Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರಿಗೆ ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿ ಪ್ರಧಾನ

    May 12, 2025

    ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ವಿಶ್ವಾವಸು ನಾಟಕ ಪ್ರಾರಂಭೋತ್ಸವ | ಮೇ 17 ಮತ್ತು 18

    May 12, 2025

    ಶ್ರೀ ಆಂಜನೇಯ ಮಂತ್ರಾಲಯದಲ್ಲಿ ಪಾಕ್ಷಿಕ ತಾಳಮದ್ದಳೆ

    May 12, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ‘ನಿರ್ದಿಗಂತ ಉತ್ಸವ 2025’ | ಫೆಬ್ರವರಿ 28ರಿಂದ ಮಾರ್ಚ್ 03
    Drama

    ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ‘ನಿರ್ದಿಗಂತ ಉತ್ಸವ 2025’ | ಫೆಬ್ರವರಿ 28ರಿಂದ ಮಾರ್ಚ್ 03

    February 24, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಪ್ರಕಾಶ್ ರಾಜ್ ಫೌಂಡೇಷನ್ ವತಿಯಿಂದ ಮಂಗಳೂರು ‘ನಿರ್ದಿಗಂತ ಉತ್ಸವ 2025’ ಕಾರ್ಯಕ್ರಮವನ್ನು ದಿನಾಂಕ 28 ಫೆಬ್ರವರಿ 2025ರಿಂದ 03 ಮಾರ್ಚ್ 2025ರವರೆಗೆ ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಕಾಲೇಜಿನಲ್ಲಿ ಆಯೋಜಿಸಲಾಗಿದೆ.

    ದಿನಾಂಕ 28 ಫೆಬ್ರವರಿ 2025ರಂದು 9-30 ಗಂಟೆಗೆ ಈ ಕಾರ್ಯಕ್ರಮವು ರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಮತ್ತು ಪ್ರಕಾಶ್ ರಾಜ್ ಇವರಿಂದ ಉದ್ಘಾಟನೆಗೊಳ್ಳಲಿದೆ. 10-30 ಗಂಟೆಗೆ ಪುರುಷೋತ್ತಮ ಬಿಳಿಮಲೆ ಇವರಿಂದ ಆಶಯ ಭಾಷಣ, 12-00 ಗಂಟೆಗೆ ಶಕೀಲ್ ಅಹ್ಮದ್ ಇವರ ನಿರ್ದೇಶನದಲ್ಲಿ ಬಿಜಾಪುರದ ಸ್ಪಿನ್ನಿಂಗ್ ಟ್ರೀ ಥಿಯೇಟರ್ ತಂಡದವರಿಂದ ‘ಫಾರ್ ಎ ಬ್ರೈಟ್ ಆಫ್ ಫುಡ್’ ನಾಟಕ ಪ್ರದರ್ಶನ, 3-00 ಗಂಟೆಗೆ ಮಂಗಳೂರಿನ ಯಕ್ಷಮಿತ್ರರು ತಂಡದವರಿಂದ ‘ಕೋಟಿ ಚೆನ್ನಯ್ಯ’ ಯಕ್ಷಗಾನ, 4-00 ಗಂಟೆಗೆ ಡಾ. ಗಣನಾಥ ಎಕ್ಕಾರು ಇವರಿಂದ ‘ಬದಲಾಗುತ್ತಿರುವ ಯಕ್ಷಗಾನದ ಸ್ವರೂಪ’ ಎಂಬ ವಿಷಯದ ಬಗ್ಗೆ ಉಪನ್ಯಾಸ, 5-30 ಗಂಟೆಗೆ ಸಂತ ಅಲೋಶಿಯಸ್ ಕಾಲೇಜು ‘ಕಾಲೇಜ್ ಬ್ಯಾಂಡ್ ಜ್ಯಾಮಿಂಗ್’ ಮತ್ತು 7-00 ಗಂಟೆಗೆ ಧಾರವಾಡ ಆಟಮಾಟ ತಂಡದವರಿಂದ ‘ಗುಡಿಯ ನೋಡಿರಣ್ಣ’ ನಾಟಕ ಪ್ರದರ್ಶನ ನಡೆಯಲಿದೆ.

