Subscribe to Updates

    Get the latest creative news from FooBar about art, design and business.

    What's Hot

    ಮಂಗಲಂ ಕೋಸಲೇಂದ್ರಾಯ ರಾಮಾಯಣ ಉಪನ್ಯಾಸ ಮಾಲೆಯ ಕೊನೆಯ ಕಾರ್ಯಕ್ರಮ

    December 19, 2025

    ಶಿವಮೊಗ್ಗದಲ್ಲಿ 244ನೇ ‘ಸಾಹಿತ್ಯ ಹುಣ್ಣಿಮೆ’ಯಲ್ಲಿ ಸಾಹಿತ್ಯ ಸಂಭ್ರಮ | ಡಿಸೆಂಬರ್ 20

    December 19, 2025

    ಎಸ್.ವಿ. ನಾರಾಯಣಸ್ವಾಮಿ ರಾವ್ ಇವರ ಜನ್ಮ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ | ಡಿಸೆಂಬರ್ 21

    December 19, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರಿನ ಕೆನರಾ ಪದವಿಪೂರ್ವ ಕಾಲೇಜಿನಲ್ಲಿ ‘ನೀನಾಸಂ ತಿರುಗಾಟ ನಾಟಕೋತ್ಸವ’ | ಡಿಸೆಂಬರ್ 23 ಮತ್ತು 24
    Drama

    ಮಂಗಳೂರಿನ ಕೆನರಾ ಪದವಿಪೂರ್ವ ಕಾಲೇಜಿನಲ್ಲಿ ‘ನೀನಾಸಂ ತಿರುಗಾಟ ನಾಟಕೋತ್ಸವ’ | ಡಿಸೆಂಬರ್ 23 ಮತ್ತು 24

    December 19, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಅರೆಹೊಳೆ ಪ್ರತಿಷ್ಠಾನ, ನಂದಗೋಕುಲ, ಅಸ್ತಿತ್ವ (ರಿ.) ಮಂಗಳೂರು, ರಂಗಸಂಗಾತಿ ಮಂಗಳೂರು, ಕೆನರಾ ಕಲ್ಚರ್ ಅಕಾಡೆಮಿ ಮತ್ತು ರೂವಾರಿ. ಕಾಂ ಇವರ ಸಹಕಾರದೊಂದಿಗೆ ಆಯೋಜಿಸುತ್ತಿರುವ ‘ನೀನಾಸಂ ತಿರುಗಾಟ ನಾಟಕೋತ್ಸವ 2025’ವು ದಿನಾಂಕ 23 ಮತ್ತು 24 ಡಿಸೆಂಬರ್ 2025ರಂದು ಪ್ರತಿದಿನ ಸಂಜೆ ಗಂಟೆ 6-45ಕ್ಕೆ ಮಂಗಳೂರಿನ ಕೆನರಾ ಪದವಿಪೂರ್ವ ಕಾಲೇಜಿನ ಬಯಲು ರಂಗಮಂಟಪದಲ್ಲಿ ನಡೆಯಲಿದೆ.

    ದಿನಾಂಕ 23 ಡಿಸೆಂಬರ್ 2025ರಂದು ಖ್ಯಾತ ಲೇಖಕಿ ಬಾನು ಮುಷ್ತಾಕ್ ಇವರ ಕತೆಯಾಧಾರಿಸಿ ಡಾ. ಎಂ. ಗಣೇಶ್ ನಿರ್ದೇಶಿಸಿದ ‘ಹೃದಯದ ತೀರ್ಪು’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.
    ದಿನಾಂಕ 24 ಡಿಸೆಂಬರ್ 2025ರಂದು ಮಲೆಯಾಳ ಮೂಲ ಜಿ. ಶಂಕರ್ ಪಿಳ್ಳೈ ರಚಿಸಿದ, ಡಾ. ನಾ. ದಾಮೋದರ ಶೆಟ್ಟಿ ಕನ್ನಡಕ್ಕೆ ಅನುವಾದಿಸಿ, ಶಂಕರ್ ವೆಂಕಟೇಶ್ವರ್ ನಿರ್ದೇಶಿಸಿದ ‘ಅವತರಣಮ್ ಭ್ರಾಂತಾಲಯಂ’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.

