Subscribe to Updates

    Get the latest creative news from FooBar about art, design and business.

    What's Hot

    ಶಾರದಾ ವಿದ್ಯಾಲಯದಲ್ಲಿ 111ನೇ ಸಾಹಿತ್ಯ ಅಭಿರುಚಿ ಕಾರ್ಯಕ್ರಮ.

    July 31, 2025

    ಹಾಸನಾಂಬ ಕಲಾಕ್ಷೇತ್ರದಲ್ಲಿ ‘ಹರಿ ಹರ ಸುತ’ ಮತ್ತು ‘ನಾಟ್ಯ ದಾಸೋಹಂ’ | ಆಗಸ್ಟ್ 02

    July 31, 2025

    ಕಿಶೋರ ಕನಕ ಕಾವ್ಯ ಸ್ಪರ್ಧೆ | 16 ಸೆಪ್ಟೆಂಬರ್

    July 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಹೃದ್ಯವಾದ ಚಿತ್ರ ವೀಣಾ -ಕೊಳಲುವಾದನ ಕಛೇರಿ
    Uncategorized

    ಹೃದ್ಯವಾದ ಚಿತ್ರ ವೀಣಾ -ಕೊಳಲುವಾದನ ಕಛೇರಿ

    September 16, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಉಡುಪಿ : ಉಡುಪಿಯ ರಾಗ ಧನ ಸಂಸ್ಥೆಯು ಹಮ್ಮಿಕೊಂಡಿರುವ ‘ರಾಗರತ್ನ ಮಾಲಿಕೆ -28’ನೇ ಕಾರ್ಯಕ್ರಮ ದಿನಾಂಕ 14 ಸೆಪ್ಟೆಂಬರ್ 2024ರಂದು ಮಣಿಪಾಲದ ಮಣಿಪಾಲ್ ಡಾಟ್ ನೆಟ್ ಸಭಾಂಗಣದಲ್ಲಿ ನಡೆಯಿತು.
    ಒಂದು ಹೃದ್ಯವಾದ ಕೊಳಲಿನ ತುತ್ತುಕಾರದೊಂದಿಗೆ ಮೃದುವಾದ ಚಿತ್ರವೀಣೆಯ ಉಲಿತ, ಉಡುಪಿ ಮಣಿಪಾಲದ ಸಂಗೀತಾಸಕ್ತರಿಗೆ ತುಂಬು ಸಂತಸವನ್ನು ನೀಡಿದವರು ಚಿತ್ರವೀಣಾ ಗಣೇಶ್ ಚೆನ್ನೈ ಮತ್ತು ಕೊಳಲಿನಲ್ಲಿ ಡಾ. ವಿಜಯ ಗೋಪಾಲ್ ಚೆನ್ನೈ. ಎರಡು ಬೇರೆ ಬೇರೆ ವಾದ್ಯಗಳ ಮಾಧುರ್ಯದ ಅಂಶಗಳನ್ನು ಹದವಾಗಿ ಬೆರೆಸಿ ನೀಡಿದ ಈ ಜೋಡಿ ಸಭಿಕರನ್ನು ಅಕ್ಷರಶಃ ಸಂಮೋಹನಗೊಳಿಸುವಲ್ಲಿ ಯಶಸ್ವಿಯಾಯಿತು. ನವರಾಗರ ಮಾಲಿಕಾ ವರ್ಣ, ಗಾನಮೂರ್ತಿ (ಗಾನಮೂರ್ತೇ) ಆರಭಿ (ಪಂಚ ರತ್ನ) ಆನಂದ ಭೈರವಿ (ಮರಿವೇರೆ) ಕೃತಿಗಳಲ್ಲದೆ ಪ್ರಧಾನವಾಗಿ ಹಂಸಾನಂದಿಯನ್ನು (ಪಾವನಗುರು ಪವನಪುರ) ಆಯ್ದುಕೊಳ್ಳಲಾಯಿತು.
    ಒಮ್ಮೆ ಪಕ್ಕವಾದ್ಯದವರಾಗಿ  ಮತ್ತೊಮ್ಮೆ ಸಹವಾದಕರಾಗಿ ಪರಸ್ಪರ ಅರಿತುಕೊಂಡು ಒಬ್ಬರಿಗೊಬ್ಬರು ಪೂರಕವಾಗಿ, ಈ ಕಲಾವಿದರು ಪರ್ಯಾಯವಾಗಿ ನೀಡಿದ ಆಲಾಪನೆಯ ಶ್ರಾವ್ಯತೆ, ಸ್ವರ ಕಲ್ಪನೆಗಳ ನಡೆ ಬೇಧಗಳು, ಎಲ್ಲೂ ಅಪಸ್ವರವಿಲ್ಲದ ನುಡಿತಗಳು ಶ್ರೋತೃಗಳ ಮುಕ್ತ ಪ್ರಶಂಸೆಗೆ ಪಾತ್ರವಾದವು. ಆನಂತರ ‘ವರಮು’ ರಾಗವನ್ನು ‘ರಾಗಂ -ತಾನಂ -ಪಲ್ಲವಿ’ಗೆ ಆಯ್ದುಕೊಂಡ ಕಲಾವಿದರು ರಾಗ ವಿಸ್ತಾರ, ರಾಗ ಮಾಲಿಕೆಯಲ್ಲಿ ‘ತಾನಂ’ ನಂತರ ‘ಕೃಷ್ಣಾ ..ಮುಕುಂದಾ..ಮುರಾ..ರೇ… ರಾಗಧನ ಸೊಬಗಿನ ಉಡುಪಿ’ ಎಂಬ ಸ್ವರಚಿತ ಪಲ್ಲವಿಯನ್ನು ಚತುರಸ್ರ ತ್ರಿಪುಟ ತಾಳದಲ್ಲಿ ನುಡಿಸಿದರು. ಮತ್ತು ಮುಕ್ತಾಯಗಳೊಂದಿಗೆ ಸ್ವರವಿನಿಕೆ (ಕಲ್ಪನಾ ಸ್ವರ)ಗಳನ್ನು ನೀಡಿದರು. ಕಚೇರಿಯುದ್ದಕ್ಕೂ ತಮ್ಮ ಚುರುಕಾದ ಬೆರಳುಗಳಿಂದ ಮೃದಂಗ ವಾದನದಲ್ಲಿ ನಿಕ್ಷಿತ್ ಪುತ್ತೂರು ಮತ್ತು ಕಂಜೀರದಲ್ಲಿ ಕಾರ್ತಿಕ್ ಇನ್ನಂಜೆ, ಮುಂದೆ ತನಿ ಆವರ್ತನದಲ್ಲಿ ಮಿಂಚಿದರು. ಯಮುನಾ ಕಲ್ಯಾಣಿಯ ದೇವರನಾಮ ಹಾಗೂ ದೇಶ ರಾಗದ ತಿಲ್ಲಾನದೊಂದಿಗೆ ಕಛೇರಿ ಸಂಪನ್ನಗೊಂಡಿತು.
    ವಿದುಷಿ ಶ್ರೀಮತಿ ಸರೋಜಾ ಆರ್ ಆಚಾರ್ಯ
    ಹಿರಿಯ ಸಂಗೀತ ಗಾಯಕಿ, ಸಂಗೀತ ವಿಮರ್ಶಕಿ ಹಾಗೂ ಕನ್ನಡ ಲೇಖಕಿ.