    ದಿನಾಂಕ 01 ಮಾರ್ಚ್ 2025ರಂದು 9-30 ಗಂಟೆಗೆ ಹಿಂದಿನ ದಿನದ ನಾಟಕಗಳ ಚರ್ಚೆ, 10-30 ಗಂಟೆಗೆ ‘ಕರಾವಳಿಯ ಭಾಷಾ ಸಂಬಂಧದ ಕೊಡುಕೊಳ್ವೆಯ ಸ್ವರೂಪ’ ಎಂಬ ವಿಷಯ ಬಗ್ಗೆ ಡಾ. ಮೋಹನ್ ಕುಂಟಾರ್ ಇವರಿಂದ ಉಪನ್ಯಾಸ, 12-00 ಗಂಟೆಗೆ ಕ್ಲೆನ್ವಿನ್ ನಿರ್ದೇಶನದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದವರಿಂದ ‘ಹ್ಯಾಂಗಾನ್’ ಕೊಂಕಣಿ ನಾಟಕ, 3-00 ಗಂಟೆಗೆ ಬಂಟ್ವಾಳದ ಶಾರದಾ ಜಿ. ಬಂಗೇರ ಇವರಿಂದ ಪಾಡ್ದಾನ, ಐರಿನ್ ರೆಬೆಲ್ಲೊ ಮತ್ತು ತಂಡದವರಿಂದ ‘ವೊವಿಯೊ’, ಪೂಜ್ಯ ಸೇಸು ಗೌಡ ಕಲಾ ಟ್ರಸ್ಟ್ ಇವರಿಂದ ಕುಡುಬಿ ಹಾಡುಗಳು, 4-00 ಗಂಟೆಗೆ ‘ಸ್ಥಳೀಯ ಚರಿತ್ರೆಗಳು ಮತ್ತು ಕುಸಿಯುತ್ತಿರುವ ಬಹುತ್ವದ ನೆಲೆ’ ಎಂಬ ವಿಷಯದ ಬಗ್ಗೆ ವೆಂಕಟರಮಣ ಐತಾಳ್ ಇವರಿಂದ ಉಪನ್ಯಾಸ, 5-30ಕ್ಕೆ ನಿರ್ದಿಗಂತ ತಂಡದವರಿಂದ ‘ಸಮತೆಯ ಹಾಡುಗಳು’, ಸಂಜೆ 7-00 ಗಂಟೆಗೆ ಅರುಣ್ ಲಾಲ್ ಇವರ ನಿರ್ದೇಶನದಲ್ಲಿ ಕೇರಳದ ಲಿಟಲ್ ಅರ್ತ್ ಸ್ಕೂಲ್ ಆಫ್ ಥಿಯೇಟರ್ ಇವರಿಂದ ‘ಕೂಹೂ ; ಆಂತಾಲಜಿ ಆನ್ ದ ರೈಲ್ಸ್’ ಮಲಯಾಳಂ ನಾಟಕ ಪ್ರದರ್ಶನಗೊಳ್ಳಲಿದೆ.

    ದಿನಾಂಕ 02 ಮಾರ್ಚ್ 2025ರಂದು 9-30 ಗಂಟೆಗೆ ಹಿಂದಿನ ದಿನದ ನಾಟಕಗಳ ಚರ್ಚೆ, 10-30 ಗಂಟೆಗೆ ನರೇಂದ್ರ ರೈ ದೇರ್ಲ ಇವರಿಂದ ‘ಜೀವ ಸಂರಕ್ಷಣೆ ಮತ್ತು ಆಚರಣಾ ಲೋಕ’ ಎಂಬ ವಿಷಯದ ಬಗ್ಗೆ ಉಪನ್ಯಾಸ, 12-00 ಗಂಟೆಗೆ ನಿರ್ದಿಗಂತ ತಂಡದಿಂದ ಸವಿತಾ ರಾಣಿ ಇವರ ನಿರ್ದೇಶನದಲ್ಲಿ ‘ರಸೀದಿ ಟಿಕೇಟ್’ ನಾಟಕ, 3-00 ಗಂಟೆಗೆ ಫಾತಿಮಾ ರಲಿಯ, ವಿಲ್ಸನ್ ಕಟೀಲ್, ಸಚಿನ್ ಅಂಕೋಲ ಇವರಿಂದ ‘ಕಥಾ ಕಾವ್ಯ ಕಾರಣ’, 4-00 ಗಂಟೆಗೆ ‘ಕರಾವಳಿಯ ಸೃಜನಶೀಲತೆಯ ಸ್ವರೂಪ’ ಎಂಬ ವಿಷಯದ ಬಗ್ಗೆ ಶ್ರೀನಿವಾಸ ಗಿಳಿಯಾರು ಇವರಿಂದ ಉಪನ್ಯಾಸ, 5-30 ಗಂಟೆಗೆ ಉಡುಪಿಯ ಸಾವಿತ್ರಿ ಬಾಯಿ ಫುಲೆ ಸಾಂಸ್ಕೃತಿಕ ಕಲಾತಂಡದವರಿಂದ ಕೊರಗರ ಡೋಲು ಮತ್ತು ಕುಡುಬಿ ನೃತ್ಯ, 7-00 ಗಂಟೆಗೆ ನಿರ್ದಿಗಂತ ತಂಡದವರಿಂದ ಶಕೀಲ್ ಅಹ್ಮದ್ ಇವರ ನಿರ್ದೇಶನದಲ್ಲಿ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ ಪ್ರದರ್ಶನ.

