Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ವೀಣಾ ವಾದನ ಗಂಧರ್ವ ಆರ್. ಕೆ. ಸೂರ್ಯನಾರಾಯಣ

    June 14, 2025

    ‘ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್’ ಪ್ರಶಸ್ತಿ ಪ್ರದಾನ ಸಮಾರಂಭ | ಜೂನ್ 22

    June 14, 2025

    ಉದ್ಘಾಟನೆಗೊಂಡ ‘ಯಕ್ಷಾಂತರಂಗ’ದ ಉಚಿತ ಯಕ್ಷಗಾನ ಹೆಜ್ಜೆ ತರಗತಿ

    June 14, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮೈಸೂರಿನಲ್ಲಿ ಮಂಗಳೂರಿನ ಭರತಾಂಜಲಿಯಿಂದ ‘ನೃತ್ಯ ಲಾಲಿತ್ಯ’ | ಅಕ್ಟೋಬರ್ 21ರಂದು
    Bharathanatya

    ಮೈಸೂರಿನಲ್ಲಿ ಮಂಗಳೂರಿನ ಭರತಾಂಜಲಿಯಿಂದ ‘ನೃತ್ಯ ಲಾಲಿತ್ಯ’ | ಅಕ್ಟೋಬರ್ 21ರಂದು

    October 20, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೈಸೂರು : ಮಂಗಳೂರಿನ ‘ಭರತಾಂಜಲಿ’ ಪ್ರಸ್ತುತಪಡಿಸುವ ‘ನೃತ್ಯ ಲಾಲಿತ್ಯ’ ಭರತನಾಟ್ಯ ಕಾರ್ಯಕ್ರಮವು ಮೈಸೂರು ದಸರಾ ಉತ್ಸವದ ಅಂಗವಾಗಿ ದಿನಾಂಕ 21-10-2023ರಂದು ಮೈಸೂರಿನ ಜಗನ್ಮೋಹನ ಪ್ಯಾಲೇಸ್ ಆವರಣದಲ್ಲಿ ನಡೆಯಲಿದೆ. ವಿದುಷಿ ಪ್ರತಿಮಾ ಶ್ರೀಧರ್ ಇವರ ನಿರ್ದೇಶನ ಮತ್ತು ನೃತ್ಯ ಸಂಯೋಜನೆ ಹಾಗೂ ಗುರು ಶ್ರೀಧರ್ ಹೊಳ್ಳ ಇವರ ಸಲಹೆ ಮತ್ತು ಸಹಕಾರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

    ಭಾರತಾಂಜಲಿಯ ನಿರ್ದೇಶಕರ ಬಗ್ಗೆ : 

    ವಿದುಷಿ ಪ್ರತಿಮಾ ಶ್ರೀಧರ್ ಇವರು 6ನೇ ವಯಸ್ಸಿನ ಎಳವೆಯಲ್ಲಿ ಕದ್ರಿಯ ನೃತ್ಯಗುರು ಯು.ಎಸ್. ಕೃಷ್ಣರಾವ್ ಇವರಲ್ಲಿ ನೃತ್ಯಭ್ಯಾಸ ಮಾಡಿ ಮುಂದೆ ಕರ್ನಾಟಕ ಕಲಾಶ್ರೀ ಪುರಸ್ಕೃತೆ ಗುರು ವಿದುಷಿ ಶ್ರೀಮತಿ ಕಮಲಾ ಭಟ್ ಇವರಲ್ಲಿ 17 ವರ್ಷಗಳ ಸತತ ಅಧ್ಯಯನದ ನಡೆಸಿದರು. ಇದರ ಫಲವಾಗಿ ಪ್ರತಿಮಾ ಅವರಿಗೆ 1985-86ರ ಸಾಲಿನ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ರ್ಯಾಂ ಕ್. 1990-91ರಲ್ಲಿ ಸೀನಿಯರ್ ವಿಭಾಗ ಮತ್ತು 1994-95ರಲ್ಲಿ ವಿದ್ವತ್ ಪರೀಕ್ಷೆಯಲ್ಲೂ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವುದು ಇವರ ಕಲಾ ಸಾಧನೆಗೆ ಹಿಡಿದ ಕನ್ನಡಿ. ಪತಿ ವಿದ್ವಾನ್ ಶ್ರೀಧರ ಹೊಳ್ಳ ಇವರ ಪ್ರೋತ್ಸಾಹ ಪ್ರತಿಮಾ ಅವರ ಕಲಾ ಜೀವನದ ಅಭಿವೃದ್ಧಿಗೆ ಕಾರಣವಾಯಿತು.

    ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ, ಗೋ ಸೇವಾ ಪುರಸ್ಕಾರ, ಸಾಧಕ ಪುರಸ್ಕಾರ, ನಾಟ್ಯರಾಣಿ ಪುರಸ್ಕಾರ, ನಾಟ್ಯ ಶಿಕ್ಷಣ ಪುರಸ್ಕಾರ, ನಾಟ್ಯ ಮಯೂರಿ ಪುರಸ್ಕಾರ, ಸಾಧಕ ಪುರಸ್ಕಾರ, ಕಲಾ ಸಿಂಧು ಪುರಸ್ಕಾರ, ಅಭಿನಯ ಚತುರೆ ಪುರಸ್ಕಾರ ಇತ್ಯಾದಿ ಪ್ರಶಸ್ತಿಗಳು ಇವರು ನೃತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗೆ ಸಂದ ಗೌರವ.

    ಭಾರತಾಂಜಲಿಯ ಬಗ್ಗೆ :

    ನಾಟ್ಯ ದಂಪತಿಗಳಿಬ್ಬರೂ ಗುರುಗಳ ಮಾರ್ಗದರ್ಶನ ಹಾಗೂ ಶುಭಾಶೀರ್ವದದೊಂದಿಗೆ 1995ರಲ್ಲಿ ‘ಭಾರತಾಂಜಲಿ’ ಎಂಬ ಕಲಾ ಸಂಸ್ಥೆಯನ್ನು ಸ್ಥಾಪಿಸಿ ಮಂಗಳೂರು ಪರಿಸರದ ವಿವಿಧೆಡೆಗಳಲ್ಲಿ ನೂರಾರು ಮಕ್ಕಳಿಗೆ ಕಳೆದ 28 ವರ್ಷಗಳಿಂದ ನೃತ್ಯ ಶಿಕ್ಷಣವನ್ನು ನೀಡುತ್ತಿದ್ದಾರೆ. ಶ್ರೀ ರಾಮಾಯ ತುಭ್ಯಂ ನಮಃ, ಕೃಷಂ ವಂದೇ ಜಗದ್ಗುರುಂ, ಶ್ರೀ ರಾಮ ಅವತರಣಂ, ಶ್ರೀ ಕೃಷ್ಣ ಪಾರಿಜಾತ, ದಶಾವತಾರ ಇತ್ಯಾದಿ ಇವರು ಸಂಯೋಜಿಸಿದ ನೃತ್ಯ ಬಂಧಗಳು. ಸುಮಾರು 1500ಕ್ಕೂ ಮಿಕ್ಕಿ ಯಶಸ್ವೀ ಪ್ರದರ್ಶನ ಕಂಡ ‘ಪುಣ್ಯ ಕೋಟಿ’ ನೃತ್ಯ ರೂಪಕ ದಂಪತಿಗಳು ಶಾಸ್ತ್ರೀಯ ನೃತ್ಯಕ್ಕೆ ನೀಡಿದ ಪ್ರಾಮಾಣಿಕ ಸೇವೆಯ ಪ್ರತಿಫಲ.

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯ ಆನಂದ ರಾವ್ ಹಾಲ್ ಗ್ಯಾಲರಿಯಲ್ಲಿ ‘ಸಿಂಧೂರ’ ಚಿತ್ರಕಲಾ ಪ್ರದರ್ಶನ | ಅಕ್ಟೋಬರ್ 20ರಿಂದ 24
    Next Article ಉಡುಪಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ‘ಕವಿಗೋಷ್ಠಿ’ | ಅಕ್ಟೋಬರ್ 21ರಂದು
    roovari

    Add Comment Cancel Reply


    Related Posts

    ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಯಕ್ಷಗಾನ ಸಪ್ತಾಹ ಹಾಗೂ ಅಷ್ಟಾವಧಾನ | ಜೂನ್ 15 ರಿಂದ 21

    June 14, 2025

    ಮಂಗಳೂರಿನ ಡಾನ್ ಬೋಸ್ಕೋ ಹಾಲ್ ನಲ್ಲಿ ವಿ. ಹರಿಣಿ ಇವರ ‘ಭರತನಾಟ್ಯ ರಂಗಪ್ರವೇಶ’ | ಜೂನ್ 14

    June 12, 2025

    ಪುತ್ತೂರಿನ ಶಶಿಶಂಕರ ಸಭಾಂಗಣದಲ್ಲಿ ‘ನೃತ್ಯಾಂತರಂಗ 129’ | ಜೂನ್ 07

    June 12, 2025

    ನೃತ್ಯ ಶಂಕರ ಸರಣಿಯ ‘ಶತ ಸಂಭ್ರಮ’

    June 10, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.