Subscribe to Updates

    Get the latest creative news from FooBar about art, design and business.

    What's Hot

    ಸಾಗರ ತಾಲೂಕಿನಲ್ಲಿ ಯಕ್ಷಗಾನ ತರಬೇತಿ ಉದ್ಘಾಟನೆ | ಜೂನ್ 09

    June 3, 2025

    ಬೆಂಗಳೂರಿನ ಶ್ರೀ ಸಿ. ಅಶ್ವಥ್ ಕಲಾ ಭವನದಲ್ಲಿ ‘ಕಾವ್ಯ ಕಾಮಧೇನು ಎಚ್.ಎಸ್.ವಿ.’ | ಜೂನ್ 08

    June 3, 2025

    ಸಮಾರೋಪಗೊಂಡ ಯಕ್ಷಪಕ್ಷ – ರಜತ ಸರಯೂ ಕಾರ್ಯಕ್ರಮ

    June 3, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಾಸರಗೋಡಿನಲ್ಲಿ ನಾರಿ ಚಿನ್ನಾರಿಯ 9ನೇ ಸರಣಿ ಕಾರ್ಯಕ್ರಮ ‘ವರ್ಷ ರಿಂಗಣ’ | ಸೆಪ್ಟೆಂಬರ್ 30ರಂದು
    Book Release

    ಕಾಸರಗೋಡಿನಲ್ಲಿ ನಾರಿ ಚಿನ್ನಾರಿಯ 9ನೇ ಸರಣಿ ಕಾರ್ಯಕ್ರಮ ‘ವರ್ಷ ರಿಂಗಣ’ | ಸೆಪ್ಟೆಂಬರ್ 30ರಂದು

    September 27, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಕಾಸರಗೋಡಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು (ರಿ.) ಇದರ ಮಹಿಳಾ ಘಟಕ ‘ನಾರಿ ಚಿನ್ನಾರಿ’ಯ 9ನೇ ಸರಣಿ ಕಾರ್ಯಕ್ರಮ ‘ವರ್ಷ ರಿಂಗಣ’ ದಿನಾಂಕ 30-09- 2023 ಶನಿವಾರ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಡೆಯಲಿದೆ.

    ಕಾಸರಗೋಡಿನ ಕರಂದಕ್ಕಾಡಿನಲ್ಲಿರುವ ಪದ್ಮಗಿರಿ ಕಲಾಕುಟೀರದಲ್ಲಿ ಈ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಪುಸ್ತಕ ಬಿಡುಗಡೆಯನ್ನು ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಿಕೆ ಮತ್ತು ಸಾಹಿತಿಯಾದ ಡಾ.ಮೀನಾಕ್ಷಿ ರಾಮಚಂದ್ರ ನೆರವೇರಿಸದ್ದಾರೆ. ನಾರಿ ಚಿನ್ನಾರಿಯ ಕಾರ್ಯಾಧ್ಯಕ್ಷರಾದ ಸವಿತಾ ಟೀಚ‌ರ್ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಗೃಹಿಣಿಯಾದ ಶ್ರೀಮತಿ ಸರೋಜಿನಿ ಕೆ.ಭಟ್ ಉಪಸ್ಥಿತರಿದ್ದು ಪ್ರಥಮ ಪ್ರತಿ ಸ್ವೀಕಾರ ಮಾಡಲಿರುವರು. ಇದೇ ಸಂದರ್ಭದಲ್ಲಿ, ಕಾಸರಗೋಡು ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಿಕೆ ಮತ್ತು ಕವಯತ್ರಿಯಾದ ಲಕ್ಷ್ಮೀ.ಕೆ ಹಾಗೂ ತುಳು ಜಾನಪದ ಕಲಾವಿದೆಯಾದ ಲಕ್ಷ್ಮೀ ಕುಂಬ್ಡಾಜೆ ಇವರಿಗೆ ಗೌರವಾರ್ಪಣೆ ನಡೆಯಲಿದೆ.

