹಾಡಿದವರಾಗಿರುವುದರಿಂದ ಅವರ ಕೊಡುಗೆಯನ್ನು ಕನ್ನಡಿಗರು ಎಂದೂ ಮರೆಯಲಾರರು. ಅದರಲ್ಲೂ ಈ ಭಾಗದವರಿಗೆ ಮುದ್ದಣನ ಬಗ್ಗೆ ಅಪಾರವಾದ ಪ್ರೀತಿ ಮತ್ತು ಗೌರವ. ಮುದ್ದಣನ ಬಗ್ಗೆ ನಂದಳಿಕೆ ಬಾಲಚಂದ್ರ ರಾಯರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಪರಿಶ್ರಮದಿಂದ ‘ಶ್ರೀರಾಮಾಶ್ವಮೇಧಂ’ ಕೃತಿ ಅಮೇರಿಕೆಯಲ್ಲಿ ನಡೆದ ಅಕ್ಕಾ ಸಮ್ಮೇಳನದಲ್ಲಿ ಬಿಡುಗಡೆಗೊಂಡು, ಇದೀಗ ಪರಿಷ್ಕೃತ ಆವೃತ್ತಿ ಇಲ್ಲಿ ಬಿಡುಗಡೆಯಾಗುತ್ತಿರುವುದು ತುಂಬಾ ಸಂತೋಷದ ಸಂಗತಿ. ‘ಶ್ರೀರಾಮಾಶ್ವಮೇಧಂ’ ಮೂರು ಆವೃತ್ತಿಗಳ ಬಿಡುಗಡೆ ಸಮಾರಂಭಗಳಲ್ಲಿ ನಾನು ಉಪಸ್ಥಿತನಾಗಿದ್ದುದು ನನ್ನ ಸೌಭಾಗ್ಯ” ಎಂದು ಹೇಳಿದರು.

    ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು ಮುದ್ದಣನ ಶ್ರೀರಾಮಾಶ್ವಮೇಧಂ ಕೃತಿ ಸಾರ್ವಕಾಲಿಕ ಮೌಲ್ಯ ಇದ್ದು, ಅದು ಎಂದೂ ಕನ್ನಡ ಸಾಹಿತ್ಯದಿಂದ ಮರೆಯಲಾಗದು. ಮುದ್ದಣನಿಗೆ ಆಯಸ್ಸು ಕಡಿಮೆಯಾದರೂ, ಕೃತಿಗಳ ಮೌಲ್ಯ ಎಂದೂ ಕುಸಿಯಲಾರದೆಂದು ಕೃತಿ ಪರಿಚಯ ಮಾಡುತ್ತಾ ವಿಶ್ಲೇಷಣೆ ಮಾಡಿದರು.

    ಹಿರಿಯ ಭಾಷಾಂತರಕಾರ, ಸಾಹಿತ್ಯ ವಿದ್ವಾಂಸರಾದ ಪ್ರೊ. ಎನ್.ಟಿ. ಭಟ್ ಇವರು ಅಧ್ಯಕ್ಷತೆ ವಹಿಸಿದರು. ಎಂ.ಜಿ.ಎಂ. ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮಾ, ನಂದಳಿಕೆಯ ಐಸಿರಿ ಕೃತಿಯ ಸಂಪಾದಕರಾದ ಶ್ರೀ ಕೆ.ಎಲ್. ಕುಂಡಂತಾಯ, ನಂದಳಿಕೆ ಅರಮನೆ ಚಾವಡಿಯ ಸುಹಾಸ್ ಹೆಗ್ಡೆ, ಮೂಲ್ಕಿಯ ಅರಸು ಶ್ರೀ ದುಗ್ಗಣ್ಣ ಸಾವಂತರು, ಶೃಂಗೇರಿ ಮಠ ಕೋಟೆಕಾರಿನ ಧರ್ಮದರ್ಶಿ ಸತ್ಯಾಶಂಕರ್ ಬೊಳ್ಯಾವ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ, ಶ್ರೀಮತಿ ಜಯಲಕ್ಷ್ಮೀ ಬಾಲಚಂದ್ರ ರಾವ್ ಹಾಗೂ ಸೌಜನ್ಯ ನಂದಳಿಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

