Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರಿನಲ್ಲಿ ‘ನೇಹದ ನೇಯ್ಗೆ’ | ಮಾರ್ಚ್ 20ರಿಂದ 25ರವರೆಗೆ
    Camp

    ಮಂಗಳೂರಿನಲ್ಲಿ ‘ನೇಹದ ನೇಯ್ಗೆ’ | ಮಾರ್ಚ್ 20ರಿಂದ 25ರವರೆಗೆ

    March 19, 2024Updated:March 23, 2024No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ‘ನಿರ್ದಿಗಂತ’ ವತಿಯಿಂದ ‘ನೇಹದ ನೇಯ್ಗೆ’ ನಾಟಕ, ಸಂಗೀತ, ಚಿತ್ರ, ಸಿನೆಮಾ, ಸಾಹಿತ್ಯಗಳ ಸಮ್ಮಿಲನ ‘ರಂಗೋತ್ಸವ’ ಕಾರ್ಯಕ್ರಮವು ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಕಾಲೇಜಿನ ಆವರಣದಲ್ಲಿ ದಿನಾಂಕ 20-03-2024ರಿಂದ 25-03-2024ರ ತನಕ ಆಯೋಜಿಸಲಾಗಿದೆ.

    ದಿನಾಂಕ 20-03-2024ರಂದು ಗಂಟೆ 5.30ಕ್ಕೆ ನಾನಾ ಪಾಟೇಕರ್ ಇವರಿಂದ ಈ ರಂಗೋತ್ಸವವು ಉದ್ಘಾಟನೆಗೊಳ್ಳಲಿದೆ. ನಿರ್ದಿಗಂತ ರಂಗ ತಂಡದಿಂದ ಹಾಡುಗಳ ಪ್ರಸ್ತುತಿ ಮತ್ತು ಗಂಟೆ 7-00 ಕ್ಕೆ ಬೆಂಗಳೂರಿನ ಜಂಗಮ ಕಲೆಕ್ಟಿವ್ ಪ್ರಸ್ತುತ ಪಡಿಸುವ ಕೆ.ಪಿ. ಲಕ್ಷ್ಮಣ ರಚನೆ, ವಿನ್ಯಾಸ ಹಾಗೂ ನಿರ್ದೇಶನದ ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ ಎಂಬ ನಾಟಕ ಪ್ರದರ್ಶನ ನಡೆಯಲಿದೆ.

    ದಿನಾಂಕ 21-03-2024ರಂದು ಗಂಟೆ 9.30ಕ್ಕೆ ಸಾನಿಧ್ಯ ಆಡಿಟೋರಿಯಂನಲ್ಲಿ ‘ಪ್ರಯೋಗಗೊಂಡ ನಾಟಕದ ಚರ್ಚೆ’ ಮತ್ತು ‘ರಂಗ ತಜ್ಞರೊಂದಿಗೆ ಮಾತುಕತೆ’ ರಂಗ ಸಂವಾದಗಳು, 2-00 ಗಂಟೆಗೆ ಸಹೋದಯ ಆಡಿಟೋರಿಯಂನಲ್ಲಿ ಮಂಗಳೂರಿನ ಆಯನ ನಾಟಕದ ಮನೆ ಪ್ರಸ್ತುತ ಪಡಿಸುವ ಕೆ.ಪಿ. ಲಕ್ಷ್ಮಣ ವಿನ್ಯಾಸ ಹಾಗೂ ನಿರ್ದೇಶನದ ‘ದ್ವೀಪ’ ನಾಟಕ ಪ್ರದರ್ಶನ, ಗಂಟೆ 3-30ಕ್ಕೆ ಮದರ್ ಥೆರೆಸಾ ಪೀಸ್ ಪಾರ್ಕಿನಲ್ಲಿ ಬಯಲರಂಗ ಸಂಭ್ರಮಕ್ಕೆ ಸಿನೆಮಾ ಹಾಗೂ ರಂಗಭೂಮಿ ಕಲಾವಿದರಾದ ಅಚ್ಯುತ್ ಕುಮಾರ್ ಚಾಲನೆ ನೀಡಲಿದ್ದು, ಮೈಸೂರಿನ ರಿದಂ ಅಡ್ಡಾ ಇವರಿಂದ ‘ಲಯವಾದ್ಯ ಸಮ್ಮಿಳನ’ ಪ್ರಸ್ತುತಗೊಳ್ಳಲಿದೆ. ಸಂಜೆ ಗಂಟೆ 7.00ರಿಂದ ಎಲ್.ಸಿ.ಆರ್.ಐ. ಆಡಿಟೋರಿಯಂನಲ್ಲಿ ಶ್ವೇತಾರಾಣಿ ಎಚ್.ಕೆ. ನಿರ್ದೇಶನದಲ್ಲಿ ಚಿಕ್ಕಮಗಳೂರಿನ ಅಭಿನಯ ದರ್ಪಣ ಯುವವೇದಿಕೆಯವರು ಪ್ರಸ್ತುತ ಪಡಿಸುವ ‘ತಪ್ಪಿದ ಎಳೆ’ ನಾಟಕ ಪ್ರದರ್ಶನ ನಡೆಯಲಿದೆ.