    ಇದೇ ವೇದಿಕೆಯಲ್ಲಿ ಲೇಖಕಿ ಲಕ್ಷ್ಮೀ.ಕೆ ಇವರ ‘ನೀನಿಲ್ಲ…. ಇಲ್ಲಿ ನಾನು ಮಾತ್ರ’ ಕವನ ಸಂಕಲನ ಬಿಡುಗಡೆಗೊಳ್ಳಲಿದೆ. ಕಾವಯತ್ರಿ ಹಾಗೂ ಕತೆಗಾರ್ತಿಯಾದ ಸ್ನೇಹಲತಾ ದಿವಾಕರ್ ಪುಸ್ತಕ ಪರಿಚಯ ಮಾಡಲಿರುವರು.
    ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮೇಧಾ.ಎನ್ ಇವರಿಂದ ಕನ್ನಡ ಭಾವಗೀತೆ, ಸ್ವಾತಿ ಲಕ್ಷ್ಮೀ ಇವರಿಂದ ಕೂಚುಪುಡಿ ನೃತ್ಯ, ಮಾಳವಿಕಾ ಇವರಿಂದ ಮಲಯಾಳಂ ಭಾವಗೀತೆ, ಚಂಚಲ್ ಎ.ಯು ಇವರಿಂದ ಕಳರಿ ಪಯಟ್ಟ್, ಪಲ್ಲವಿ ಇವರಿಂದ ಸ್ವರಚಿತ ಕವನ ವಾಚನ, ಅಭಿನಾ ಇವರಿಂದ ಶಾಸ್ತ್ರೀಯ ನೃತ್ಯ, ಲಕ್ಷ್ಮೀ ಕುಂಬ್ಡಾಜೆ ಇವರಿಂದ ತುಳು ಜಾನಪದ ಗೀತೆ ಹಾಗೂ ಜಯಂತಿ.ಕೆ ಇವರು ಕಥೆ ಹೇಳಲಿರುವರು.
    ಈ ಕಾರ್ಯಕ್ರಮಕ್ಕೆ ರಂಗ ಚಿನ್ನಾರಿ ಹಾಗೂ ನಾರಿ ಚಿನ್ನಾರಿಯ ಅಧ್ಯಕ್ಷರು ಮತ್ತು ಸದಸ್ಯರು ಸರ್ವರಿಗೂ ಸ್ವಾಗತ ಬಯಸಿದ್ದಾರೆ.

     

    Share. Facebook Twitter Pinterest LinkedIn Tumblr WhatsApp Email
    Previous Articleಸುಳ್ಯದ ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ‘ವಾಚನಾಭಿರುಚಿ ಮತ್ತು ಬರಹ ಕಲೆ’-ಉಪನ್ಯಾಸ
    Next Article ವಿಶೇಷ ಲೇಖನ | ಎಂಬತ್ತೆಂಟರ ತಾರುಣ್ಯದಲ್ಲಿ ಅಮೃತ ಸೋಮೇಶ್ವರ
    roovari

    Add Comment Cancel Reply


    Related Posts

    ಬೆಂಗಳೂರಿನ ಶ್ರೀ ಸಿ. ಅಶ್ವಥ್ ಕಲಾ ಭವನದಲ್ಲಿ ‘ಕಾವ್ಯ ಕಾಮಧೇನು ಎಚ್.ಎಸ್.ವಿ.’ | ಜೂನ್ 08

    June 3, 2025

    ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ‘ಶತ ಸಂಭ್ರಮ’ ಮತ್ತು ‘ನುಡಿ ನಮನ’ ಕಾರ್ಯಕ್ರಮ | ಜೂನ್ 08

    June 3, 2025

    ಶ್ರೀಮತಿ ಬಾನು ಮುಷ್ತಾಕ್ ಹಾಗೂ ಶ್ರೀಮತಿ ದೀಪಾ ಭಾಸ್ತಿ ಇವರುಗಳಿಗೆ ಗೌರವ ಸನ್ಮಾನ | ಜೂನ್ 04

    June 3, 2025

    ಶಿವಮೊಗ್ಗದ ಕ.ಸಾ.ಪ. ಜಿಲ್ಲಾ ಸಮಿತಿ ವತಿಯಿಂದ ‘ಶ್ರೀ ಕೃಷ್ಣರಾಜ ಒಡೆಯರ್ ಜನ್ಮದಿನಾಚರಣೆ’ | ಜೂನ್ 04

    June 3, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.