    ಸಮಾರಂಭದ ಮೊದಲು ನಂದಳಿಕೆ ಶ್ರೀಕಾಂತ ಭಟ್ ನೇತೃತ್ವದಲ್ಲಿ ಮುದ್ದಣನ ಪುತ್ಥಳಿಗೆ ಮಾಲಾರ್ಪಣೆ, ನಂದಳಿಕೆ ಶ್ರೀಕಾಂತ ಭಟ್ಟ ಹಾಗೂ ಕಂಬಳದ ಕೋಣಗಳೊಂದಿಗೆ ಪಲ್ಲಕ್ಕಿಯಲ್ಲಿ ಮುದ್ದಣ ಕೃತಿ ಮೆರವಣಿಗೆ, ನಂತರ ಕೋಣಗಳಿಗೆ ಹಾರಾರ್ಪಣೆ ಮಾಡಿ ಸಂಮಾನಿಸಿ ಶ್ರೀಕಾಂತ ಭಟ್ಟರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ‘ಶ್ರೀರಾಮಾಶ್ವಮೇಧಂ’ ಕೃತಿ ಸಂಪಾದಕರಾದ ಡಾ. ಪಾದೇಕಲ್ಲು ವಿಷ್ಣು ಭಟ್ಟರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ, ಯಕ್ಷಗಾನ ಕೇಂದ್ರದ ಗುರು ಉಮೇಶ್ ಸುವರ್ಣ ಮುದ್ದಣನ ರತ್ನಾವತಿ ಕಲ್ಯಾಣದ ಆಯ್ದ ಭಾಗಗಳನ್ನು ವಾಚಿಸಿದರು. ಆರ್.ಆರ್.ಸಿ.ಯ ಸಹ ಸಂಶೋಧನ ಡಾ. ಅರುಣ್ ಕುಮಾರ್ ಎಸ್.ಆರ್. ಕಾರ್ಯಕ್ರಮ ನಿರ್ವಹಿಸಿದರು.

    Book release Literature
    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ಕಲಾಗ್ರಾಮದಲ್ಲಿ ‘ಸಾಲುಮರಗಳ ತಾಯಿ ತಿಮ್ಮಕ್ಕ’ ನಾಟಕ ಪ್ರದರ್ಶನ | ಜನವರಿ 27
    Next Article ಮಡಿಕೇರಿಯಲ್ಲಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ರಚಿತ ‘ಮುಖಾಮುಖಿ’ ಕೃತಿ ಲೋಕಾರ್ಪಣೆ
    roovari

    Add Comment Cancel Reply


    Related Posts

    ಸಹೋದಯ ಸಭಾಂಗಣದಲ್ಲಿ ಹಂಝ ಮಲಾರ್‌ರ ಬ್ಯಾರಿ ಪುಸ್ತಕಗಳು ಲೋಕಾರ್ಪಣೆ

    May 20, 2025

    ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ದತ್ತಿ ಉಪನ್ಯಾಸ ಮತ್ತು ದತ್ತಿ ಪುರಸ್ಕಾರ ಪ್ರದಾನ | ಮೇ 21

    May 20, 2025

    ಕೊಂಕಣಿ ಲೇಖಕಿಯರ ಸಾಹಿತ್ಯ ಪ್ರಸ್ತುತಿ ‘ಅಸ್ಮಿತಾ’ ವಿಶೇಷ ಕಾರ್ಯಕ್ರಮ

    May 20, 2025

    ಮಂಗಳೂರು ಉರ್ವಸ್ಟೋರಿನಲ್ಲಿ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಉದ್ಘಾಟನೆ | ಮೇ 25

    May 20, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.