Subscribe to Updates

    Get the latest creative news from FooBar about art, design and business.

    What's Hot

    ಹಿಮಾಂಗಿ ಡಿ. ಉಳ್ಳಾಲ ಇವರು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ

    January 10, 2026

    ಏಳು ಮಂದಿ ಸಾಧಕರಿಗೆ ಹಾಗೂ ಒಂದು ಸಂಸ್ಥೆಗೆ ‘ಸಂದೇಶ ಪ್ರಶಸ್ತಿ’ ಪ್ರಕಟ

    January 10, 2026

    ಕುಂಜತ್ತೂರಿನ ಶ್ರೀ ಮಾತಾ ಕಲಾಲಯ ಸಭಾಂಗಣದಲ್ಲಿ ಕಲಾಕುಂಚದ ವಾರ್ಷಿಕೋತ್ಸವ

    January 10, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಗಂಗಾ ಪಾದೆಕಲ್ಲು ಇವರಿಗೆ “ನಿರಂಜನ ಪ್ರಶಸ್ತಿ” 
    Literature

    ಗಂಗಾ ಪಾದೆಕಲ್ಲು ಇವರಿಗೆ “ನಿರಂಜನ ಪ್ರಶಸ್ತಿ” 

    March 29, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    29 ಮಾರ್ಚ್ 2023, ಪುತ್ತೂರು: ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಶಿವರಾಮ ಕಾರಂತ ಅಧ್ಯಯನ ಕೇಂದ್ರ ಕೊಡಮಾಡುವ ನಿರಂಜನ ಪ್ರಶಸ್ತಿಗೆ ಕತೆ ಹಾಗೂ ಕಾದಂಬರಿಗಾರ್ತಿ ಗಂಗಾ ಪಾದೇಕಲ್ಲು ಆಯ್ಕೆಯಾಗಿದ್ದಾರೆ. ಪ್ರಶಸ್ತಿಗೆ 15 ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಮತಿ ಕಲ್ಲೂರಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    1948ರ ಸೆಪ್ಟೆಂಬರ್ 1ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಜನಿಸಿದ ಗಂಗಾ ಪಾದೇಕಲ್ಲು ಅವರ ಮೂಲ ಹೆಸರು ಗಂಗಾರತ್ನ. ತಂದೆ ಮುಳಿಯ ಕೇಶವ ಭಟ್ಟ, ತಾಯಿ ಸರಸ್ವತಿ ಅಮ್ಮ. ಏಳನೇ ತರಗತಿವರೆಗೆ ಓದಿದ ಗಂಗಾ ಅವರು 16ನೇ ವಯಸ್ಸಿನಲ್ಲಿ ಇವರ ವಿವಾಹ ಪಾದೇಕಲ್ಲು ಗೋವಿಂದ ಭಟ್ಟರೊಂದಿಗೆ ಆಯಿತು. ಈಗ ಇವರಿಗೆ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. 34ನೇ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡ ಗಂಗಾ, ಸಾಹಿತ್ಯ ಚಟುವಟಿಕೆ ಮೂಲಕ ಹೆಸರು ಗಳಿಸಿದರು.