    ಎರಡೂ ವಿಭಿನ್ನ ನಾಟಕಗಳು ರಾಜ್ಯಾದ್ಯಂತ ಸಾಕಷ್ಟು ಸುದ್ದಿ ಮಾಡಿದ ರಂಗಪ್ರಯೋಗಗಳು.
    ‘ಹೃದಯದ ತೀರ್ಪು’ ನಾಟಕದಲ್ಲಿ ಒಂದು ಸಾಂಸಾರಿಕ ವೃತ್ತಾಂತವೇ ಚಿತ್ರಿತವಾಗಿದೆ. ಮುಖ್ಯವಾಗಿ ತಾಯಿ, ಮಗ, ಸೊಸೆ, ಊರವರ ಮಧ್ಯೆ ನಡೆಯುವ ತಲ್ಲಣಗಳು ಹಾಗೂ ಭಾವನಾತ್ಕಕ ಸನ್ನಿವೇಶಗಳಿಂದ ಕೂಡಿದ ಈ ನಾಟಕ ಮುಸ್ಲಿಂ ಸಮುದಾಯದ ಸಾಂಸ್ಕೃತಿಕ ಪರಿಸರದೊಳಗೇ ಸಾಗುತ್ತಿದ್ದರೂ ಆ ಎಲ್ಲೆಗಳನ್ನು ಮೀರಿ ಹೆಣ್ಣಿನ ಒಳ ನೋಟಗಳ ಮುಖಾಂತರ ಅನನ್ಯವಾದ ಮಾನವೀಯ ಬಿಕ್ಕಟ್ಟುಗಳನ್ನು ಚಿತ್ರಿಸುತ್ತಾ ಸಾಗುವ ಈ ರಂಗಪ್ರಸ್ತುತಿ ನೋಡುಗನ ಹೃದಯ ತಟ್ಟುತ್ತದೆ.

    ಹುಚ್ಚಾಸ್ಪತ್ರೆಯ ರೋಗಿಗಳೇ ಸೇರಿ ಪ್ರಸ್ತುತಪಡಿಸುವ ನಾಟಕ ‘ಅವತರಣಮ್ ಭ್ರಾಂತಾಲಯಂ’. ಹಾಗಂತ ಇದು ಹುಚ್ಚರ ಕುರಿತ ನಾಟಕವಲ್ಲ. ಇಲ್ಲಿ ನಟರು ನಿರ್ದೇಶಕನಿಗೇ ಅರೆವಳಿಕೆ ಕೊಟ್ಟು ಮಲಗಿಸುತ್ತಾರಾಗಿ ರಂಗಭೂಮಿಯೇ ರಂಗಭೂಮಿಯ ನಿಯಂತ್ರಣದ ವಿರುದ್ಧ ಬಂಡೇಳುತ್ತದೆ. ನಟರ ಚುರುಕು ನಡೆಯ ಅಭಿನಯ, ವಿಡಂಬನಾತ್ಮಕ ಗಂಭೀರ ಮಾತುಗಳು ನಗುವಿನ ಬುಗ್ಗೆ ಎಬ್ಬಿಸುತ್ತದೆ. ರಂಗಭೂಮಿಯೆಂಬ ಬೃಹತ್ ಕನ್ನಡಿಯಲ್ಲಿ ನಮ್ಮನ್ನು ನಾವೇ ನೋಡಿಕೊಳ್ಳುವಂತೆ ಮಾಡುತ್ತದೆ.

    baikady drama roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಕೊಡವ ಕವನ ಸಂಕಲನಕ್ಕೆ ಸ್ವರಚಿತ ಕವನಗಳ ಆಹ್ವಾನ | ಕೊನೆಯ ದಿನಾಂಕ ಡಿಸೆಂಬರ್ 31
    Next Article ಎಸ್.ವಿ. ನಾರಾಯಣಸ್ವಾಮಿ ರಾವ್ ಇವರ ಜನ್ಮ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ | ಡಿಸೆಂಬರ್ 21
    roovari

    Add Comment Cancel Reply


    Related Posts

    ಮಂಗಲಂ ಕೋಸಲೇಂದ್ರಾಯ ರಾಮಾಯಣ ಉಪನ್ಯಾಸ ಮಾಲೆಯ ಕೊನೆಯ ಕಾರ್ಯಕ್ರಮ

    December 19, 2025

    ಶಿವಮೊಗ್ಗದಲ್ಲಿ 244ನೇ ‘ಸಾಹಿತ್ಯ ಹುಣ್ಣಿಮೆ’ಯಲ್ಲಿ ಸಾಹಿತ್ಯ ಸಂಭ್ರಮ | ಡಿಸೆಂಬರ್ 20

    December 19, 2025

    ಎಸ್.ವಿ. ನಾರಾಯಣಸ್ವಾಮಿ ರಾವ್ ಇವರ ಜನ್ಮ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ | ಡಿಸೆಂಬರ್ 21

    December 19, 2025

    ಕೊಡವ ಕವನ ಸಂಕಲನಕ್ಕೆ ಸ್ವರಚಿತ ಕವನಗಳ ಆಹ್ವಾನ | ಕೊನೆಯ ದಿನಾಂಕ ಡಿಸೆಂಬರ್ 31

    December 19, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.