    ದಿನಾಂಕ 22-03-2024ರಂದು ಗಂಟೆ 9.30ಕ್ಕೆ ಸಾನಿಧ್ಯ ಆಡಿಟೋರಿಯಂನಲ್ಲಿ ‘ಪ್ರಯೋಗಗೊಂಡ ನಾಟಕದ ಚರ್ಚೆ’ ಮತ್ತು ‘ಶಶಿಧರ ಅಡಪ ಅವರಿಂದ ರಂಗ ವಿನ್ಯಾಸ ಪ್ರಾತ್ಯಕ್ಷಿಕೆ, ಗಂಟೆ 2-30ಕ್ಕೆ ಸಹೋದಯ ಆಡಿಟೋರಿಯಂನಲ್ಲಿ ಬಿಜಾಪುರ ಸ್ಪಿನ್ನಿಂಗ್ ಟ್ರೀ ಥಿಯೇಟರ್ ಪ್ರಸ್ತುತ ಪಡಿಸುವ ಶಕೀಲ್ ಅಹ್ಮದ್ ವಿನ್ಯಾಸ ಹಾಗೂ ನಿರ್ದೇಶನದ ‘ಅನಾಮಿಕನ ಸಾವು’ ನಾಟಕ ಪ್ರದರ್ಶನ, 5-00 ಗಂಟೆಗೆ ಮದರ್ ಥೆರೆಸಾ ಪೀಸ್ ಪಾರ್ಕಿನಲ್ಲಿ ಮಂಗಳೂರಿನ ಜರ್ನಿ ಥಿಯೇಟರ್ ಇವರಿಂದ ರಂಗ ಸಂಗೀತ, ಸಂಜೆ ಗಂಟೆ 7.00ರಿಂದ ಎಲ್.ಸಿ.ಆರ್.ಐ. ಆಡಿಟೋರಿಯಂನಲ್ಲಿ ಮೈಸೂರಿನ ‘ನಾವು’ ಪ್ರಸ್ತುತ ಪಡಿಸುವ ‘ಪ್ರತಿರೋಧದ ಹಾಡುಗಳು’, ಅರುಣಲಾಲ್ ರಚನೆ ಮತ್ತು ನಿರ್ದೇಶನದಲ್ಲಿ ಶಾಲಾರಂಗ ನಿರ್ದಿಗಂತ ಪ್ರಸ್ತುತ ಪಡಿಸುವ ‘ಬ್ಲಾಕ್ ಬಲೂನ್’ ನಾಟಕ ಪ್ರದರ್ಶನ ನಡೆಯಲಿದೆ.

