ಬೆಳಗಾವಿ : ಶಿವಾ ಆಫ್ ಸೆಟ್ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್ ಹಾಗೂ ಗುರುದೇವ ಪ್ರಕಾಶನ ವತಿಯಿಂದ ದಿನಾಂಕ 03 ಆಗಸ್ಟ್ 2025ರಂದು ಮಂಗಳೂರಿನ ಕಣಚ್ಚೂರು ನಾಟೆಕಲ್ ನ ವೈದ್ಯಕೀಯ ಮುಖ್ಯ ನಿರ್ದೇಶಕ, ಸಲಹೆಗಾರ ಹಾಗೂ ಬರಹಗಾರ ಡಾ. ಸುರೇಶ ನೆಗಳಗುಳಿ ಇವರಿಗೆ ‘ನಮ್ಮ ವೈದ್ಯೋ ನಾರಾಯಣ’ ಎಂಬ ಪ್ರಶಸ್ತಿಯನ್ನು ಬೆಳಗಾವಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡುವುದಾಗಿ ನಮ್ಮ ವೈದ್ಯೋ ನಾರಾಯಣ ಸಂಪಾದಕರಾದ ಶ್ರೀ ಸುನಿಲ್ ಪರೀಟ ಇವರು ತಿಳಿಸಿದ್ದಾರೆ.
ಸದ್ರಿ ಪ್ರಕಾಶನದ ವೈದ್ಯರ ಕುರಿತಾದ ಕವನ ಸಂಕಲನ ಲೋಕಾರ್ಪಣೆಯ ನೆನಪಿನಲ್ಲಿ ಕವನ ಬರೆದ ಇವರನ್ನು ಆ ವೇಳೆ ಶಾಲು ಹಾರ ಸ್ಮರಣಿಕೆ ಸಹಿತ ಸನ್ಮಾನಿಸಲಾಗುವುದು. ಇವರು ಬರವಣಿಗೆಯಲ್ಲಿ ಐವತ್ತು ವರ್ಷಗಳ ಅನುಭವಿಯಾಗಿದ್ದು ಮುಕ್ತಕ, ಗಜಲ್, ಭಾವಗೀತೆ ಸಹಿತ 14 ಸಂಕಲನಗಳನ್ನು ಲೋಕಾರ್ಪಣೆ ಮಾಡಿರುತ್ತಾರೆ. ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಾಗೂ ಬದಲಾಗದವರು ಎಂಬ ಚಲನಚಿತ್ರದಲ್ಲಿ ನಟರಾಗಿಯೂ ಅಭಿನಯಿಸಿದ್ದು, ಹಲವಾರು ಟಿ.ವಿ., ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುತ್ತಾರೆ.