    ದಿನಾಂಕ 03 ಮಾರ್ಚ್ 2025ರಂದು 2025ರಂದು 9-30 ಗಂಟೆಗೆ ಹಿಂದಿನ ದಿನದ ನಾಟಕಗಳ ಚರ್ಚೆ, 10-30 ಗಂಟೆಗೆ ‘ಕರಾವಳಿ ಸಂಸ್ಕೃತಿಯಲ್ಲಿ ಸ್ತ್ರೀ ಲೋಕದೃಷ್ಠಿ’ ಎಂಬ ವಿಷಯದ ಬಗ್ಗೆ ಡಾ. ಇಂದಿರಾ ಹೆಗ್ಡೆ ಇವರಿಂದ ಉಪನ್ಯಾಸ, 12-00 ಗಂಟೆಗೆ ಸುಮನಸ ಕೊಡವೂರು ಇವರಿಂದ ವಿದ್ದು ಉಚ್ಚಿಲ್ ಇವರ ನಿರ್ದೇಶನದಲ್ಲಿ ‘ಈದಿ’ ತುಳು ನಾಟಕ, 3-00 ಗಂಟೆಗೆ ಸಂಸಾರ ಪುತ್ತೂರು ತಂಡದವರಿಂದ ‘ನಾವು ಯಾವಾಗ ಬದಲಾಗುತ್ತೇವೆ’ ಮತ್ತು ಸಂಸಾರ ಜೋಡುಮಾರ್ಗ ತಂಡದವರಿಂದ ‘ಈಗ ಹೇಳಿ .. ನಾವೇನ್ಮಾದೋಣ..?’ ಬೀದಿ ನಾಟಕ ಪ್ರದರ್ಶನ, 4-00 ಗಂಟೆಗೆ ವಿದ್ದು ಉಚ್ಚಿಲ್ ಇವರಿಂದ ‘ವರ್ತಮಾನದ ಕರಾವಳಿ ರಂಗಭೂಮಿ’ ಎಂಬ ವಿಷಯದ ಬಗ್ಗೆ ಉಪನ್ಯಾಸ, 5-30 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಪಾರ್ವತಿ ತಿರುವೊತ್ತು ಮತ್ತು ಪ್ರಕಾಶ್ ರಾಜ್ ಇವರಿಂದ ‘ನಾರ್ತ್ ಈಸ್ಟ್ ಬ್ರಾಸ್ ಬ್ಯಾಂಡ್ ವೇಷ ಕುಣಿತ’, 7-00 ಗಂಟೆಗೆ ನಿರ್ದಿಗಂತ ತಂಡದವರಿಂದ ಅಮಿತ್ ರೆಡ್ಡಿ ಇವರ ನಿರ್ದೇಶನದಲ್ಲಿ ‘ಮೈ ಮನಗಳ ಸುಳಿಯಲ್ಲಿ’ ನಾಟಕ ಪ್ರದರ್ಶನ ನಡೆಯಲಿದೆ.

    drama folk Literature Music yakshagana
    Share. Facebook Twitter Pinterest LinkedIn Tumblr WhatsApp Email
    Previous Articleನೃತ್ಯ ವಿಮರ್ಶೆ | ನೃತ್ಯ ಲೋಕದಲ್ಲಿ ‘ಶಾಶ್ವತ’ ಭರವಸೆ ಮೂಡಿಸಿದ ರಂಗ ಪ್ರವೇಶ
    Next Article ಮಳವಳ್ಳಿಯಲ್ಲಿ ರಂಗ ತರಬೇತಿ ಶಿಬಿರ ಮತ್ತು ನಾಟಕ ಪ್ರದರ್ಶನ | ಮಾರ್ಚ್ 03ರಿಂದ ಮೇ 01
    roovari

    Add Comment Cancel Reply


    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರಿಗೆ ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿ ಪ್ರಧಾನ

    May 12, 2025

    ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ವಿಶ್ವಾವಸು ನಾಟಕ ಪ್ರಾರಂಭೋತ್ಸವ | ಮೇ 17 ಮತ್ತು 18

    May 12, 2025

    ಶ್ರೀ ಆಂಜನೇಯ ಮಂತ್ರಾಲಯದಲ್ಲಿ ಪಾಕ್ಷಿಕ ತಾಳಮದ್ದಳೆ

    May 12, 2025

    ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ‘ಅರಿವು’ ಯೋಜನೆಗೆ ಚಾಲನೆ

    May 12, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.