    ದಿನಾಂಕ 23-03-2024ರಂದು ಗಂಟೆ 9.30ಕ್ಕೆ ಸಾನಿಧ್ಯ ಆಡಿಟೋರಿಯಂನಲ್ಲಿ ‘ಪ್ರಯೋಗಗೊಂಡ ನಾಟಕದ ಚರ್ಚೆ’ ಮತ್ತು ‘ರಂಗ ತಜ್ಞರೊಂದಿಗೆ ಮಾತುಕತೆ’ ಮಕ್ಕಳ ರಂಗಭೂಮಿ ತಜ್ಞರಾದ ಐಕೆ. ಬೊಳುವಾರು ಇವರಿಂದ ರಂಗ ಸಂವಾದಗಳು, 2-00 ಗಂಟೆಗೆ ಎಲ್.ಸಿ.ಆರ್.ಐ. ಆಡಿಟೋರಿಯಂನಲ್ಲಿ ಉತ್ಸವ ಗೊನವಾರ ನಿರ್ದೇಶನದ ‘ಫೋಟೋ’ ಸಿನೆಮಾ ಪ್ರದರ್ಶನ, ‘ಸಿನೆಮಾ ನನ್ನ ಒಲವು ನಿಲುವುಗಳು’ ವಿಷಯದ ಬಗ್ಗೆ ಸಂವಾದ, 5-00 ಗಂಟೆಗೆ ಸಹೋದಯ ಆಡಿಟೋರಿಯಂನಲ್ಲಿ ಡಾ. ದಿನೇಶ್ ನಾಯಕ್ ಪರಿಕಲ್ಪನೆ ಮತ್ತು ವಿನ್ಯಾಸದ ‘ಗೃಹಭಂಗ’ ಯಕ್ಷ ರೂಪಕವನ್ನು ಮಂಗಳೂರಿನ ರಂಗ ಅಧ್ಯಯನ ಕೇಂದ್ರ ಸಂತ ಆಲೋಶಿಯಸ್ ಇವರಿಂದ ಹಾಗೂ 7-00 ಗಂಟೆಗೆ ಮಂಗಳೂರಿನ ಆಸ್ತಿತ್ವ (ರಿ.) ಇವರಿಂದ ಅರುಣ ಲಾಲ್ ನಿರ್ದೇಶನದಲ್ಲಿ ‘ಮತ್ತಾಯ 22:39’ ನಾಟಕ ಪ್ರಸ್ತುತಗೊಳ್ಳಲಿದೆ.

    ದಿನಾಂಕ 24-03-2024ರಂದು ಗಂಟೆ 9.30ಕ್ಕೆ ಸಾನಿಧ್ಯ ಆಡಿಟೋರಿಯಂನಲ್ಲಿ ‘ಪ್ರಯೋಗಗೊಂಡ ನಾಟಕದ ಚರ್ಚೆ’ ಸಂವಾದ, 11-00 ಗಂಟೆಗೆ ವಿಚಾರ ಸಂಕಿರಣ, ಸಂಜೆ ಗಂಟೆ 5.30ರಿಂದ ಮದರ್ ಥೆರೆಸಾ ಪೀಸ್ ಪಾರ್ಕಿನಲ್ಲಿ ಪಜೀರಿನ ಅವರ್ ಲೇಡಿ ಆಫ್ ಮರ್ಸಿ ಬ್ಯಾಂಡ್ ತಂಡದಿಂದ ‘ಕೊಂಕಣಿ ಬ್ರಾಸ್ ಬ್ಯಾಂಡ್’, ಗಂಟೆ 7-00ಕ್ಕೆ ಸಹೋದಯ ಆಡಿಟೋರಿಯಂನಲ್ಲಿ ಶ್ರವಣ ಹೆಗ್ಗೋಡು ನಿರ್ದೇಶನದಲ್ಲಿ ಮಂಗಳೂರಿನ ಕಲಾಭಿ ಪ್ರಸ್ತುತ ಪಡಿಸುವ ‘ಎ ಫ್ರೆಂಡ್ ಬಿಯಾಂಡ್ ದಿ ಫೆನ್ಸ್’ ನಾಟಕ ಪ್ರದರ್ಶನ ನಡೆಯಲಿದೆ.