    “ಪುಲಪೇಡಿ ಮತ್ತು ಇತರ ಕತೆಗಳು”, “ಹೆಜ್ಜೆ ಮೂಡದ ಹಾದಿಯಲ್ಲಿ”, “ಹೊಸ ಹೆಜ್ಜೆ”, “ವಾಸ್ತವ”, “ಕ್ಷಮಯಾ ಧರಿತ್ರಿ”, “ನೆಲೆ ತಪ್ಪಿದ ಹಕ್ಕಿ”, “ಮನ್ನಣೆಯ ದಾಹ”, “ಈ ಪ್ರಜಾ ರಾಜ್ಯದಲ್ಲಿ”, “ಸಂಕ್ರಮಣ”, “ಚಿನ್ನದ ಸೂಜಿ” ಇವು ಇವರ ಕಥಾಸಂಕಲನಗಳು, “ಹೊನ್ನಳ್ಳಿಯಲ್ಲೊಮ್ಮೆ”, “ಸೆರೆಯಿಂದ ಹೊರಗೆ”, “ಪಯಣದ ಹಾದಿಯಲ್ಲಿ”, “ಮೌನರಾಗಗಳು”, “ಅದೃಷ್ಟ ರೇಖೆ”, “ಕನಕಾಂಬರಿ”, “ಸೆರಗಿನ ಕೆಂಡ”, “ಇನ್ನೊಂದು ಅಧ್ಯಾಯ”, “ಬಂಗಾರದ ಜಿಂಕೆ ಹಿಂದೆ” ಇವು ಕಾದಂಬರಿಗಳು. “ಆಯ್ದ ಕತೆಗಳು”, “ಪ್ರತಿಬಿಂಬ”, “ಮುಳಿಯ ಮೂಕಾಂಬಿಕೆ”, “ಏರ್ಯ ಚಂದ್ರಭಾಗಿ ರೈ” ಇವು ಸಂಪಾದಿತ ಕೃತಿಗಳು. “ಸೆರೆಯಿಂದ ಹೊರಗೆ” ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ “ಮಲ್ಲಿಕಾ ಪ್ರಶಸ್ತಿ”, “ಇನ್ನೊಂದು ಅಧ್ಯಾಯ” ಕಾದಂಬರಿಗೆ ವನಿತಾ ಕಾದಂಬರಿ ಸ್ಪರ್ಧೆಯಲ್ಲಿ ಬಹುಮಾನ, ಕೃಷ್ಣಬಾಯಿ ದತ್ತಿನಿಧಿ ಪ್ರಶಸ್ತಿ, ನೀರ್ಪಾಜೆ ಭೀಮಭಟ್ಟ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ಪುಲಪೇಡಿ ಕತೆಯಾಧಾರಿತ ರೇಡಿಯೋ ನಾಟಕಕ್ಕೆ ರಾಷ್ಟ್ರೀಯ ನಾಟಕೋತ್ಸವದಲ್ಲಿ ಮೊದಲ ಬಹುಮಾನ ದೊರೆತಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಕಾ.ವೀ.ಕೃಷ್ಣದಾಸ್ ಅವರ ‘ದಿ ಡಿವೋಷನ್’ ಇಂಗ್ಲಿಷ್ ಹಾಯ್ಕು ಸಂಕಲನ ಲೋಕಾರ್ಪಣೆ
    Next Article “ಮನದನಿ” ಕಾರ್ಯಕ್ರಮದಲ್ಲಿ ಲೇಖಕಿ ಬಿ.ಎಂ.ರೋಹಿಣಿ ಯವರಿಗೆ ಸನ್ಮಾನ
    roovari

    Add Comment Cancel Reply


    Related Posts

    ಏಳು ಮಂದಿ ಸಾಧಕರಿಗೆ ಹಾಗೂ ಒಂದು ಸಂಸ್ಥೆಗೆ ‘ಸಂದೇಶ ಪ್ರಶಸ್ತಿ’ ಪ್ರಕಟ

    January 10, 2026

    ಕುಂಜತ್ತೂರಿನ ಶ್ರೀ ಮಾತಾ ಕಲಾಲಯ ಸಭಾಂಗಣದಲ್ಲಿ ಕಲಾಕುಂಚದ ವಾರ್ಷಿಕೋತ್ಸವ

    January 10, 2026

    ಲೇಖಕಿ ರಮ್ಯ ಎಸ್. ರವರಿಗೆ ‘ಚಡಗ ಕಾದಂಬರಿ ಪ್ರಶಸ್ತಿ’ ಪ್ರದಾನ

    January 10, 2026

    ತುಳು ಭವನದಲ್ಲಿ ಕೆ. ಅನಂತರಾಮ ಬಂಗಾಡಿ ಸಂಸ್ಮರಣಾ ಗೋಷ್ಠಿ ಹಾಗೂ ಯಕ್ಷಗಾನ | ಜನವರಿ 11

    January 9, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.