Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025

    ಕಲಾಕುಲ್ ಕೊಂಕಣಿ ನಾಟಕ ರೆಪರ್ಟರಿಗೆ ಅರ್ಜಿ ಆಹ್ವಾನ

    May 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರಿನಲ್ಲಿ ಪಾರ್ಶ್ವನಾಥ ಉಪಾಧ್ಯೆ, ಶೃತಿ ಗೋಪಾಲ್ ಮತ್ತು ಆದಿತ್ಯ ಪಿ.ವಿ. ಇವರಿಂದ ‘ನಾಗಮಂಡಲ’ ವಿಶೇಷ ನೃತ್ಯ ರೂಪಕ ಪ್ರಸ್ತುತಿ
    Bharathanatya

    ಮಂಗಳೂರಿನಲ್ಲಿ ಪಾರ್ಶ್ವನಾಥ ಉಪಾಧ್ಯೆ, ಶೃತಿ ಗೋಪಾಲ್ ಮತ್ತು ಆದಿತ್ಯ ಪಿ.ವಿ. ಇವರಿಂದ ‘ನಾಗಮಂಡಲ’ ವಿಶೇಷ ನೃತ್ಯ ರೂಪಕ ಪ್ರಸ್ತುತಿ

    August 9, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಅಂತರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ಕಲಾವಿದರಾದ ಬೆಂಗಳೂರಿನ ಪಾರ್ಶ್ವನಾಥ ಉಪಾಧ್ಯೆ, ಶೃತಿ ಗೋಪಾಲ್ ಮತ್ತು ಆದಿತ್ಯ ಪಿ.ವಿ. ಇವರಿಂದ ‘ನಾಗಮಂಡಲ’ ವಿಶೇಷ ನೃತ್ಯ ರೂಪಕ ಪ್ರಸ್ತುತಿ ಮಂಗಳೂರಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ ದಿನಾಂಕ 06-08-2023ರಂದು ನಡೆಯಿತು.

    ಮಂಗಳೂರಿನ ಸನಾತನ ನಾಟ್ಯಾಲಯ ಮತ್ತು ನೃತ್ಯಾಂಗನ್ ಸಂಸ್ಥೆಯ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮವನ್ನು ಎನ್.ಎಂ.ಪಿ.ಎ.ನ ಡೆಪ್ಯುಟಿ ಚೇರ್ಮನ್ ಕೆ.ಜಿ.ನಾಥನ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಡಿಜಿಎಂ ಮಹೇಶ್ ಕುಮಾರ್, ಕಲಾ ಪೋಷಕರಾದ ಸತೀಶ್ ಚಂದ್ರ ಭಂಡಾರಿಯವರು ಉದ್ಘಾಟಿಸಿದರು. ಸನಾತನ ನಾಟ್ಯಾಲಯದ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಶೆಟ್ಟಿ, ಗುರುಗಳಾದ ವಿದುಷಿ ಶಾರದಾಮಣಿ ಶೇಖರ್, ಶ್ರೀಲತಾ ನಾಗರಾಜ್, ನೃತ್ಯಾಂಗನ್ ಸಂಸ್ಥೆಯ ನಿರ್ದೇಶಕಿ ರಾಧಿಕಾ ಶೆಟ್ಟಿ ಉಪಸ್ಥಿತರಿದ್ದರು.

    ಗಿರೀಶ ಕಾರ್ನಾಡ್ ರಚಿಸಿದ ‘ನಾಗಮಂಡಲ’ ಜಾನಪದ ಕಥೆಯ ತಿರುಳಿನ ಈ ಕತೆಯನ್ನು ಪುಣ್ಯ ಡ್ಯಾನ್ಸ್ ಕಂಪೆನಿ ಕಲಾವಿದರು  ಶಾಸ್ತ್ರೀಯ ನೃತ್ಯಕ್ಕೇ ಅಳವಡಿಸಿ ಪ್ರಸ್ತುತಗೊಳಿಸಿರುವುದು ವಿಭಿನ್ನವಾಗಿತ್ತು. ಇಲ್ಲಿ ಗೀಗಿ ಪದ ಹಾಡುವ ಜನಪದರೇ‌ ನಿರೂಪಕರಾಗಿ, ಕತೆಯನ್ನು ಹೇಳುತ್ತಾ, ಹೊಸದಾಗಿ ಮದುವೆಯಾದ ದಂಪತಿಗಳಲ್ಲಿ ಪ್ರೀತಿಗೆ ಹಂಬಲಿಸುವ ಪತ್ನಿ ಮತ್ತು ನಿರ್ಲಕ್ಷಿಸುವ ಪತಿ, ಇವರ ಮಧ್ಯೆ ಪತಿಯಾಗಿ ಕಾಣಿಸಿಕೊಂಡು ಪ್ರೀತಿ ನೀಡುವ ನಾಗ. ಹೀಗೇ ರೋಚಕವಾದ ಜನಪದ ಕತೆಯ ಮೂಲಕ ಹೆಣ್ಣಿನ ಅಸ್ಮಿತೆಯನ್ನು ಈ‌ ನೃತ್ಯ ಪ್ರಸ್ತುತಿಯಲ್ಲಿ ಆಕರ್ಷಣೀಯವಾಗಿ ಅಭಿವ್ಯಕ್ತಿಗೊಳಿಸಲಾಗಿತ್ತು. ಉತ್ತಮ ಸಂಗೀತ ಸಂಯೋಜನೆ ಹಾಗೂ ಅತ್ಯಾಕರ್ಷಕ ಬೆಳಕಿನ ವಿನ್ಯಾಸ ನೃತ್ಯಪ್ರಸ್ತುತಿಯೊಂದಿಗೇ ನೃತ್ಯ ರೂಪಕ‌ ಯಶಸ್ವಿಯಾಗಿ ಪ್ರದರ್ಶಿತಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleಕಾಸರಗೋಡಿನ ಸಿರಿಬಾಗಿಲಿನಲ್ಲಿ ‘ರಾಮಾಯಣ ಮಾಸಾಚರಣೆ’ | ಆಗಸ್ಟ್ 11ರಿಂದ 17ರವರೆಗೆ
    Next Article ಉಡುಪಿಯಲ್ಲಿ ಪ್ರೊ. ಕೆ.ಪಿ. ರಾವ್ ಅವರಿಗೆ ‘ಅಭಿನಂದನಾ ಕಾರ್ಯಕ್ರಮ’
    roovari

    Add Comment Cancel Reply


    Related Posts

    ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ‘ಸುಮಂಜುಳ’ | ಮೇ 10

    May 6, 2025

    ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ‘ನೃತ್ಯ ಭಾನು’ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ | ಮೇ 09

    May 6, 2025

    ಮಂಗಳೂರಿನ ಪುರಭವನದಲ್ಲಿ ಕುಮಾರಿ ಕಿಯಾರಾ ಆ್ಯಶ್ಲಿನ್ ಪಿಂಟೋ ಇವರ ಶಾಸ್ತ್ರೀಯ ನೃತ್ಯ ರಂಗಪ್ರವೇಶ | ಮೇ 04

    May 1, 2025

    ಸುಳ್ಯದ ಕನಕ ಕಲಾ ಗ್ರಾಮದಲ್ಲಿ ಯಶಸ್ವಿಯಾಗಿ ನಡೆದ ವಿಶ್ವ ನೃತ್ಯ ದಿನ ಆಚರಣೆ

    May 1, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.