    ದಿನಾಂಕ 25-03-2024ರಂದು ಗಂಟೆ 9.30ಕ್ಕೆ ಸಾನಿಧ್ಯ ಆಡಿಟೋರಿಯಂನಲ್ಲಿ ‘ಪ್ರಯೋಗಗೊಂಡ ನಾಟಕದ ಚರ್ಚೆ’ ಮತ್ತು ‘ರಂಗ ತಜ್ಞರೊಂದಿಗೆ ಮಾತುಕತೆ’ ಕವಿಗಳು ಮತ್ತು ನಾಟಕಕಾರರು ಸುಧಾ ಆಡುಕಳ ಇವರಿಂದ ರಂಗ ಸಂವಾದಗಳು, ಗಂಟೆ 2-30ಕ್ಕೆ ರಂಗಭೂಮಿಯ ವರ್ತಮಾನ : ಮಾತುಕತೆ, ಗಂಟೆ 5-30ಕ್ಕೆ ಮದರ್ ಥೆರೆಸಾ ಪೀಸ್ ಪಾರ್ಕಿನಲ್ಲಿ ‘ಬಹು ವಾದ್ಯಗಳ ನುಡಿ ನಡಿಗೆ’, 7-00 ಗಂಟೆಗೆ ಎಲ್.ಸಿ.ಆರ್.ಐ. ಆಡಿಟೋರಿಯಂನಲ್ಲಿ ‘ನಿರ್ದಿಗಂತ’ ಇವರಿಂದ ಡಾ. ಶ್ರೀಪಾದ ಭಟ್ ನಿರ್ದೇಶನದಲ್ಲಿ ‘ಮಂಟೇಸ್ವಾಮಿ ಕಾವ್ಯ ಪ್ರಯೋಗ’ ನಾಟಕ ಪ್ರಸ್ತುತಗೊಳ್ಳಲಿದೆ.

    ನಿರ್ದಿಗಂತದ ಕುರಿತು :
    ಮೈಸೂರಿಗೆ ಸಮೀಪದಲ್ಲಿರುವ ಶ್ರೀರಂಗಪಟ್ಟಣದ ಕೆ. ಶೆಟ್ಟಿಹಳ್ಳಿ ಎನ್ನುವ ಗ್ರಾಮದಲ್ಲಿ ಲೋಕಪಾವನಿ ನದಿ ದಂಡೆಯ ಮೇಲೆ ನೆಲೆ ನಿಂತಿರುವ ನಿರ್ದಿಗಂತವು ರಂಗಭೂಮಿಯ ಕಾವುಗೂಡಾಗಿ ಮೈತಳೆದಿದೆ. ರಂಗಭೂಮಿಯನ್ನೂ ಒಳಗೊಂಡಂತೆ ಹಲವು ಬಗೆಯ ಸೃಜನಾತ್ಮಕ ಕ್ರಿಯೆಗಳ ಪೋಷಣೆಗೆ ಅಗತ್ಯವಾದ ಪರಿಸರ ಹಾಗೂ ಪರಿಕರಗಳ ಸೌಲಭ್ಯ ಹೊಂದಿರುವ ನಿರ್ದಿಗಂತವು ಈಗಾಗಲೇ ಯುವ ರಂಗಕಲಾವಿದರಿಗಾಗಿ ನಡೆದ ರಂಗಕಾರ್ಯಾಗಾರದ ನಾಟಕದ ಲೋಕಸಂಚಾರ, ಕಾಲೇಜು ವಿದ್ಯಾರ್ಥಿಗಳೆಡೆ ರಂಗಭೂಮಿಯನ್ನು ಒಯ್ಯುವ ಕಾವ್ಯರಂಗ ಸಂಚಾರ, ಶಿಕ್ಷಣ ಹಾಗೂ ರಂಗಭೂಮಿಯ ಸಮಾಸದ ಯತ್ನದಲ್ಲಿ ನಡೆಸುತ್ತಿರುವ ಶಾಲಾರಂಗ ಸಂಚಾರ ಹೀಗೆ ಹಲವು ಯೋಜನೆಗಳಲ್ಲಿ ತೊಡಗಿಕೊಂಡಿದೆ. ಹಲವು ರಂಗಪ್ರಯೋಗಗಳನ್ನೂ, ರಾಷ್ಟ್ರೀಯ, ಅಂತರಾಷ್ಟ್ರೀಯ ಕಾರ್ಯಾಗಾರಗಳನ್ನೂ, ಉಪನ್ಯಾಸ ಪ್ರಾತ್ಯಕ್ಷಿಕೆಗಳನ್ನೂ ಸಂಘಟಿಸಿದೆ.

