Subscribe to Updates

    Get the latest creative news from FooBar about art, design and business.

    What's Hot

    ಕದ್ರಿ ಯಕ್ಷ ಮಂಜುಳಾ ಮಹಿಳಾ ಬಳಗದವರಿಂದ ‘ಯಕ್ಷಗಾನ ತಾಳಮದ್ದಳೆ’ | ಫೆಬ್ರವರಿ 24

    February 21, 2026

    ಕೋಟ ‘ಅಹರ್ನಿಶ’ದಲ್ಲಿ ‘ಯಕ್ಷ ಗಾನ ವೈಭವ’

    February 21, 2026

    ‘ಮಲಬಾರ್ ವಿಶ್ವರಂಗ ಪುರಸ್ಕಾರ-2026’ಕ್ಕೆ ಐವರು ಹಿರಿಯ ರಂಗಕರ್ಮಿಗಳು

    February 21, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಂಗೀತ ಕಾರ್ಯಕ್ರಮ ವಿಮರ್ಶೆ | ಪುತ್ತೂರಿನಲ್ಲಿ ಅರಳಿದ ‘ರಾಗರತ್ನಮಾಲಿಕೆ’ -30
    Music

    ಸಂಗೀತ ಕಾರ್ಯಕ್ರಮ ವಿಮರ್ಶೆ | ಪುತ್ತೂರಿನಲ್ಲಿ ಅರಳಿದ ‘ರಾಗರತ್ನಮಾಲಿಕೆ’ -30

    October 31, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪುತ್ತೂರಿನ ಪಾಂಗಳಾಯಿಯ ಶ್ರೀಮತಿ ಕೃಷ್ಣವೇಣಿ ಮತ್ತು ಶ್ರೀ ಕೇಶವ ಪ್ರಸಾದ್ ಮುಳಿಯ ದಂಪತಿಗಳ ನಿವಾಸ ‘ಶ್ಯಾಮಲೋಚನ’ದಲ್ಲಿ ದಿನಾಂಕ 27 ಅಕ್ಟೋಬರ್ 2024ರಂದು ಒಂದು ಸಂಗೀತಾರಾಧನೆ ನಡೆಯಿತು. ಅದು, ಉಡುಪಿಯ ‘ರಾಗಧನ’ ಸಂಸ್ಥೆಯು ನಡೆಸುತ್ತಿರುವ ‘ರಾಗರತ್ನಮಾಲಿಕೆ’ ಸರಣಿಯ 30ನೇ ಗೃಹ ಸಂಗೀತ ಕಾರ್ಯಕ್ರಮವಾಗಿತ್ತು.

    ಉದ್ಘಾಟನಾ ಪೂರ್ವ ಕಛೇರಿ ಶ್ರೀಮತಿ ಅರುಣಾ ಸರಸ್ವತಿ ಅಮೈಯವರಿಂದ ನಡೆಯಿತು. ಪ್ರಸನ್ನ ಮುಖ ಮುದ್ರೆ, ಕೇಳಲು ಖುಷಿಯೆನಿಸುವ ಕಂಠಸಿರಿ ! ಪ್ರಾರಂಭದ ನಾಟಕುರಂಜಿ ವರ್ಣದಿಂದ ಹಿಡಿದು, ಕೊನೆಯಲ್ಲಿ ಹಾಡಲಾದ ಮಧವಂತಿ (ಸರ್ವಂ ಬ್ರಹ್ಮಮಯಂ) ಲಘು ಪ್ರಸ್ತುತಿಯವರೆಗೆ ಶ್ರೋತೃಗಳ ಆಸಕ್ತಿಯನ್ನು ಏಕಪ್ರಕಾರವಾಗಿ ಕಾದುಕೊಂಡ ಸರಳವಾದ ಕಛೇರಿ !

    ಪ್ರಧಾನ ರಾಗ ‘ಪಂತುವರಾಳಿ’ (ರಾಮನಾಥಂ) ಶುದ್ಧವಾದ, ಗಮಕಯುಕ್ತ ಆಲಾಪನೆ, ನೆರವಲ್, ಅಚ್ಚುಕಟ್ಟಾದ ಸ್ವರ ಕಲ್ಪನೆಗಳ ಸಹಿತ ಹಿತವಾಗಿ ಮೂಡಿ ಬಂತು. ಆರಭಿ (ಗಣರಾಜೇನ) ಆಹಿರ್ ಭೈರವ್ (ಶ್ರೀ ಜಗದೀಶ್ವರಿ) ರಚನೆಗಳು ಹೃದ್ಯವಾಗಿದ್ದು ರಸಿಕರಿಗೆ ಸಂತೃಪ್ತಿಯನ್ನು ನೀಡಿವೆ. ಶ್ರೀ ಗೌತಮ್ ಭಟ್ ಪ್ರಬುದ್ಧವಾದ ಸಹವಾದನ ನೀಡಿದ್ದಾರೆ. ಮೃದಂಗ ವಿದ್ವಾನ್ ಶ್ರೀ ಸುನಾದಕೃಷ್ಣ ಅಮೈ ಕಲಾವಿದೆಯ ಇಂಗಿತವರಿತು ಮೃದುವಾಗಿ ಅನುಸರಿಸಿದ್ದಾರೆ; ಅಂತೆಯೇ ವಿದ್ವತ್ಪೂರ್ಣವಾದ ತನಿ ಆವರ್ತನ ನೀಡಿದ್ದಾರೆ.

