Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ರಂಗಸಂಪದದವರಿಂದ ‘ನೀನಾಸಂ ತಿರುಗಾಟ’ದ ನಾಟಕ ಪ್ರದರ್ಶನ
    Drama

    ರಂಗಸಂಪದದವರಿಂದ ‘ನೀನಾಸಂ ತಿರುಗಾಟ’ದ ನಾಟಕ ಪ್ರದರ್ಶನ

    February 2, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಳಗಾವಿ : ರಂಗಸಂಪದವರು ತಿಲಕಚೌಕ ಹತ್ತಿರವಿರುವ ಲೋಕಮಾನ್ಯ ರಂಗಮಂದಿರದಲ್ಲಿ ದಿನಾಂಕ 09-12-2023ರಂದು ಹಮ್ಮಿಕೊಂಡಿದ್ದ ನಿನಾಸಂ ತಂಡದವರ ‘ನಿನಾಸಂ ತಿರುಗಾಟ’ದಲ್ಲಿ ಎರಡು ದಿನಗಳ ನಾಟಕೋತ್ಸವವನ್ನು ಖ್ಯಾತ ನ್ಯಾಯವಾದಿ, ರಂಗಸಂಪದದ ಪೋಷಕ ಎಸ್‌.ಎಂ. ಕುಲಕರ್ಣಿಯವರು ಜಾಗಟೆಯನ್ನು ಬಾರಿಸುವದರ ಮೂಲಕ ಉದ್ಘಾಟಿಸಿದರು. ಅವರು ಮಾತನಾಡುತ್ತಾ “ಸುಮಾರು 45 ವರ್ಷಗಳ ಇತಿಹಾಸವನ್ನು ರಂಗಸಂಪದ ಹೊಂದಿದೆ. ಪ್ರೇಕ್ಷಕರಲ್ಲಿ ನಾಟಕ ನೋಡುವ ಹೆಚ್ಚಿನ ಅಭಿರುಚಿಯನ್ನು ಮೂಡಿಸಿದ ಶ್ರೇಯಸ್ಸು ಈ ಸಂಸ್ಥೆಗೆ ಸಲ್ಲುತ್ತದೆ. ಹಲವಾರು ಕಷ್ಟನಷ್ಟಗಳಿಂದ ನಡೆದು ಬಂದಿರುವ ರಂಗಸಂಪದ ತಂಡ ಇಂದು ಕರ್ನಾಟಕದಾದ್ಯಂತ ರಂಗಾಸಕ್ತರ ಪ್ರೀತಿಗೆ ಪಾತ್ರವಾಗಿದೆ. ಪ್ರೇಕ್ಷಕರು ನಾಟಕ ನೋಡುವುದರೊಂದಿಗೆ ಧನಸಹಾಯವನ್ನು ನೀಡುವುದು ಅಷ್ಟೇ ಅತ್ಯವಶ್ಯವಾಗಿದೆ. ಜನರು ಎಲ್ಲಾ ರೀತಿಯ ಸಹಾಯ ಹಸ್ತ ನೀಡಿದಲ್ಲಿ ರಂಗಸಂಪದವು ಇನ್ನೂ ಒಳ್ಳೊಳ್ಳೆ ನಾಟಕಗಳನ್ನು ತಮ್ಮ ಮುಂದಿಡುತ್ತದೆ” ಎಂದು ಹೇಳಿದರು.

    ನಿನಾಸಂ ತಂಡದವರಿಂದ ಜಾನಪೀಠ ಪ್ರಶಸ್ತಿ ವಿಜೇತ ಡಾ.ಚಂದ್ರಶೇಖರ ಕಂಬಾರ ರಚನೆಯ ಕೆ.ಜಿ. ಕೃಷ್ಣಮೂರ್ತಿ ನಿರ್ದೇಶನದ ‘ಹುಲಿ ನೆರಳು’ ನಾಟಕ ಪ್ರದರ್ಶನಗೊಂಡಿತು. ರಂಗಸಂಪದಕ್ಕೆ ಧನಸಹಾಯ ನೀಡಿ ಪ್ರೋತ್ಸಾಹಿಸಿದ ಮಹನೀಯರನ್ನು ಗೌರವಿಸಲಾಯಿತು. ರಂಗಸಂಪದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿಯವರು ಸ್ವಾಗತಿಸಿದರು. ನಿನಾಸಂ ವ್ಯವಸ್ಥಾಪಕ ಮಂಜುನಾಥ ಹಿರೇಮಠ, ಉಪಾಧ್ಯಕ್ಷ ಗುರುನಾಥ ಕುಲಕರ್ಣಿ, ರಾಮಚಂದ್ರ ಕಟ್ಟಿ, ಕಾರ್ಯದರ್ಶಿ ಪ್ರಸಾದ ಕಾರಜೋಶ, ಸಹಕಾರ್ಯದರ್ಶಿ ಯೋಗೇಶ ದೇಶಪಾಂಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleತೆಕ್ಕಟ್ಟೆ ಹಯಗ್ರೀವದಲ್ಲಿ ‘ರಂಗಾರ್ಪಣ’ ಹಾಗೂ ಮೇಳಕ್ಕೆ ತೆರಳುವ ಉದಯೋನ್ಮುಖ ಕಲಾವಿದರಿಗೆ ಅಭಿನಂದನೆ
    Next Article ಕೊಡವೂರಿನಲ್ಲಿ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮದಲ್ಲಿ ವಿದುಷಿ ಧೀಮಹಿ ಮಟ್ಟು ಇವರ ನೃತ್ಯ ಪ್ರದರ್ಶನ | ಫೆಬ್ರವರಿ 5
    roovari

    Add Comment Cancel Reply


    Related Posts

    ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ | ಮೇ 11

    May 8, 2025

    ನಾಟಕ ವಿಮರ್ಶೆ | ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ – ‘ಶರ್ಮಿಷ್ಠೆ’

    May 7, 2025

    ಸಮಾರೋಪಗೊಂಡ ರಜಾರಂಗು ‘ಚಂದಕ್ಕಿ ಬಾರೆ ಕಥೆ ಹೇಳೆ’ ಬೇಸಿಗೆ ಶಿಬಿರ

    May 5, 2025

    ಮೈಸೂರು ಮತ್ತು ಬೆಂಗಳೂರಿನಲ್ಲಿ ‘ಎದೆಗೆ ಬಿದ್ದ ಅಕ್ಷರ’ ನಾಟಕ ಪ್ರದರ್ಶನ | ಮೇ 04

    May 3, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.