    ನೇಹದ ನೇಯ್ಗೆ :
    ನಿರ್ದಿಗಂತ ರಂಗೋತ್ಸವದ ಶೀರ್ಷಿಕೆ ಇದು. ‘ನೇಹ’ ಪದವು ಸಂವಿಧಾನದ ಪೀಠಿಕೆಯಲ್ಲಿಯ ಮೈತ್ರಿ ಪದದಿಂದ ಪ್ರೇರಿತವಾಗಿದ್ದರೆ, ‘ನೇಯ್ದೆ’ ಪದವು ರಂಗಕಾರ್ಯಗಳ ಕಟ್ಟುವಿಕೆ, ಭಿನ್ನ ಕಾಲ ದೇಶಗಳ ಸಹೋದರತೆಯ ಹೆಣೆಯುವಿಕೆ ಮುಂತಾದ ಅರ್ಥಗಳನ್ನು ಹೊಂದಿದೆ. ನಾಟಕವೆಂದರೆ ಹಲವು ಸೌಂದರ್ಯ ವಿಜ್ಞಾನಗಳ ನೇಯ್ಗೆಯೂ ಆಗಿದೆ.

    ಈ ರಂಗೋತ್ಸವದಲ್ಲಿ ಸ್ಥಳೀಯ ಜನಪದ ಮಹಾಕಾವ್ಯದ ನಾಯಕ ಮಂಟೇಸ್ವಾಮಿ, ಫುಟ್ಬಾಲ್ ಆಟಗಾರ ಓಝಿಲ್, ಹಾಡುಗಾರ ಬಾಬ್ ಮಾರ್ಲೆ, ಬರಹಗಾರ ಕಾಮು ಮುಂತಾದ ಹಲವರ ಕಥನಗಳು ನಾಟಕವಾಗಿ ಮೈದಾಳಲಿವೆ. ಜನಪದ ಹಾಡುಗಳ ಜತೆ ಪ್ರತಿಭಟನೆಯ ಹಾಡುಗಳೂ ಸೇರಿಕೊಳ್ಳಲಿದೆ. ಪ್ರೊಸೀನಿಯಂ ನಾಟಕಗಳ ಜತೆ ಬೀದಿನಾಟಕಗಳೂ, ಸಂಗೀತ ಪ್ರಯೋಗಗಳೂ, ಪಪೆಟ್‌ಗಳೂ ಒಟ್ಟಂದದಲ್ಲಿ ಎಲ್ಲವೂ ಸೇರಿಕೊಂಡು ಪ್ರಯೋಗಗೊಳ್ಳಲಿದೆ. ಹೀಗೆ ಹಲವು ಮನಸುಗಳ, ನಾಡುಗಳ, ಕನಸುಗಳ, ಪ್ರಕಾರಗಳ ನೇಯ್ಗೆಯಿದು. ಒಟ್ಟೂ ಸೇರುವುದರಲ್ಲಿಯೇ ಈ ಛಂದವಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನ ಪುರಭವನದಲ್ಲಿ ದ.ಕ. ಜಿಲ್ಲಾ ‘ಕನ್ನಡ ಸಾಹಿತ್ಯ ಸಮ್ಮೇಳನ’ | ಮಾರ್ಚ್ 23 ಮತ್ತು 24
    Next Article ಕನ್ನಡ ಸಾಹಿತ್ಯ ಪರಿಷತ್ತಿನ ‘ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ’ ಪ್ರಶಸ್ತಿ ಪ್ರದಾನ
    roovari

    Add Comment Cancel Reply


    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಖ್ಯಾತ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ನಿಧನ

    May 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.