    ಈ ಕಾರ್ಯಕ್ರಮದ ನಂತರ ‘ಭಕ್ತಿ ಭಾವ ಲಹರಿ’ ಲಘು ಶಾಸ್ತ್ರಿಯ ಸಂಗೀತವನ್ನು ನಡೆಸಿದವರು ಮಣಿಪಾಲದ ಶ್ರೀ ಕೆ.ಆರ್. ರಾಘವೇಂದ್ರ ಆಚಾರ್ಯ ಮತ್ತು ಶ್ರೀಮತಿ ಶ್ರುತಿ ಗುರುಪ್ರಸಾದ್. ಇಬ್ಬರು ಕಲಾವಿದರದ್ದೂ ಸುಗಮ ಸಂಗೀತಕ್ಕೆ ಹೊಂದಿಕೊಳ್ಳುವಂತಹ ಶಾರೀರ; ಅಂತೆಯೇ ಪ್ರಸ್ತುತಿಗಳೂ ಪರ್ಯಾಯವಾಗಿಯೇ ಮೂಡಿ ಬಂದವು.

    ‘ಶರಣು ಸಿದ್ಧಿವಿನಾಯಕ’, ‘ಶೃಂಗಪುರಾಧೀಶ್ವರಿ’ ದೇವತಾ ಸ್ತುತಿಗಳ ನಂತರ ಹಾಡಲಾದ ‘ಹೇ ಗೋವಿಂದ… ಹೇ ಗೋಪಾಲ’, ‘ಕೃಷ್ಣ ದೀವಾನೀ’ ಭಜನೆಗಳು ರಸಿಕರ ಮೆಚ್ಚುಗೆಯನ್ನು ಪಡೆದವು. ‘ನೆಚ್ಚದಿರು…’, ‘ಕಷ್ಟ ಪಟ್ಟರು ಇಲ್ಲ’, ‘ಹೌದಪ್ಪ ಹೌದು’ ಮುಂತಾದ ತತ್ವಪದಗಳ ನಂತರ ಭಾವಗೀತೆಗಳನ್ನು ಎತ್ತಿಕೊಳ್ಳಲಾಯಿತು. ‘ಏನೀ ಮಹಾನಂದವು’, ‘ನೀರೇ, ನೀ ಕರೆತಾರೇ’, ‘ನೀಲ ನಭಕ್ಕೆ ನೂಲ ಏಣಿ’, ‘ಮರೆಸದಿರು ನೆನಪುಗಳ’, ‘ಬಯಲಿನೊಳಗೆ ಯಾರೋ ಇಬ್ಬರು’, ‘ನನ್ನ ಎದೆಯ ಒಲವಧಾರೆ’ ಮುಂತಾದ ಭಾವಗೀತೆಗಳಿಗೆ ಇಲ್ಲಿಯ ಸಭಿಕರು ಸಂತಸದಿಂದ ಸ್ಪಂದಿಸಿದರು. ಅಲ್ಲದೆ ಜಾನಪದ ಸೊಗಡಿನ ‘ಸೋಜಿಗದ ಸೂಜುಮಲ್ಲಿಗೆ’, ‘ಇನ್ನೂ ಯಾಕ ಬರಲಿಲ್ಲವಾ’ ಹಾಡುಗಳು ಜನರಂಜನೀಯ ಎನಿಸಿದವು. ‘ರಂಗಬಾರೋ ಪಾಂಡುರಂಗಬಾರೋ’, ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ಹಾಡುಗಳೊಂದಿಗೆ ಕಾರ್ಯಕ್ರಮ ಮಂಗಳವಾಗಿ ಕೊನೆಗೊಂಡಿತು.

    ಇವರಿಗೆ ತಬಲಾದಲ್ಲಿ ಶ್ರೀ ಮಾಧವ ಆಚಾರ್ಯ, ಹಾರ್ಮೋನಿಯಂನಲ್ಲಿ ಶ್ರೀ ಪ್ರಸಾದ್ ಕಾಮತ್, ಕೊಳಲಿನಲ್ಲಿ ಶ್ರೀ ಲೋಕೇಶ್ ಮೂಡಬಿದರೆ ಮತ್ತು ರಿದಂ ಪ್ಯಾಡ್ ನಲ್ಲಿ ಕಾರ್ತಿಕ್ ಇನ್ನಂಜೆ ಸಹವಾದನ ನೀಡಿರುತ್ತಾರೆ.

    ಸರೋಜಾ ಆರ್. ಆಚಾರ್ಯ

    Share. Facebook Twitter Pinterest LinkedIn Tumblr WhatsApp Email
    Previous Articleಕೆ. ಗಣೇಶ ರಾವ್ ಇವರು ‘ಯಕ್ಷಚೇತನ ಪ್ರಶಸ್ತಿ’ಗೆ ಆಯ್ಕೆ
    Next Article ರಂಗಭೂಮಿ ಇದರ 60ರ ಸಂಭ್ರಮದ ಉದ್ಘಾಟನಾ ಸಮಾರಂಭ | ನವೆಂಬರ್ 03
    roovari

    Add Comment Cancel Reply


    Related Posts

    ಇನ್ನೊಂದು ಗಿನ್ನೆಸ್ ದಾಖಲೆಗೆ ಸಜ್ಜಾಗುತ್ತಿದೆ ಮಾಂಡ್ ಸೊಭಾಣ್

    February 21, 2026

    ಕಡಂದಲೆಯಲ್ಲಿ ಮೂಡುಬಿದಿರೆ ತಾಲೂಕು ‘ಕನ್ನಡ ಸಾಹಿತ್ಯ ಸಮ್ಮೇಳನ’ | ಫೆಬ್ರವರಿ 21

    February 20, 2026

    ಯಶಸ್ವಿಯಾಗಿ ಸಂಪನ್ನಗೊಂಡ ‘ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ’

    February 20, 2026

    ಕನ್ನಡ ಭವನದಲ್ಲಿ ‘ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026’ | ಫೆಬ್ರವರಿ 22

    February 20, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.