ಉಡುಪಿ : ನಾದಾವಧಾನ ಪ್ರತಿಷ್ಠಾನ (ರಿ.) ಕುಂದಾಪುರ ಇದರ ವಾರ್ಷಿಕೋತ್ಸವವನ್ನು ದಿನಾಂಕ 07 ಜೂನ್ 2025ರಂದು ಬೆಳಿಗ್ಗೆ 7-00 ಗಂಟೆಗೆ ಉಡುಪಿ ಜಿಲ್ಲೆಯ ಕಿರಿ ಮಂಜೇಶ್ವರದಲ್ಲಿರುವ ಒಡೆಯರಮಠ ಶ್ರೀ ಗೋಪಾಲಕೃಷ್ಣ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 9-00 ಗಂಟೆಗೆ ನಾದಾವಧಾನ ವಿದ್ಯಾರ್ಥಿಗಳಿಂದ ಯಕ್ಷಗಾನ ಪದ್ಯಗಳ ಪ್ರಸ್ತುತಿ ನಡೆಯಲಿದೆ. 10-30 ಗಂಟೆಗೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ತಾಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಉಮೇಶ್ ಶಾನಭೋಗ್ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಖ್ಯಾತ ತಾಳಮದ್ದಲೆ ಅರ್ಥದಾರಿಗಳಾದ ವಾಸುದೇವರಂಗಾ ಭಟ್ ಇವರಿಂದ ‘ಭಾಗವತಿಕೆ – ಒಂದು ಸ್ವರೂಪ ವಿವೇಚನೆ’, ರಾಘವೇಂದ್ರ ಆಚಾರ್ಯ ಜನ್ಸಾಲೆ ಇವರಿಂದ ‘ವಿಶೇಷ ಮಟ್ಟುಗಳ ಪ್ರಾತ್ಯಕ್ಷಿಕೆ’, ಮಧ್ಯಾಹ್ನ 2-30 ಗಂಟೆಗೆ ಉಭಯ ತಿಟ್ಟುಗಳ ಅಗ್ರಗಣ್ಯ ಭಾಗವತರುಗಳಿಂದ ಪೌರಾಣಿಕ ಪ್ರಸಂಗಗಳಿಂದ ಆಯ್ದ ಅಪರೂಪದ ‘ಯಕ್ಷ ಗಾನ ವೈಭವ’ ಪ್ರಸ್ತುತಗೊಳ್ಳಲಿದೆ. ಹಿರಿಯ ಯಕ್ಷಗಾನ ಭಾಗವತರಾದ ಶ್ರೀ ಗೋಪಾಲ್ ಗಾಣಿಗ ಹೆರಂಜಲು ಇವರಿಗೆ ಗುರುವಂದನೆ ನೀಡಿ ಗೌರವಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಅಶ್ವಿನಿ ಕೊಂಡದಕುಳಿ ಹಾಗೂ ನಾದಾವಧಾನ ವಿದ್ಯಾರ್ಥಿಗಳಿಂದ ಕವಿ ಪ್ರೊ. ಎಂ.ಎ. ಹೆಗಡೆ ವಿರಚಿತ ‘ಕುಶಲವ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.