    Share. Facebook Twitter Pinterest LinkedIn Tumblr WhatsApp Email
    Previous Articleಬೆಳ್ತಂಗಡಿಯಲ್ಲಿ ತುಳು ಸಾಹಿತ್ಯ ರಚನಾ ಕಮ್ಮಟ 
    Next Article ಆರ‍್ಗೋಡು ಮೋಹನ್‌ದಾಸ್ ಶೆಣೈ ಇವರಿಗೆ ‘ಯಕ್ಷದೇಗುಲ-2024’ ಪ್ರಶಸ್ತಿ
    roovari

    Comments are closed.

    Related Posts

    ಪದ್ಮಗಿರಿ ಕಲಾ ಕುಟೀರಕ್ಕೆ ನೀರಿನ ಘಟಕ ಕೊಡುಗೆ

    July 24, 2025

    ಮಕ್ಕಳ ಮೇಳಕ್ಕೆ ಮಾಹೆಯ ‘ಸಮ್ಮರ್ ಸ್ಕೂಲ್’ ತಂಡ ಭೇಟಿ

    July 11, 2025

    ಬೆಂಗಳೂರಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ‘ಸಾಹಿತ್ಯ ಮತ್ತು ಕಲಾ ಉತ್ಸವ – 2025’ | ಜೂನ್ 28

    June 27, 2025

    ಯಕ್ಷಶಿಕ್ಷಣ ಟ್ರಸ್ಟ್ ಇದರ ವಾರ್ಷಿಕ ಮಹಾಸಭೆ

    June 26, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.